ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ರೈತರ ಸಮಸ್ಯೆಗೆ ನಾವು ಸದಾಕಾಲ ಸ್ಪಂದಿಸುತ್ತೇವೆ. ರೈತರ ಬೇಡಿಕೆಯಂತೆ ಹಲವು ಬಸ್ಗಳು ದೊಡ್ಡಿಂದುವಾಡಿ ಗ್ರಾಮ ಪ್ರವೇಶಿಸಿ ತೆರಳುವಂತೆ ಡಿಪೋ ಅದಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾನ್ ಸ್ಟಾಪ್ ಬಸ್ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್ಗಳು ಎಂದಿನಂತೆ ಸತ್ತೇಗಾಲ ಗ್ರಾಮ ಕ್ರಮಿಸಿ ತೆರಳುವಂತೆ ಸೂಚಿಸಲಾಗಿದೆ. ಈಗಾಗಲೇ ರೈತ ಮುಖಂಡರು ಈ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದ ಹಿನ್ನೆಲೆ ಕ್ರಮವಹಿಸಲಾಗಿದೆ. ಸೂಚನೆಯಂತೆ ನಿರ್ವಾಹಕರು ಇದನ್ನು ಪಾಲಿಸದಿದ್ದರೆ ಅವರ ಮೇಲೆ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಪತ್ರ ಬರೆಯುವೆ ಎಂದರು.
ಫಸಲ್ ಬೀಮಾ ಯೋಜನೆಯ ನಿಯಮ ಸಡಿಲಕ್ಕೆ ಡಿಸಿಗೆ ಪತ್ರ:ಈಗಾಗಲೇ ಹಲವು ರೈತರು ಫಸಲ್ ಬೀಮಾ ಯೋಜನಾ ವಿಮಾ ವ್ಯಾಪ್ತಿಗೆ ಜೋಳ, ಬಾಳೆ ಸೇರಿದಂತೆ ಕೆಲ ಬೇಳೆಗಳಿಗೆ ವಿಮಾ ಯೋಜನೆ ಅನ್ವಯಿಸಲ್ಲ ಎಂಬ ರೈತರ ಮನವಿಯನ್ನು ನಾನು ಪರಿಗಣಿಸಿದ್ದೆನೆ. ಈ ಸಂಬಂಧ ರೈತರ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅದೇ ರೀತಿಯಲ್ಲಿ ರೈತರು ತಾವು ಬೆಳೆದ ಬೇಳೆಗಳು ಹಾಳಾಗದಂತೆ, ಒಂದು ವೇಳೆ ಬೇಳೆ ಹಾಳಾದರಕೆ ವಿಮಾ ಮಾಡಿಸುವ ಮೂಲಕ ಸಹಕರಿಸಿ, ವಿಮೆಯಿಂದ ರೈತರಿಗೆ ಸಾಕಷ್ಟು ಅನುಕೂಲಗಳಿವೆ ಎಂದರು. ಈಗಾಗಲೇ ಲಕ್ಷಾಂತರ ಹಣ ವ್ಯಯಿಸಿ ಕಬ್ಬು, ಬಾಳೆ ಬೆಳೆದ ರೈತರ ಬೆಳೆ ನಷ್ಟವಾಗಿದ್ದು ನನ್ನ ಗಮನದಲ್ಲಿದೆ. ಫಸಲ್ ಬೀಮಾ ಯೋಜನೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವ ಕುರಿತು ಕ್ರಮವಹಿಸಲಾಗುವುದು ಎಂದು ಹೇಳಿದರು.
ಶೈಲೇಂದ್ರ, ರೈತ ಮುಖಂಡ