ಭ್ರಮರ ಇಂಚರ ಕಟೀಲು ನುಡಿಹಬ್ಬ: ವಿವಿಧ ಗೋಷ್ಠಿ ಸಂಪನ್ನ

KannadaprabhaNewsNetwork |  
Published : Nov 10, 2025, 02:00 AM IST
ಕಟೀಲು ನುಡಿ ಹಬ್ಬ ವಿವಿಧ ಗೋಷ್ತಿಗಳು | Kannada Prabha

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಸಂಯೋಜನೆಯಲ್ಲಿ ಭ್ರಮರ ಇಂಚರ ನುಡಿಹಬ್ಬದಲ್ಲಿ ವಿವಿಧ ಗೋಷ್ಠಿಗಳು ನಡೆಯಿತು.

ಜನಸಾಮಾನ್ಯ ಸಾಧಕರು, ಸಂಗೀತ ಸ್ವಾದ, ಪ್ರಕೃತಿ ಸಂಸ್ಕೃತಿ ಗೋಷ್ಠಿ

ಕನ್ನಡಪ್ರಭ ವಾರ್ತೆ ಮೂಲ್ಕಿ

ದೇಸೀ ದನದ ಹಾಲು, ಗೋಮೂತ್ರ ಹಾಗೂ ಸೆಗಣಿ ಎಲ್ಲವೂ ಆರೋಗ್ಯಕ್ಕೂ, ಕೃಷಿಗೂ, ಆದಾಯಕ್ಕೂ ಪೂರಕವಾಗಿವೆ. ದೇಸೀ ಗವ್ಯ ಉತ್ಪನ್ನ ಹಾಗೂ ಗೋ ಆಧಾರಿತ ಕೃಷಿಯಿಂದ ಯಶಸ್ಸನ್ನು ಕಂಡುಕೊಂಡಿದ್ದೇನೆ ಎಂದು ನಾಗರಾಜ ಪೈ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಸಂಯೋಜನೆಯಲ್ಲಿ ಭ್ರಮರ ಇಂಚರ ನುಡಿಹಬ್ಬದಲ್ಲಿ ಜನಸಾಮಾನ್ಯ ಸಾಧಕರು ಗೋಷ್ಠಿಯಲ್ಲಿ ತನ್ನ ಯಶಸ್ಸಿನ ಕುರಿತು ಅವರು ಮಾತನಾಡಿದರು.

ಲಕ್ಷಾಂತರ ಗಿಡಗಳನ್ನು ಹಂಚಿ, ನೆಟ್ಟಿರುವ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮಾತನಾಡಿ, ಗಿಡಗಳನ್ನು ನೆಟ್ಟು ಮರಗಳನ್ನಾಗಿಸಿ ಪರಿಸರವನ್ನು ತಂಪಾಗಿಸಿಡೋಣ. ವಿಶ್ವದ ಎಲ್ಲ ದೇಶಗಳೂ ಇವತ್ತು ಭೂಮಿಯ ಬಿಸಿ, ಹವಾಮಾನದ ಬದಲಾವಣೆ ಬಗ್ಗೆ ಚಿಂತಿಸುವಂತಾಗಿದೆ. ಈ ಬಗ್ಗೆ ಜಾಗೃತಿ ಬೇಕು ಎಂದು ಹೇಳಿದರು.

ವಿಕಲಾಂಗನಾದರೂ ಚಿತ್ರಕಲಾವಿದನಾಗಿ ಸಾಧನೆಗೈದ ಗಣೇಶ ಪಂಜಿಮಾರು ಮಾತನಾಡಿ, ಏನೂ ಮಾಡದೆ ಸುಮ್ಮನೆ ಇದ್ದರೆ ಏನೂ ಆಗುವುದಿಲ್ಲ. ನನ್ನ ಮನೆಯಲ್ಲಿ ಇದ್ದ ಗೋಡೆ ಗಡಿಯಾರ ಹಾಳಾಗಿತ್ತು. ಅದರಲ್ಲಿ ಕೃಷ್ಣನ ಚಿತ್ರ ಬಿಡಿಸಿದೆ. ಒಳ್ಳೆಯ ಬೆಲೆಗೆ ಮಾರಾಟವಾಯಿತು. ಬಳಸಿದರೆ ಕಸವೂ ರಸವಾಗುತ್ತದೆ. ಇಲ್ಲದಿದ್ದರೆ ನಾವೂ ಕಸದಿಂದ ಮೂಲೆ ಸೇರುತ್ತೇವೆ ಎಂದರು.

ವಿಕಲಾಂಗೆ ಆದರೂ ಕಲಾಕೃತಿಗಳ ಮೂಲಕ ಸಾಧನೆಗೈದ ಸುಮಂಗಳಾ ಪಂಜಿಮಾರು, ಖ್ಯಾತ ಟ್ಯೂಬರ್ ಯಾಸೀರ್ ಯಾಚಿ ಮಾತನಾಡಿದರು.

ಸಮ್ಮೇಳನಾಧ್ಯಕ್ಷ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ನಮ್ಮ ದೌರ್ಬಲ್ಯವನ್ನು ಯೋಚಿಸದೆ, ನಮ್ಮೊಳಗಿನ ಶಕ್ತಿಯನ್ನು ಯೋಚನೆ ಮಾಡಿ ಯಶಸ್ಸು ಪಡೆಯಲು ಸಾಧ್ಯ. ನಾವೇನು ಅನ್ನುವುದನ್ನು ತಿಳಿದುಕೊಂಡು ನಮ್ಮಲ್ಲಿನ ಶಕ್ತಿ ಸಾಮರ್ಥ್ಯವನ್ನು ಹಾಗೂ ದೌರ್ಬಲ್ಯಗಳನ್ನು ಗುರುತಿಸಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕು, ವ್ಯಕ್ತಿತ್ವ ವಿಕಾಸಕ್ಕೆ ಇದು ಸಾಧ್ಯವೆಂದು ಹೇಳಿದರು.

ನುಡಿಹಬ್ಬದಲ್ಲಿ ಸಂಗೀತ ಸ್ವಾದ ಗೋಷ್ಟಿಯಲ್ಲಿ ವಿದ್ವಾಂಸ ಅರವಿಂದ ಹೆಬ್ಬಾರ್ ಮಾತನಾಡಿದರು.

ಕಟೀಲು ವಿದ್ಯಾಸಂಸ್ಥೆಗಳ ಹಳೆವಿದ್ಯಾರ್ಥಿಗಳಾದ ಜೋತ್ಸ್ನಾ ನಿಡ್ಡೋಡಿ, ಅಭಿಷೇಕ್ ಕೊಲ್ನಾಡ್, ಉಷಾ ಕಟೀಲು, ದಯಾವತಿ ಮಂಗಳೂರು ವೇದಿಕೆಯಲ್ಲಿದ್ದರು.ನೈಸರ್ಗಿಕ ನಾಗಬನಗಳನ್ನು ಉಳಿಸಿ: ಗುರುರಾಜ ಸನಿಲ್

ನುಡಿಹಬ್ಬದಲ್ಲಿ ಪ್ರಕೃತಿ ಸಂಸ್ಕೃತಿ ಬಗ್ಗೆ ಮಾತನಾಡಿದ ಉರಗತಜ್ಞ, ಸಾಹಿತಿ ಗುರುರಾಜ ಸನಿಲ್‌, 30-40 ಪ್ರಬೇಧಗಳಿರುವ ಗಿಡಗಳು, ಆಯುರ್ವೇದ ಗಿಡಗಳು, ಹಾವುಗಳು, ಪಕ್ಷಿಗಳು, ಪ್ರಾಣಿಗಳು ಇರುವ ನೈಸರ್ಗಿಕ ನಾಗಬನಗಳನ್ನು ಉಳಿಸುವ ಪ್ರಯತ್ನ ಮಾಡೋಣ. ಪಶ್ಚಿಮ ಘಟ್ಟದ ಒಂದು ತುಣುಕು ನಮ್ಮ ಒಂದು ನಾಗಬನ, ದೇವರಕಾಡುಗಳಲ್ಲಿ ಇದೆ. ಇದನ್ನು ಉಳಿಸಬೇಕಾಗಿದೆ. ಪ್ರಕೃತಿಯನ್ನು ಉಳಿಸಿದಾಗ ಜೀವಿಗಳು ಅಲ್ಲೇ ಇರುತ್ತವೆ. ನಾಗಾರಾಧನೆ ಮಾಡೋಣ. ಆದರೆ ಮೂಢನಂಬಿಕೆ ಬೇಡ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ