ಧಾರಾಕಾರ ಮಳೆಗೆ ಸೇತುವೆಗಳು ಜಲಾವೃತ

KannadaprabhaNewsNetwork |  
Published : Jun 13, 2025, 04:16 AM ISTUpdated : Jun 13, 2025, 04:17 AM IST
ಫೋಟೋ: 12ಜಿಎಲ್‌ಡಿ2-  ಗುಳೇದಗುಡ್ಡದಿಂದ ಪರ್ವತಿಗೆ ಹೋಗಲು ಇರುವ  ಹಳ್ಳದ ಸೇತುವೆ | Kannada Prabha

ಸಾರಾಂಶ

ಗುಳೇದಗುಡ್ಡ ಪಟ್ಟಣದ ಸುತ್ತಮುತ್ತ ಬುಧವಾರ ರಾತ್ರಿ ಮತ್ತು ಗುರುವಾರ ನಸುಕಿನ ಜಾವ ಸುರಿದ ಧಾರಾಕಾರ ಮಳೆಯಿಂದಾಗಿ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಗುಳೇದಗುಡ್ಡ ಪಟ್ಟಣದ ಪರ್ವತಿ ಸೇತುವೆ ಹಾಗೂ ಆಸಂಗಿ ಗ್ರಾಮಕ್ಕೆ ತೆರಳುವ ಸೇತುವೆಗಳು ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದ ಸುತ್ತಮುತ್ತ ಬುಧವಾರ ರಾತ್ರಿ ಮತ್ತು ಗುರುವಾರ ನಸುಕಿನ ಜಾವ ಸುರಿದ ಧಾರಾಕಾರ ಮಳೆಯಿಂದಾಗಿ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಗುಳೇದಗುಡ್ಡ ಪಟ್ಟಣದ ಪರ್ವತಿ ಸೇತುವೆ ಹಾಗೂ ಆಸಂಗಿ ಗ್ರಾಮಕ್ಕೆ ತೆರಳುವ ಸೇತುವೆಗಳು ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಗುಳೇದಗುಡ್ಡ ಪಟ್ಟಣದಿಂದ ಆಸಂಗಿ ಗ್ರಾಮಕ್ಕೆ ತೆರಳುವ ದರ್ಗಾ ಹತ್ತಿರದ ಸೇತುವೆ ಹಾಗೂ ಪಟ್ಟಣದಿಂದ ಪರ್ವತಿಗೆ ತೆರಳುವ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ಪರ್ವತಿ, ಆಸಂಗಿ ಹಾಗೂ ಕಟಗಿನಹಳ್ಳಿ ಗ್ರಾಮಗಳಿಂದ ಗುಳೇದಗುಡ್ಡ ಪಟ್ಟಣಕ್ಕೆ ಬರುವ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲತೆ ಉಂಟಾಗಿದೆ. ಗುರುವಾರ ವಾರದ ಸಂತೆ ಇದ್ದು, ರೈತರು ತರಕಾರಿ ಮಾರಾಟಕ್ಕೆ ತರಲು ಸಾಕಷ್ಟು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಯಿತು.

ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಸಾರ್ವಜನಿಕರು ಪರ್ವತಿ, ಆಸಂಗಿ, ಲಾಯದಗುಂದಿ, ಕಟಗಿನಹಳ್ಳಿ ,ನಾಗರಾಳ ಗ್ರಾಮಕ್ಕೆ ತೆರಳಲು ಗುರುವಾರ ಬಹಳಷ್ಟು ಸಮಸ್ಯೆ ಎದುರಿಸಿದರು. ಎರಡು ಸೇತುವೆಗಳ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದ್ದರೂ ಯುವಕರು ಸೈಕಲ್, ಬೈಕ್ ಹಾಗೂ ಕಾಲ್ನಡಿಗೆ ಮೂಲಕ ಸೇತುವೆ ದಾಟುವ ದುಸ್ಸಾಹಸ ನಡೆಸಿದ್ದಾರೆ. ಗುಳೇದಗುಡ್ಡದಿಂದ ಆಸಂಗಿ, ಲಾಯದಗುಂದಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದ ಸೇತುವೆ ಮೇಲೆ ಹೆಚ್ಚಿನ ನೀರು ಹರಿಯುತ್ತಿದ್ದು, ಪುರಸಭೆಯವರು ಸೇತುವೆ ಮೇಲೆ ಯಾರೂ ತೆರಳದಂತೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದನ್ನು ನೋಡಲು ಪಟ್ಟಣದ ಜನತೆ ತಂಡೋಪಂಡವಾಗಿ ಆಗಮಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ