ತಂತಿ ಬೇಲಿಗೆ ಸಿಲುಕಿ ಕಾಡೆಮ್ಮೆ ಸಾವು

KannadaprabhaNewsNetwork |  
Published : May 12, 2026, 01:45 AM IST
ಫೋಟೋ 11 ಟಿಟಿಎಚ್ 22: ತಂತಿ ಬೇಲಿಗೆ ಸಿಕ್ಕಿ ಸಾವನ್ನಪ್ಪಿರುವ ಕಾಡೆಮ್ಮೆ | Kannada Prabha

ಸಾರಾಂಶ

ತಂತಿ ಬೇಲಿ ಹಾರುವಾಗ ಆಯತಪ್ಪಿ ಬಿದ್ದ ಸುಮಾರು ಎಂಟು ವರ್ಷದ ಕಾಡೆಮ್ಮೆಯೊಂದು ಮೃತಪಟ್ಟ ಘಟನೆ ತಾಲೂಕಿನ ತಿರಳೇಬೈಲು ಗ್ರಾಮದಲ್ಲಿ ಭಾನುವಾರ ನಡೆದಿದೆ.

ತೀರ್ಥಹಳ್ಳಿ: ತಂತಿ ಬೇಲಿ ಹಾರುವಾಗ ಆಯತಪ್ಪಿ ಬಿದ್ದ ಸುಮಾರು ಎಂಟು ವರ್ಷದ ಕಾಡೆಮ್ಮೆಯೊಂದು ಮೃತಪಟ್ಟ ಘಟನೆ ತಾಲೂಕಿನ ತಿರಳೇಬೈಲು ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೇವು ಅರಸಿ ರಾತ್ರಿ ವೇಳೆ ಅಡಿಕೆ ತೋಟದ ಸಮೀಪಕ್ಕೆ ಬಂದಿದ್ದ ಕಾಡೆಮ್ಮೆ, ಬೆಳಗಿನ ಜಾವದವರೆಗೆ ತೋಟದಲ್ಲೇ ವಿಶ್ರಾಂತಿ ಪಡೆದಿತ್ತು. ಬೆಳಗ್ಗೆ ಮಾಲೀಕ ತೋಟಕ್ಕೆ ಬಂದಿದ್ದನ್ನು ಕಂಡು ಕಾಡೆಮ್ಮೆ ಓಡಲು ಯತ್ನಿಸಿದೆ. ಈ ವೇಳೆ ತೋಟದ ತಂತಿ ಬೇಲಿ ಹಾರುವಾಗ ಆಯತಪ್ಪಿ ಬಿದ್ದಿದೆ. ಹೊಟ್ಟೆ ಭಾಗಕ್ಕೆ ಪೆಟ್ಟು: ಬೇಲಿ ಹಾರುವಾಗ ಕಾಡೆಮ್ಮೆಯ ಹೊಟ್ಟೆಯ ಭಾಗದ ಸ್ನಾಯುಗಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ನೆಲಕ್ಕೆ ಬಿದ್ದ ಕಾಡೆಮ್ಮೆ ಎದ್ದು ನಿಲ್ಲಲಾಗದೆ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಗೊಂಡಿದ್ದ ಕಾಡೆಮ್ಮೆಗೆ ಹುಲ್ಲು, ನೀರು ಹಾಗೂ ಆಹಾರ ನೀಡಿ ಆರೈಕೆ ಮಾಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಮೃತಪಟ್ಟಿದೆ.

ಸೋಮವಾರ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಬಳಿಕ ನಿಯಮಾನುಸಾರ ಅವಕಾಶವಿದ್ದರೆ ಮೃತದೇಹವನ್ನು ಸುಡಲಾಗುವುದು. ಇಲ್ಲವೇ ಉಪ ವಲಯ ಸಂರಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಅದರ ಕೋಡುಗಳನ್ನು ನಾಶಪಡಿಸಿ, 10 ಅಡಿ ಆಳದ ಗುಂಡಿಯಲ್ಲಿ ಹೂತು ಹಾಕಲಾಗುವುದು ಎಂದು

ತೀರ್ಥಹಳ್ಳಿ ವಲಯ ಅರಣ್ಯ ಅಧಿಕಾರಿ ಸಂಜಯ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೇರುಕುಪ್ಪೆ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟನೆ
ಬೇಲೂರು ಪುರಸಭೆ ಅಧ್ಯಕ್ಷರಾಗಿ ಅಕ್ರಮ್ ಶರೀಫ್ ಆಯ್ಕೆ