ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಕೊಟ್ಟ ಮೊದಲ ಸಿಎಂ ಬಿಎಸ್‌ವೈ: ರಂಭಾಪುರಿ ಶ್ರೀ

KannadaprabhaNewsNetwork |  
Published : May 10, 2026, 02:00 AM IST
ಯಡಿಯೂರಪ್ಪ ಅಭಿಮಾನೋತ್ಸವ | Kannada Prabha

ಸಾರಾಂಶ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ವಜನಾಂಗಗಳ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಕೊಟ್ಟ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ:

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ವಜನಾಂಗಗಳ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಕೊಟ್ಟ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಶ್ಲಾಘಿಸಿದರು.

ಕೋಟೆನಾಡಿನಲ್ಲಿ ಶನಿವಾರ ನಡೆದ ಬಿ.ಎಸ್‌.ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿಯಾಗಿ ಅವರು ಮಠ ಮಾನ್ಯಗಳಿಗೆ ನೀಡಿದ ಕೊಡುಗೆ ಹಾಗೂ ಅವರ ಉದಾರ ಭಾವವನ್ನು ಗುಣಗಾನ ಮಾಡಿದರು. ಯಡಿಯೂರಪ್ಪನವರು ಪುರಸಭೆ ಸದಸ್ಯತ್ವದಿಂದ ರಾಜ್ಯದ ಮುಖ್ಯಮಂತ್ರಿವರೆಗೆ ಬೆಳೆದು, ಯಾರೂ ಮಾಡದ ಅದ್ಭುತ ಕಾರ್ಯ ಮಾಡಿ ಎಲ್ಲ ಜಾತಿ-ಜನಾಂಗಗಳ ಪ್ರೀತಿ ಗಳಿಸಿದವರು. 4 ಬಾರಿ ಮುಖ್ಯಮಂತ್ರಿಗಳಾಗಿ ವಿಶೇಷ ದಾಖಲೆ ಮಾಡಿದ್ದಾರೆ. ಜನ ಸಾಮಾನ್ಯರ ಧ್ವನಿಗೆ ಸ್ಪಂದಿಸಿ, ಬಡವರ ಭಾವನೆ ಆಲಿಸಿ ರೈತರ ಕಷ್ಟ ಸುಖ ಅರಿತು ಸ್ಪಂದಿಸಿ ಬೆಳೆದು ಬಂದವರು. ಅವರು ಮಾಡಿದ ಕಾರ್ಯಗಳಿಂದ ಪ್ರಭಾವಿತರಾಗಿ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿದೆ. ಇದೊಂದು ಸಾರ್ಥಕ ಸಮಾವೇಶವಾಗಿದೆ ಎಂದರು.

ಜನರ ನಾಡಿಮಿಡಿತ ಅರಿತ ನಾಯಕ:

ಸಾಗರದ ಅಲೆಯಂತೆ ಬಂದಿರುವ ಈ ಜನಸಾಗರ ಚಿತ್ರದುರ್ಗದ ಈ ಬಯಲು ಕರ್ನಾಟಕದ ಸಮಸ್ತ ಸಮಾವೇಶಕ್ಕೆ ಸಾಕ್ಷಿಯಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪುರಸಭೆ ಸದಸ್ಯರಾಗಿ ಸೇವೆ ಆರಂಭಿಸಿ ಯಡಿಯೂರಪ್ಪ ಅವರು ಜನರ ನಾಡಿಮಿಡಿತ ಅರಿತು ರಾಜ್ಯದ ಮುಖ್ಯಮಂತ್ರಿಯಾಗಿ ಬೆಳೆದವರು. ಕರ್ನಾಟಕದ ಜನತೆ ಪ್ರೀತಿಯಿಂದ ಬೆಳೆಸಿದ ಅಪರೂಪದ ವ್ಯಕ್ತಿಗಳಲ್ಲಿ ಯಡಿಯೂರಪ್ಪ ಸಹ ಒಬ್ಬರು. ಮಠಗಳ ಜೀರ್ಣೋದ್ಧಾರಕ್ಕೆ ನೆರವು ನೀಡಿದ್ದನ್ನು ಮಠಾಧೀಶರು ಸ್ಮರಿಸಿಕೊಂಡಿದ್ದಾರೆ. ದಿನದ ಸಾಲಕ್ಕೆ ಬಡ್ಡಿ ಕಟ್ಟುವವರಿಂದ ಹಿಡಿದು, ರೈತರ ಆರ್ಥಿಕ ಶಕ್ತಿ ಹೆಚ್ಚಾಗಲು ಶ್ರಮಿಸಿದವರು ಯಡಿಯೂರಪ್ಪ. ಅವರು ಅಧಿಕಾರದಲ್ಲಿದ್ದಾಗ ತಲೆದೋರಿದ್ದ ಪ್ರವಾಹ ಪರಿಸ್ಥಿತಿಯನ್ನು ಜಾಗರೂಕವಾಗಿ ನಿಭಾಯಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ಸೇವೆ ಅನನ್ಯ:

ಕೋವಿಡ್ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ಸೇವೆ ಅನನ್ಯವಾದುದು ಎಂದು ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಾಡಿನ ಆರ್ಥಿಕ ಸಮೃದ್ಧಿ ಹಾಗೂ ನಾಡಿನ ಜನಸೇವೆಗೆ ಅವರು ಅವಿರತ ಶ್ರಮಸಿದ್ದಾರೆ. ಮಿತ ಬಳಕೆಯಾಗಿ ಮಾತನಾಡುವ ಅವರು ದೀನದಲಿತರ ನೋವನ್ನು ಪರಿಹರಿಸಿದರು. ಅಂತಹ ಅವರ ಈ ಅಭಿನಂದನಾ ಸಮಾರಂಭದಲ್ಲಿ ನಾವು ಭಾಗವಹಿಸಿರುವುದು ಅತೀವ ಸಂತಸ ತಂದಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಕುಲಕ್ಕೆ ಮಾನವೀಯ ಸಂದೇಶ ಸಾರಿದ ಬಸವಣ್ಣ
ಗುಡಿಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ರಾಡಿ ನೀರು ಪೂರೈಕೆ!