ಮೂಲ್ಕಿಸೀಮೆ ಅರಸು ಕಂಬಳ ಸಂಪನ್ನ

KannadaprabhaNewsNetwork |  
Published : Dec 30, 2025, 03:00 AM IST
ಮೂಲ್ಕಿ ಸೀಮೆ ಅರಸು ಕಂಬಳ ಸಂಪನ್ನ | Kannada Prabha

ಸಾರಾಂಶ

ಪಡುಪಣಂಬೂರಿನ ಮೂಲ್ಕಿ ಸೀಮೆಯ ಅರಮನೆಯ ಬಾಕಿಮಾರು ಗದ್ದೆಯಲ್ಲಿ ನಡೆದ ಮೂಲ್ಕಿ ಸೀಮೆ ಮೂಡು-ಪಡು ಜೋಡುಕರೆ ಅರಸು ಕಂಬಳದಲ್ಲಿ ಕನೆಹಲಗೆ- 5 ಜೊತೆ, ಅಡ್ಡ ಹಲಗೆ-8 ಜೊತೆ, ಹಗ್ಗ ಹಿರಿಯ-4 ಜೊತೆ, ನೇಗಿಲು ಹಿರಿಯ-16 ಜೊತೆ, ಹಗ್ಗ ಕಿರಿಯ-12 ಜೊತೆ, ನೇಗಿಲು ಕಿರಿಯ-44 ಜೊತೆ ಸೇರಿದಂತೆ ಒಟ್ಟು 89 ಜೊತೆ ಕೋಣಗಳು ಭಾಗವಹಿಸಿದ್ದವು.

ಮೂಲ್ಕಿ: ಪಡುಪಣಂಬೂರಿನ ಮೂಲ್ಕಿ ಸೀಮೆಯ ಅರಮನೆಯ ಬಾಕಿಮಾರು ಗದ್ದೆಯಲ್ಲಿ ನಡೆದ ಮೂಲ್ಕಿ ಸೀಮೆ ಮೂಡು-ಪಡು ಜೋಡುಕರೆ ಅರಸು ಕಂಬಳದಲ್ಲಿ ಕನೆಹಲಗೆ- 5 ಜೊತೆ, ಅಡ್ಡ ಹಲಗೆ-8 ಜೊತೆ, ಹಗ್ಗ ಹಿರಿಯ-4 ಜೊತೆ, ನೇಗಿಲು ಹಿರಿಯ-16 ಜೊತೆ, ಹಗ್ಗ ಕಿರಿಯ-12 ಜೊತೆ, ನೇಗಿಲು ಕಿರಿಯ-44 ಜೊತೆ ಸೇರಿದಂತೆ ಒಟ್ಟು 89 ಜೊತೆ ಕೋಣಗಳು ಭಾಗವಹಿಸಿದ್ದವು. ಫಲಿತಂಶ; ಅಡ್ಡ ಹಲಗೆ ವಿಭಾಗದಲ್ಲಿ ಪ್ರಥಮ-ಸುರತ್ಕಲ್ ಪಡ್ರೆ ತೋಟ ಮನೆ ಅಶೋಕ್ ಅಮೀನ್, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ.ದ್ವಿತೀಯ-ಮೋರ್ಲ ಪ್ರಾಪ್ತಿ ಗಿರೀಶ್ ಆಳ್ವ, ಹಲಗೆ ಮುಟ್ಟಿದವರು: ಭಟ್ಕಳ ಪಾಂಡು.

ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ-ಮಿಜಾರ್ ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ (12.22), ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ, ದ್ವಿತೀಯ-ಮೂಲ್ಕಿ ಕೆಳಗಿನ ಮನೆ ಸಂಶು ಸಾಹೇಬೆರ್ (13.47), ಓಡಿಸಿದವರು: ಕಡಂದಲೆ ಭವಾನೀಶ್.ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ-ಶಿಬರೂರು ಮುಟ್ಟಿಕಲ್ಲು ಕೀರ್ತನ್ ರಾಜೇಶ್ ಪಾಣಾರ (12.26), ಓಡಿಸಿದವರು: ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ.

ದ್ವಿತೀಯ-ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ (12.53), ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್‌.

ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ (11.99), ಓಡಿಸಿದವರು: ಬಾರಾಡಿ ನತೀಶ್ ಸಫಲಿಗ, ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ (12.02),

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ-ಉಳೆಪಾಡಿ ಪುಲ್ಲೋಡಿಬೀಡು ಉದಯ್ ಶೆಟ್ಟಿ (11.60).

ಓಡಿಸಿದವರು: ಆದಿ ಉಡುಪಿ ಜಿತೇಶ್ ಸುವರ್ಣ, ದ್ವಿತೀಯ-ಗಿರಿಜಾ ರೋಡ್ ಲೈನ್ಸ್ ಕೋಟ ಗಾಡಿ ಕೂಸ ಪೂಜಾರಿ, ಓಡಿಸಿದವರು: ರಾಯಿ ದರ್ಶನ್ ಗೌಡ.ಬಹುಮಾನ ವಿತರಣೆ: ಪಡುಪಣಂಬೂರು ಮೂಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆದ ಅರಸು ಕಂಬಳದ ಸಮಾರೋಪ ಸಮಾರಂಭದಲ್ಲಿ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತ ಅರಸರು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಮೂಲ್ಕಿ ಅರಮನೆಯ ಆಶಲತಾ, ಮೂಲ್ಕಿಅರಮನೆ ವೆಲ್ವೇರ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಗೌತಮ್ ಜೈನ್, ವಕೀಲ ಚಂದ್ರಶೇಖರ ಕಾಸಪ್ಪಯ್ಯನವರ ಮನೆ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್, ಮೂಲ್ಕಿ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಬಿ.ಎಸ್., ಸುದರ್ಶನ್ ಪಂಜ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಧರ್ಮಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಮ್ಮೆಮಾ‌ರ್ ನಿರೂಪಿಸಿದರು.ಕಂಬಳ ಕ್ರೀಡೆಯನ್ನು ಉಳಿಸಿ, ಬೆಳೆಸಬೇಕು: ಶಶಿಧರ್‌ ಶೆಟ್ಟಿ

ಮೂಲ್ಕಿ: ತುಳುನಾಡಿನಲ್ಲಿ ಕೃಷಿಗೆ ಪೂರಕವಾಗಿರುವ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ ಎಂದು ಉದ್ಯಮಿ ಶಶಿಧರ್ ಶೆಟ್ಟಿ ಮಸ್ಕತ್ ಹೇಳಿದರು.ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾಧಕರನ್ನು ಗೌರವಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಯಕೃಷ್ಣ ಕೋಟ್ಯಾನ್‌ ಹಳೆಯಯಂಗಡಿ ಅವರನ್ನು ಗೌರವಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಅರಸು ಕಂಬಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಸುವರ್ಣ ನ್ಯೂಸ್ ನಿರೂಪಕ ಪ್ರಶಾಂತ್ ನಾಥು, ಶ್ವೇತಾ ಆಚಾರ್ಯ, ಬಿಗ್ ಬಾಸ್ ಖ್ಯಾತಿಯ ಜಾಹ್ನವಿ, ಅವಿನಾಶ್ ಶೆಟ್ಟಿ, ಎಂಆರ್‌ಪಿಎಲ್ ಅಧಿಕಾರಿ ಸತೀಶ್, ಉದ್ಯಮಿ ಅಗರಿ ರಾಘವೇಂದ್ರ ರಾವ್, ವೇದ ಪ್ರಕಾಶ್‌, ಪ್ರಕಾಶ್‌ ಶೆಟ್ಟಿ ನಲ್ಯಗುತ್ತು,,ವಿ.ಕೆ. ಶೆಟ್ಟಿ, ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಭಾಸ್ಕರ್ ಸಾಲ್ಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಮೂಲ್ಕಿ ಅರಮನೆ ವೆಲ್ವೇರ್ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಗೌತಮ್ ಜೈನ್, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್, ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್, ದಿವಾಕರ ಸಾಮಾನಿ ಚೇಳಾಯರು ಗುತ್ತು, ಅರಸು ಕಂಬಳ ಸಮಿತಿಯ ಮಹೀಮ್ ಹೆಗ್ಡೆ, ಶರತ್ ಕಾರ್ನಾಡ್, ಅಬ್ದುಲ್ ಅಜೀಜ್, ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಸಂಪತ್ ಶೆಟ್ಟಿ ತೋಕೂರುಗುತ್ತು ಸ್ವಾಗತಿಸಿದರು. ವಿನೋದ್ ಸಾಲ್ಯಾನ್ ಬೆಳ್ಳಾಯರು ವಂದಿಸಿದರು. ನವೀನ್ ಶೆಟ್ಟಿ ಎಮ್ಮೆಮಾ‌ರ್ ನಿರೂಪಿಸಿದರು. ಹಳೆಯಯಂಗಡಿ ರವರನ್ನು ಗೌರವಿಸಲಾಯಿತು.ಶಾಸಕ ಉಮಾನಾಥ ಕೋಟ್ಯಾನ್ ಅರಸು ಕಂಬಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಸುವರ್ಣ ನ್ಯೂಸ್ ನಿರೂಪಕರಾದ ಪ್ರಶಾಂತ್ ನಾಥು, ಶ್ವೇತಾ ಆಚಾರ್ಯ, ಬಿಗ್ ಬಾಸ್ ಖ್ಯಾತಿಯ ಜಾಹ್ನವಿ, ಅವಿನಾಶ್ ಶೆಟ್ಟಿ, ಎಂಆರ್‌ಪಿಎಲ್ ಅಧಿಕಾರಿ ಸತೀಶ್,ಉದ್ಯಮಿ ಅಗರಿ ರಾಘವೇಂದ್ರರಾವ್, ವೇದ ಪ್ರಕಾಶ್‌, ಪ್ರಕಾಶ್‌ ಶೆಟ್ಟಿ ನಲ್ಯಗುತ್ತು,,ವಿ.ಕೆ ಶೆಟ್ಟಿ,,ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಭಾಸ್ಕರ್ ಸಾಲ್ಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಮೂಲ್ಕಿ ಅರಮನೆ ವೆಲ್ವೇರ್ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಗೌತಮ್ ಜೈನ್, ಹಳೆಯಂಗಡಿ ಪ್ರಿಯ ದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್, ಮೂಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್,ದಿವಾಕರ ಸಾಮಾನಿ ಚೇಳಾಯರುಗುತ್ತು, ಅರಸು ಕಂಬಳ ಸಮಿತಿಯ ಮಹೀಮ್ ಹೆಗ್ಡೆ, ಶರತ್ ಕಾರ್ನಾಡ್, ಅಬ್ದುಲ್ ಅಜೀಜ್, ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಸಂಪತ್ ಶೆಟ್ಟಿ ತೋಕೂರುಗುತ್ತು ಸ್ವಾಗತಿಸಿದರು ವಿನೋದ್ ಸಾಲ್ಯಾನ್ ಬೆಳ್ಳಾಯರು ವಂದಿಸಿದರು. ನವೀನ್ ಶೆಟ್ಟಿ ಎಮ್ಮೆಮಾ‌ರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ವಿವಿ ನೂತನ ಗಣಕಯಂತ್ರ ವಿಭಾಗ ಉದ್ಘಾಟನೆ
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ನದಿ ಸ್ವಚ್ಛವಾಗಿಡೋಣ: ಲತಾ