ಹಿರೇಕೆರೂರು: ವಿಶ್ವ ಪರಿಸರ ದಿನವು ಹವಾಮಾನ ಬದಲಾವಣೆ, ಮಾಲಿನ್ಯ, ಅರಣ್ಯನಾಶ ಮತ್ತು ಜೀವ ವೈವಿಧ್ಯದ ನಷ್ಟದಂತಹ ಪರಿಸರದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದಿನವಾಗಿದೆ ಎಂದು ಸಿಇಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ತಿಳಿಸಿದರು.ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ತಂಬಾಕದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ, ರಸಾಯನಶಾಸ್ತ್ರ, ಭೂಗೋಳಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕರಾದ ಸಿ.ಆರ್. ದೂದಿಹಳ್ಳಿ, ಕೀರ್ತಿವರ್ಮ ಕಾರಗಿ, ಸಾವಿತ್ರಮ್ಮ ಬಿ., ಲಿಂಗರಾಜ ಹಲವಾಲ, ವಿರುಪಾಕ್ಷಪ್ಪ ಎಸ್.ಕೆ., ಸತೀಶ ಲಮಾಣಿ, ಶಶಿಕುಮಾರ ಕಡೂರ, ಪ್ರವೀಣ ಅಂಗಡಿ ಇತರರು ಇದ್ದರು. ಉಪನ್ಯಾಸಕ ಆರ್.ಎಫ್. ದೊಡ್ಡಮನಿ ಸ್ವಾಗತಿಸಿದರು. ಲಿಂಗರಾಜ ಎಚ್. ವಂದಿಸಿದರು. ಹುಟ್ಟಿನಿಂದ ಸಾಯುವ ವರೆಗೂ ಕಾನೂನು ಅವಶ್ಯ: ಸುಭಾಸ ಸಾವುಕಾರ
ರಾಣಿಬೆನ್ನೂರು: ಹುಟ್ಟಿನಿಂದ ಸಾಯುವ ವರೆಗೂ ಕಾನೂನಿನ ಅವಶ್ಯಕತೆಯಿದ್ದು, ಕಾನೂನು ವೃತ್ತಿಯಲ್ಲಿ ತಾಳ್ಮೆ, ಜಾಣ್ಮೆಯ ಅವಶ್ಯಕತೆಯಿದೆ ಎಂದು ಆರ್ಟಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವುಕಾರ ತಿಳಿಸಿದರು.ನಗರದ ಆರ್ಟಿಇಎಸ್ ಕಾನೂನು ಮಹಾವಿದ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ 2024- 25ನೇ ಸಾಲಿನ ತೃತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಆರ್ಟಿಇಎಸ್ ಪದವಿ ಕಾಲೇಜಿನ ಪ್ರಾ. ಸಿ.ಎ. ಹರಿಹರ ಮಾತನಾಡಿ, ಕಾನೂನು ವೃತ್ತಿ ಕೈಗೊಳ್ಳುವವರು ನಡವಳಿಕೆ, ನಂಬಿಕೆ, ಬದ್ಧತೆಯನ್ನು ಅಳವಡಿಸಿಕೊಳ್ಳುವುದು ಅತ್ಯಾವಶ್ಯಕ. ಕಷ್ಟ ಮತ್ತು ಸಮಸ್ಯೆಗಳಿಗೆ ದುಡಿಮೆ ಹಾಗೂ ತಾಳ್ಮೆ ಪರಿಹಾರವಾಗಿದೆ ಎಂದರು.
ಪ್ರಾ. ಬಿ. ರಮೇಶ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಬಿ.ಆರ್. ರುದ್ರೇಶ, ಶುಭಾಂಗಿ ದೇಶಪಾಂಡೆ, ರೇಣುಕಾ ಮರಡೂರ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೀತಾ ಕೋಟಿ ಮಾತನಾಡಿದರು.ಬಸವರಾಜ ಪಿ., ಸೌಜನ್ಯ, ಬಸವನಗೌಡ ಮೇಳಗಟ್ಟಿ, ಸುನೀಲಕುಮಾರ ಬೆಂದ್ರೆ, ವಿನಯ್ ಹುಲ್ಲತ್ತಿ, ಸತೀಶ, ಸುಧಾ, ಬಸವರಾಜ ಎಸ್., ನಂದೀಶ, ವೀರೇಶ, ಅಜೇಯ ಕೊಡ್ಲೆರ, ಸಂತೋಷ, ಆನಂದ ಬಡಿಗೇರ, ಎಂ.ಕೆ. ಕಮದೋಡ, ವಿಜಯಲಕ್ಷ್ಮಿ, ಅಕ್ಷತಾ ಸೊಪ್ಪಿನ, ಅರುಣ ಬಣಕಾರ, ಕೃತಿ ಎಂ.ಕೆ., ಸುಮಾ ಜಿ.ಜಿ., ಮಹಾವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.