ಕನ್ನಡಪ್ರಭ ವಾರ್ತೆ ವಿಜಯಪುರ
ವಿಷಯ ಮಂಡನೆಗೆ ಹಲವು ಬಾರಿ ನಾವು ಹೇಳಿದ್ದೇವೆ. ವ್ಯಕ್ತಿಯ ವಿಷಯ ಇಟ್ಟುಕೊಂಡು ತೇಜೋವಧೆ ಮಾಡುವ ಕೆಲಸ ಮಾಡುತ್ತಿದೆ. ನಾಗೇಂದ್ರರನ್ನು ಈಗಾಗಲೇ ಲೋಕಾಯುಕ್ತ ಆರೋಪ ಮುಕ್ತಗೊಳಿಸಿದೆ. ಇವರ ಬಳಿ ಏನಾದ್ರೂ ಹೆಚ್ಚಿನ ಮಾಹಿತಿ ಇದ್ದರೆ ವಿಷಯ ಮಂಡನೆ ಮಾಡಬೇಕು. ವಿಷಯ ಮಂಡಿಸಿ ಚರ್ಚೆ ನಡೆಸಬೇಕು, ಆದರೆ ಒಂದು ವಾರದಿಂದ ಬಿಜೆಪಿ ಕಾಲಹರಣ ಮಾಡಿದೆ ಎಂದು ಆರೋಪಿಸಿದರು. ವಿರೋಧ ಪಕ್ಷಕ್ಕೆ ಭಗವಂತ ಸದ್ಬುದ್ಧಿ ಕೊಡಲಿ, ಬರಗಾಲ, ಅತಿವೃಷ್ಟಿ ಕುರಿತು ಚರ್ಚೆ ಮಾಡುವ ಬುದ್ಧಿ ಕೊಡಲಿ ಎಂದು ಬಿಜೆಪಿ ಹೋರಾಟಕ್ಕೆ ಟಾಂಗ್ ಕೊಟ್ಟರು.
ನಾನು ನನ್ನ 25 ವರ್ಷದ ರಾಜಕೀಯದಲ್ಲಿ ಜಾತ್ಯತೀತವಾಗಿ ನಡೆದುಕೊಂಡು ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಸಹಕಾರ ಇಲಾಖೆ ನೀಡಿದ್ದು, ರಾಜ್ಯದಲ್ಲಿ ಸಹಕಾರಿ ಇಲಾಖೆಯನ್ನು ಇನ್ನಷ್ಟು ಬಲಪಡಿಸುತ್ತೇನೆ. ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಸಚಿವಾಲಯ ಮಾಡಿದ್ದು, ಇದುವರೆಗೂ ವಿಶೇಷ ಯೋಜನೆಗಳು ಯಾವುದೂ ಬಂದಿಲ್ಲ. ರಾಜ್ಯದಲ್ಲಿ ಬರವಿದ್ದು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಗಳು ವರದಿ ಕೊಡಬೇಕಿದೆ. ಹಾಗಾಗಿ ಮೂರು ಇಲಾಖೆಗಳು ಸರ್ಕಾರಕ್ಕೆ ವರದಿ ಕೊಟ್ಟಮೇಲೆ ಸಾಲಮನ್ನಾ ಕುರಿತು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ಚರ್ಚಿಸಿ ತೀರ್ಮಾನಿಸಲಿದ್ದಾರೆ. ಬಹಳ ದಿನಗಳಿಂದ ಮೋಡ ಬಿತ್ತನೆ ಆಗಬೇಕು ಎಂಬುದು ರೈತರ ಬೇಡಿಕೆಯಾಗಿದ್ದು, ಅದನ್ನು ಸಿಎಂ ತೀರ್ಮಾನಿಸುತ್ತಾರೆ ಎಂದು ಹೇಳಿದರು.ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಮಾಜಿ ಶಾಸಕ ಮನೋಹರ ಐನಾಪುರ, ಮುಖಂಡರಾದ ಅಬ್ದುಲರಜಾಕ್ ಹೊರ್ತಿ, ವಸಂತ ಹೊನಮೊಡೆ, ಇತರರು ಇದ್ದರು.