ನರಸಿಂಹರಾಜಪುರ: ಬಡಗಬೈಲು ಗ್ರಾಮದ ಕಣಿಗೇರಿಯ ಬ್ರಿಸೆಲ್ ಪತ್ರೋಸ್ ಅವರು ಬೆಂಗಳೂರಿನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 5 ನೇ ಸ್ಥಾನ ಪಡೆದು ಪ್ರಶಸ್ತಿ ಪಡೆದಿದ್ದಾರೆ.
ನರಸಿಂಹರಾಜಪುರ: ಬಡಗಬೈಲು ಗ್ರಾಮದ ಕಣಿಗೇರಿಯ ಬ್ರಿಸೆಲ್ ಪತ್ರೋಸ್ ಅವರು ಬೆಂಗಳೂರಿನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 5 ನೇ ಸ್ಥಾನ ಪಡೆದು ಪ್ರಶಸ್ತಿ ಪಡೆದಿದ್ದಾರೆ.
ಬ್ರೆಸೆಲ್ ಪತ್ರೋಸ್ ಬೆಂಗಳೂರಿನಲ್ಲಿ ಮೇ 15 ರಂದು ಬಾಡಿ ಬಿಲ್ಡಿಂಗ್ ಫೆಡರೇಷನ್ ಸಾಯಿ ಕ್ಲಾಸಿಕ್-2025 ಏರ್ಪಡಿಸಿದ್ದ ಮಿಸ್ಟರ್ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸೀನಿಯರ್ ವಿಭಾಗದಲ್ಲಿ 5 ನೇ ಸ್ಥಾನ ಪಡೆದು ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ಪಡೆದುಕೊಂಡಿದ್ದಾರೆ. ಬ್ರಿಸೆಲ್ ಪತ್ರೋಸ್ ಅವರು ನರಸಿಂಹರಾಜಪುರ ತಾಲೂಕಿನ ಬಡಗಬೈಲು ಗ್ರಾಮದ ಕಣಿಗೇರಿಯ ಮೊಳೆಯಲ್ ಕುಟುಂಬದ ಎಂ.ಎ.ಪತ್ರೋಸ್ ಮತ್ತು ಶಾಲಿ ಅವರ ಪುತ್ರರಾಗಿದ್ದಾರೆ. ಬ್ರೆಸೆಲ್ ಪತ್ರೋಸ್ 5 ನೇ ಸ್ಥಾನ ಪಡೆದಿರುವುದಕ್ಕೆ ತಾಲೂಕು ಯಂಗ್ ಮನ್ ಕ್ರಿಶ್ಚಿಯನ್ ಅಸೋಷಿಯೇಷನ್ ನ ಅಧ್ಯಕ್ಷ ಎಂ.ಪಿ.ಸನ್ನಿ ಅಭಿನಂದನೆ ಸಲ್ಲಿಸಿ ಮಲೆನಾಡಿನ ಯುವ ಪ್ರತಿಭೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಿದರೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.