ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಪಶು ಆಸ್ಪತ್ರೆ ಮುಂದೆ ಸೋಮವಾರ ರೈತರು, ಪಶುಪಾಲಕರು ಪ್ರತಿಭಟನೆ ನಡೆಸಿ ನಾವು ಜಾನುವಾರುಗಳನ್ನು ಕಷ್ಟಪಟ್ಟು ಸಾಕುತ್ತಿದ್ದೇವೆ. ಹೈನುಗಾರಿಕೆ ನಂಬಿ ಬದುಕುತ್ತಿದ್ದೇವೆ. ರಾಸುಗಳಿಗೆ ರೋಗಬಾಧೆ ಸಮಸ್ಯೆಕಂಡರೆ ಚಿಕಿತ್ಸೆಗೆ ವೈದ್ಯರೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಕ್ಕೇರಿ ಹೋಬಳಿ ದೊಡ್ಡ ಕೇಂದ್ರವಾಗಿದೆ. ಪಶು ಶುಶ್ರೂಷೆಗೆ ಪ್ರಭಾರಿ ವೈದ್ಯರಿದ್ದು ವಾರದ ಒಂದೆರಡು ದಿನ ಬಂದರೆ ಜಾನುವಾರುಗಳ ಗತಿ ಏನು ಎಂದು ಕಿಡಿಕಾರಿದರು.ಬೋರಾಪುರ ಗ್ರಾಮದ ರೈತ ವೆಂಕಟೇಶ್ ಅವರ ಎಚ್ಎಫ್ ಹಸುವಿನ ಕರುವಿಗೆ ಸೂಕ್ತ ಚಿಕಿತ್ಸೆ ಸಿಗದೆ ಅಸುನೀಗಿದೆ. ಇದಕ್ಕೆ ಹೊಣೆ ಯಾರು. ಸುಮಾರು 60ಕ್ಕೂ ಹೆಚ್ಚು ಹಳ್ಳಿ ಹೊಂದಿರುವ ಹೋಬಳಿ ಕೇಂದ್ರದಲ್ಲಿ ಪಶು ವೈದ್ಯರು ಕಾಯಂ ನೇಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕಾಯಿ ಸುರೇಶ್, ಮುಖಂಡರಾದ ಕೆ.ಕೆ.ಚಂದ್ರಶೇಖರ್, ರಘು, ನಿಂಗರಾಜು, ಕೆ.ಜಿ.ತಮ್ಮಣ್ಣ ಭಾಗವಹಿಸಿದ್ದರು.