ಗ್ರಾಮ ಒನ್ ಕೇಂದ್ರಗಳಿಂದ ಸಾರ್ವಜನಿಕರಿಗೆ ಉತ್ತಮ ಸೇವೆ-ಡಾ. ದಾನಮ್ಮನವರ

KannadaprabhaNewsNetwork |  
Published : Jan 10, 2025, 12:48 AM ISTUpdated : Jan 10, 2025, 12:49 AM IST
9ಎಚ್‌ವಿಆರ್1 | Kannada Prabha

ಸಾರಾಂಶ

ಗ್ರಾಮ ಒನ್ ಯೋಜನೆಯು ಪ್ರಾರಂಭಗೊಂಡು ಮೂರು ವರ್ಷಗಳನ್ನು ಪೂರೈಸಿದೆ. ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸುವುದರಲ್ಲಿ ಗ್ರಾಮ ಒನ್ ಕೇಂದ್ರಗಳು ಮಹತ್ವಪೂರ್ಣ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಹೇಳಿದರು.

ಹಾವೇರಿ: ಗ್ರಾಮ ಒನ್ ಯೋಜನೆಯು ಪ್ರಾರಂಭಗೊಂಡು ಮೂರು ವರ್ಷಗಳನ್ನು ಪೂರೈಸಿದೆ. ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸುವುದರಲ್ಲಿ ಗ್ರಾಮ ಒನ್ ಕೇಂದ್ರಗಳು ಮಹತ್ವಪೂರ್ಣ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಒನ್ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಐಪಿಪಿಬಿ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳು ಕಳೆದ ಮೂರು ವರ್ಷದ ಅವಧಿಯಲ್ಲಿ ಸರ್ಕಾರದ ವಿವಿಧ ಇಲಾಖೆಯ ಸೇವೆಗಳನ್ನು ನೀಡುತ್ತಾ ಬಂದಿವೆ. ಇದರಲ್ಲಿ 80 ಇಲಾಖೆಗಳಿಂದ 874 ಸೇವೆಗಳನ್ನು ಒಳಗೊಂಡಿರುತ್ತದೆ. ಮೂರು ವರ್ಷದ ಅವಧಿಯಲ್ಲಿ ಒಟ್ಟು 22,58,501 ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಿದೆ ಎಂದರು. ಗ್ರಾಮ ಒನ್ ಕೇಂದ್ರಗಳು ಸಾರ್ವಜನಿಕರಿಗೆ ಅತ್ಯಂತ ಸ್ನೇಹಮಹಿಯಾಗಿದ್ದು, ಗ್ರಾಮೀಣ ಭಾಗದ ಕಟ್ಟ ಕಡೆಯ ನಾಗರಿಕರಿಗೂ ಕೂಡ ಸರಕಾರದ ಸೇವೆಗಳನ್ನು ಸ್ಥಳೀಯವಾಗಿ ಒದಗಿಸುವುದರಲ್ಲಿ ಹಾಗೂ ಮನೆ ಮನೆ ಬಾಗಿಲಿಗೆ ತೆರಳಿ ಸೇವೆಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಸರಕಾರದ ಎಲ್ಲ ಸೇವೆಗಳನ್ನು ಒದಗಿಸುತ್ತಿವೆ. ಇದರಿದ ಸಾರ್ವಜನಿಕರ ಸಮಯ ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ಕಾಲಮಿತಿಯೊಳಗೆ ಸೇವೆಗಳನ್ನು ಒದಗಿಸುತ್ತಿದೆ. 2022-23ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳು ಸತತವಾಗಿ 8 ತಿಂಗಳಗಳ ಕಾಲ ನಾಗರಿಕ ಸೇವೆಗಳನ್ನು ಒದಗಿಸಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುವುದು ಗಮನರ್ಹವಾಗಿದೆ ಎಂದರು. ಗ್ರಾಮ ಒನ್ ಕೇಂದ್ರಗಳು ಸಾರ್ವಜನಿಕರಿಗೆ ಒದಗಿಸುತ್ತಿರುವ ಅತ್ಯಂತ ಪ್ರಮುಖ ಸೇವೆಗಳಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (ಬೆಳೆ ವಿಮೆ), ಫ್ರೂಟ್ ಸೇವೆ, ಕಾರ್ಮಿಕ ಇಲಾಖೆ ಸೇವೆ, ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ, ಕಂದಾಯ ಇಲಾಖೆಯ ಸೇವೆ, ಇ -ಸ್ವಾಂಪ್ ಸೇವೆ, ಮಹಿಳಾ ಇಲಾಖೆ ಸೇವೆಗಳು, ಆಹಾರ ಇಲಾಖೆ ಸೇವೆಗಳು,ಸಮಾಜ ಕಲ್ಯಾಣ ಇಲಾಖೆ ಸೇವೆಗಳು,ಆಧಾರ ಸೇವೆ, ಅಂಗವಿಕಲ ಇಲಾಖೆಯ ಸೇವೆಗಳು ಹೀಗೆ ಹಲವಾರು ಸೇವೆಗಳು ಗ್ರಾಮ ಒನ್ ಕೇಂದ್ರಗಳು ಒದಗಿಸುತ್ತಿವೆ ಎಂದರು.ಈಗ ಗ್ರಾಮ ಒನ್ ಕೇಂದ್ರದಲ್ಲಿ ಇಂಡಿಯನ್ ಪೋಸ್ಟ್ ಪೇಮೆಂಟ್ ಸೇವೆಗಳನ್ನು ಪ್ರಾರಂಭಿಸಿದ್ದು, ಇದು ಸಾರ್ವಜನಿಕರಿಗೆ ತಮ್ಮ ದೈನಂದಿನ ನಗದು ವ್ಯವಹಾರಗಳಿಗೆ ಸಹಕಾರಿ ಆಗಲಿದೆ. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಯ ಮೂಲಕ ಸಾರ್ವಜನಿಕರು ಸ್ಥಳೀಯವಾಗಿ ತಮ್ಮ ಆಧಾರ್ ಬೇಸ್ ಅಕೌಂಟ್ ತೆರೆದು ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಬಹುದು ಎಂದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್, ಇಡಿಸಿಎಸ್ ಯೋಜನಾ ನಿರ್ದೇಶಕ ಮದನ ಮೋಹನ, ಇಡಿಸಿಎಸ್ ಉಪ ನಿರ್ದೇಶಕ ಮಹಾವೀರ, ದಿವಾಕರ ಎನ್.ಆರ್., ಜಗದೀಶ್ ಎಸ್. ಚಿಕ್ಕನರಗುಂದ, ಶಿಲ್ಪಾ ಎಸ್., ಗಿರೀಶ ಎಂ.ಎಂ., ಶ್ಯಾಮ ಪ್ರಸಾದ ಆರ್, ಗ್ರಾಮ ಒನ್ ಯೋಜನಾ ವ್ಯವಸ್ಥಾಪಕ ಅರುಣ ಸಿದ್ದಪ್ಪ ಕಾಳಪ್ಪನವರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ