- ಗ್ಯಾರಂಟಿಗೆ ಹಣ ನೀಡದಂತೆ ಚುನಾವಣಾ ಆಯೋಗಕ್ಕೆ ಪತ್ರ, ನ್ಯಾಯಾಲಯಕ್ಕೆ ದೂರು ಕೊಟ್ಟ ಬಿಜೆಪಿ: ಆರೋಪ - - -
ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಟೀಕೆ ಮಾಡಿದವರೆ ಇಂದು ಚುನಾವಣೆಗಳಲ್ಲಿ ಅವುಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುತ್ತಿರುವ ವೇಳೆಯಲ್ಲಿ ಗ್ಯಾರಂಟಿಗಳಿಗೆ ಹಣ ಬಿಡುಗಡೆ ಮಾಡದಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ ಬರೆದಿದೆ, ದೂರು ನೀಡಿದೆ. ಇದರೊಂದಿಗೆ ಬಿಜೆಪಿ ಮುಖವಾಡ ಕಳಚಿದೆ ಎಂದರು.ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ದೊಡ್ಡ ಷಡ್ಯಂತ್ರ ಮಾಡುತ್ತಿದ್ದಾರೆ. ನಾವು ಕಾನೂನಿನಡಿ ಕೆಲಸ ಮಾಡುತ್ತಿದ್ದೇವೆ. ಕಳೆದ ತಿಂಗಳಿನದ್ದು, ಈ ತಿಂಗಳಿನಲ್ಲಿ ಹಣ ನೀಡಬಾರದೆಂದು ಕೋರ್ಟ್ಗೆ ಹಾಕಿದ್ದು ಖಂಡನೀಯ. ಇದು ರೆಗ್ಯುಲರ್ ಸ್ಕೀಂ ಆಗಿದ್ದು, ಎಲ್ಲರಿಗೂ ಹಣ ತಲುಪಿದೆ. ಜನರಲ್ಲಿ ಆತಂಕ ಮೂಡಿಸಿ, ಭಯದ ವಾತಾವರಣ ಉಂಟು ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುಮಾರು 1 ಕೋಟಿಗೂ ಅಧಿಕ ಫಲಾನುಭವಿಗಳು ಬಿಜೆಪಿ ವರ್ತನೆಯನ್ನು ಅರಿಯಬೇಕು. ಬಿಜೆಪಿಯ ನಿಜವಾದ ಮುಖವಾಡ ಜನರಿಗೆ ತಿಳಿಸಬೇಕು. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ಅತಿ ಹೆಚ್ಚು ಮತದಾನ ಮಾಡುವ ಮೂಲಕ ಬಿಜೆಪಿ ತಕ್ಕ ಪಾಠ ಕಲಿಸಬೇಕು. ಇಲ್ಲಿ ದಕ್ಷಿಣದಲ್ಲಿ ಸಮರ್ಥ ಶಾಮನೂರು ಹಾಗೂ ಬಾಗಲಕೋಟೆಯಲ್ಲಿ ಉಮೇಶ ಮೇಟಿಗೆ ಗೆಲ್ಲಿಸಬೇಕು ಎಂದು ಡಿ.ಕೆ. ಶಿವಕುಮಾರ ಮನವಿ ಮಾಡಿದರು.
- - -
* ಉಪ ಚುನಾವಣೆಯಲ್ಲಿ ಸಮರ್ಥ, ಉಮೇಶ ಗೆದ್ದೇ ಗೆಲ್ತಾರೆ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲೂ ಶಾಂತಿಯುತ ಪ್ರಚಾರವಾಗಿದೆ. ಎಲ್ಲ ಪಕ್ಷಗಳಿಗೂ ಧನ್ಯವಾದಗಳನ್ನು ಹೇಳುತ್ತೇನೆ. ನಾನು, ಸಿಎಂ ವಿಧಾನಸಭೆ ನಡೆಯುವಾಗ ಸಮರ್ಥ ಶಾಮನೂರು ಹಾಗೂ ಉಮೇಶ ಮೇಟಿ ನಾಮಪತ್ರ ಸಲ್ಲಿಕೆಗೆ ಬಂದಿದ್ದೆವು ಎಂದರು.
ಶಾಮನೂರು ಅವರ ಜೊತೆಗೆ ಸಂಪುಟದಲ್ಲೂ ನಾನು ಕೆಲಸ ಮಾಡಿದ್ದೇನೆ. ಎಲ್ಲ ಸಮಾಜಕ್ಕೂ ಕಚೇರಿಗೆ ಜಾಗ ಕೊಡಿಸಿದ್ದಾರೆ. ಎಲ್ಲ ಧರ್ಮಗಳ ದೇವಸ್ಥಾನ, ಈದ್ಗಾ, ದರ್ಗಾಗಳಿಗೆ ದಾನ ಮಾಡಿದ್ದಾರೆ. ನಾನೂ ಕ್ಷೇತ್ರದಲ್ಲೇ ಸರ್ವೇ ಮಾಡಿಸಿದ್ದು, ಸುಮಾರು 1 ಲಕ್ಷ ಜನರ ಸರ್ವೇ ಮಾಡಿಸಿದ್ದೇನೆ. ಶಿಕ್ಷಣ, ಆರೋಗ್ಯ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಕೆಲಸವನ್ನು ಶಾಮನೂರು ಕುಟುಂಬ ಮಾಡಿದೆ. ಇದನ್ನು ಇಂದಿಗೂ ಜನರು ಸ್ಮರಿಸುತ್ತಿದ್ದಾರೆ. ಶಾಮನೂರು ಕೊಡುಗೆಯನ್ನು ಅಭಿಮಾನದಿಂದ ಜನ ನನೆಯುತ್ತಾರೆ ಎಂದು ಅವರು ಹೇಳಿದರು.
- - -
(ಟಾಪ್ ಕೋಟ್) ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಕೊಟ್ಟ ಮಾತಿನಂತೆ ನಡೆದಿಲ್ಲ ಅಂತಾ ಎಲ್ಲೋ ಭಾಷಣ ಮಾಡಿದ್ದು ಓದಿದ್ದೇನೆ. ಆದರೆ, ನಾವು ಘೋಷಿಸಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನುಡಿದಂತೆ ನಡೆದಿದ್ದೇವೆ. - ಡಿ.ಕೆ.ಶಿವಕುಮಾರ, ಉಪ ಮುಖ್ಯಮಂತ್ರಿ.- - -
(-ಫೋಟೋಗಳಿವೆ)