ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರು ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಮೌನ ಮೆರವಣಿಗೆ ಮಾಡಿಕೊಂಡು ಬಂದು ನಂತರ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಬಿ.ಎನ್.ಕೃಷ್ಣೇಗೌಡ ಮಾತನಾಡಿ, 1947 ಆಗಸ್ಟ್ 8ರಂದು ನಮ್ಮ ರಾಷ್ಟ್ರ ನಾಯಕರು ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂದು ದೇಶವನ್ನು ವಿಭಜನೆ ಮಾಡಿದರು ಎಂದರು.
ಇಂತಹ ದುರಂತ ತಂದಿಟ್ಟ ದಿನ ಅಂಗವಾಗಿ ಇಂದು ನಮ್ಮ ರಾಷ್ಟ್ರೀಯ ನಾಯಕರು ದೇಶಾದ್ಯಂತ ಈ ದಿನವನ್ನು ವಿಭಜನೆ ವಿಭೀಷಣ ಸ್ಮೃತಿ ದಿನವೆಂದು ಆಚರಿಸಬೇಕೆಂದು ಆದೇಶ ಮಾಡಿದ್ದರಿಂದ ನಾವು ವಿಭಜನೆ ಖಂಡಿಸಿ ಮೌನ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದೇವೆ ಎಂದರು.ವಿಭಜನೆ ವಿಭೀಷಣ ಕಾರ್ಯಕ್ರಮದ ನೇತೃತ್ವವನ್ನು ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಬಿ.ಎನ್.ಕೃಷ್ಣೇಗೌಡ ವಹಿಸಿದ್ದರು. ಮಂಡಲದ ಅಧ್ಯಕ್ಷ ಎಂ.ಎನ್.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಾಗೇಶ್, ಕರೀಗೌಡ, ಉಪಾಧ್ಯಕ್ಷ ಎನ್.ಕೆ.ಕುಮಾರ್ ಆನಂದ್ ,ಅಂಜನ್, ಶಕ್ತಿ ಕೇಂದ್ರದ ಅಧ್ಯಕ್ಷ ಮೋದಿ ರವಿ, ರೈತ ಮೋರ್ಚ ಶಶಿಕುಮಾರ್, ಅಭಿಜಿತ್, ಕಿಶೋರ್, ಶಿವಲಿಂಗಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ