ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮೈಸೂರಿನಿಂದ ಕಾರ್ಯನಿಮಿತ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಹಿಂದು ಧರ್ಮದ ಗೆಲುವು. ಮಹನೀಯರು, ಸಂತರು ಜನಿಸಿದ ನಾಡಿನಲ್ಲಿ ಇಂದು ಧರ್ಮ ಸ್ಥಾಪನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮೂಡಲ ಬಾಗಿಲು ಹನುಮಾನ್ ಸಮಿತಿ ಪ್ರಮುಖ ಚಂದನ್ ಮಾತನಾಡಿ, ಕಾಳಿ ಮಾತೆ ನೆಲೆಸಿದ ನಾಡಿನಲ್ಲಿ ಹಿಂದೂ ಧರ್ಮಕ್ಕೆ ಜಯ ಸಿಕ್ಕಿದೆ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯಕ್ಕೆ ಮುಕ್ತಿ ಸಿಕ್ಕಿದ್ದು ಸಂತಸದ ವಿಚಾರ ಎಂದರು.ಈ ವೇಳೆ ಶ್ರೀರಂಗಪಟ್ಟಣ ನಗರ ಕಾರ್ಯಕರ್ತರಾದ ಗಿರೀಶ್, ಶಿವು, ಶರತ್ ಹರ್ಷ, ಸನತ್ ಶಂಕರ್, ಲಕ್ಷ್ಮೀನಾರಾಯಣ, ಶ್ರೀನಿವಾಸ್, ರಾಜು, ರವಿ ಸೇರಿ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
5ಕೆಎಂಎನ್ ಡಿ22