ಕನ್ನಡಪ್ರಭ ವಾರ್ತೆ ಸಂಕೇಶ್ವರ
ಪಟ್ಟಣದ ಕೃ಼ಷ್ಣ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಸಂಭ್ರಮದಿಂದ ಜರುಗಿದ ಚರಕ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚರಕ ಸಂಹಿತೆಯು ಬರೀ ರೋಗೋಪಶಮನದ ಔಷಧೀಯ ಕೈಪಿಡಿಯಲ್ಲ. ಬದಲಿಗೆ ಅದೊಂದು ರೋಗಬಾರದಂತೆ ತಡೆಯುವ ಉನ್ನತ ಜೀವನಶೈಲಿ ವಿಜ್ಞಾನ. ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಯುವ ವಿದ್ಯಾರ್ಥಿಗಳು ಈ ಮಹಾನ್ ಗ್ರಂಥದ ಆಳವಾದ ಅಧ್ಯಯನ ನಡೆಸಬೇಕು. ಪ್ರಾಚೀನ ಸಿದ್ಧಾಂತಗಳನ್ನು ಆಧುನಿಕ ಸಂಶೋಧನೆ ಹಾಗೂ ತಂತ್ರಜ್ಞಾನದೊಂದಿಗೆ ಮೇಳೈಸಿ ರೋಗಿಗಳಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ವಿಶೇಷ ಆಕಷರ್ಣೆಯಾಗಿ ಕಾಲೇಜಿನ ವಿವಿಧ ವರ್ಷಗಳ ವಿದ್ಯಾರ್ಥಿಗಳಿಗೆ ಆಯುರ್ವೇದ ತತ್ವಗಳು ಹಾಗೂ ಚರಕ ಸಂಹಿತೆಯ ವಿಷಯಗಳನ್ನಾಧರಿಸಿದ ಪಾತ್ರಾಭಿನಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಅತ್ಯಂತ ಕಲಾತ್ಮಕವಾಗಿ ಶಾಸ್ತ್ರೀಯ ಚಿಂತನೆಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಈ ಸ್ಪರ್ಧೆಗೆ ಡಾ.ವಿಕಾಸ್ ಔತಾಡ್, ಡಾ.ಅದಿತಿ ಕುಲಕರ್ಣಿ ಮತ್ತು ಡಾ.ಚಂದುಮೂರ್ತಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.ಆರಂಭದಲ್ಲಿ ಧನ್ವಂತರಿ ಹಾಗೂ ಚರಕ ಸಂಹಿತೆಗೆ ವಿಶೇಷ ಪೂಜೆ ನೆರವೇರಿಸಿ, ಚರಕ ವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಸಂತೋಷ ಎಸ್.ಖಜ್ಜನವರ, ಪ್ರಾಂಶುಪಾಲ ಡಾ.ಮಂಜುನಾಥ ಎಸ್. ಗವಿಮಠ, ಅಕಾಡೆಮಿಕ್ ಸಂಯೋಜಕಿ ಡಾ.ಮೋನಿಕಾ ಪಾಟೀಲ, ಕೌನ್ಸಿಲ್ ಅಧ್ಯಕ್ಷ ಡಾ.ವಿಕಾಸ್ ಔತಾಡ್, ಉಪನ್ಯಾಸಕರಾದ ಡಾ. ಶೈಲೇಂದ್ರ ಚರಂತಿಮಠ, ಡಾ. ಅಜಿತ್ ಬಡಮಲ್ಲನವರ, ಶಿವಪಾದ ಜೋಶಿ ಸೇರಿದಂತೆ ಹಲವು ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.
ಕೋಟ್....
- ಡಾ.ಜಯಪ್ರಕಾಶ ಎನ್. ಕರಜಗಿ, ಅಧ್ಯಕ್ಷ, ಕೃಷ್ಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ