ಕನ್ನಡಪ್ರಭ ವಾರ್ತೆ ಕಾರವಾರ
ಮುಖ್ಯ ಅತಿಥಿಗಳಾಗಿ ಹಿರಿಯ ರಕ್ತದಾನಿ ಹಾಗೂ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಶಿವಾನಂದ ಶಾನಭಾಗ, ಕಾರವಾರ ಬಂದರು ಆಡಳಿತಾಧಿಕಾರಿ ಸುರೇಶ ಶೆಟ್ಟಿ, ನಗರದ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಜಗದೀಶ ಬಿರ್ಕೋಡಿಕರ, ಪತಂಜಲಿ ಯೋಗ ಪೀಠದ ಜಿಲ್ಲಾ ಸಂಚಾಲಕ ಶ್ರೀನಾಥ ಗೌಡ ಹಾಗೂ ಎಲ್.ಐ.ಸಿ. ಅಧಿಕಾರಿ ಸಚಿನ್ ನಾಯ್ಕ ಅಂಕೋಲಾ ಉಪಸ್ಥಿತರಿದ್ದರು.
ಚೇತನ ಮಾಳ್ಸೇಕರ ಬಿಣಗಾ ಹಾಡಿದ ಭಕ್ತಿಗೀತೆ ಹಾಗೂ ದೇಶಭಕ್ತಿ ಗೀತೆಯ ಸುಶ್ರಾವ್ಯ ಗಾಯನದ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.ಬ್ಲಡ್ ಡೋನರ್ಸ್ ಕಾರವಾರ ತಂಡದ ಸಂಸ್ಥಾಪಕ ವಿನಾಯಕ ನಾಯ್ಕ ಪ್ರಾಸ್ತಾವಿಕ ನುಡಿಯಾಡಿ ಕಳೆದ 10 ವರ್ಷಗಳಲ್ಲಿ ತಂಡ ನಡೆದು ಬಂದ ದಾರಿ ಹಾಗೂ ಸೇವಾ ಉದ್ದೇಶಗಳನ್ನು ನೆರೆದಿದ್ದವರಿಗೆ ವಿವರಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತ ಒದಗಿಸಿಕೊಡುವ ಮೂಲಕ ನಿರಂತರವಾಗಿ ಜೀವ ಉಳಿಸುತ್ತಿರುವ ಬ್ಲಡ್ ಡೋನರ್ಸ್ ಕಾರವಾರ ತಂಡದ 10 ವರ್ಷಗಳ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಮಾಜದ ಒಳಿತಿಗಾಗಿ ನಿರಂತರವಾಗಿ ರಕ್ತದಾನ ಮಾಡಿದ ಎಲ್ಲ ರಕ್ತದಾನಿ ಬಂಧುಗಳಿಗೆ ವಿಶೇಷ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮನೋಜ ಡಿ. ನಾಯ್ಕ ಚೆಂಡಿಯಾ ಸ್ವಾಗತಿಸಿದರು. ಗುರುಪ್ರಸಾದ ಜಿ. ನಾಯ್ಕ ಚೆಂಡಿಯಾ ಕಾರ್ಯಕ್ರಮ ನಿರೂಪಿಸಿದರು.