ಪ್ಲಾಸ್ಟಿಕ್ ಬದಲು ಬಟ್ಟೆ ಚೀಲ ಬಳಸಲು ಗ್ರಾಹಕರು, ವ್ಯಾಪಾರಿಗಳಿಗೆ ಕರೆ

KannadaprabhaNewsNetwork |  
Published : May 08, 2026, 01:15 AM IST
37 | Kannada Prabha

ಸಾರಾಂಶ

ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಮನುಷ್ಯರ ಆರೋಗ್ಯ ಹಾಗೂ ಪ್ರಾಣಿ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತದೆ. ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪ್ಲಾಸ್ಟಿಕ್ ವಿಷಕಾರಿ ರಾಸಾಯನಿಕ ಬಿಡುಗಡೆ ಮಾಡುವ ಕಾರಣ ಕ್ಯಾನ್ಸರ್‌ ನಂತಹ ಮಾರಕ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಮರು ಬಳಕೆ ಮಾಡಲು ಸಾಧ್ಯವಿಲ್ಲದ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ. ಹೀಗಾಗಿ, ಪ್ಲಾಸ್ಟಿಕ್ ಚೀಲಗಳ ಬದಲು ಬಟ್ಟೆ ಚೀಲಗಳನ್ನು ಬಳಸಲು ಗ್ರಾಹಕರು, ವ್ಯಾಪಾರಿಗಳು ಮುಂದಾಗಬೇಕು ಎಂದು ಕ್ಷೇಮ ಧಾಮ ಟ್ರಸ್ಟ್ ಕಾರ್ಯದರ್ಶಿ ಎಚ್.ವಿ.ಎಲ್.ಎನ್.ಆಚಾರ್ ಕರೆ ನೀಡಿದರು.

ನಗರದ ಶ್ರೀರಾಂಪುರದಲ್ಲಿ ಮಾರುಕಟ್ಟೆಯಲ್ಲಿ ಕ್ಷೇಮ ಧಾಮ ಟ್ರಸ್ಟ್ ಹಾಗೂ ಅರಿವು ಸಂಸ್ಥೆ ವತಿಯಿಂದ ತರಕಾರಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಗುರುವಾರ ಬಟ್ಟೆ ಚೀಲಗಳನ್ನು ವಿತರಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಮನುಷ್ಯರ ಆರೋಗ್ಯ ಹಾಗೂ ಪ್ರಾಣಿ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತದೆ. ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪ್ಲಾಸ್ಟಿಕ್ ವಿಷಕಾರಿ ರಾಸಾಯನಿಕ ಬಿಡುಗಡೆ ಮಾಡುವ ಕಾರಣ ಕ್ಯಾನ್ಸರ್‌ ನಂತಹ ಮಾರಕ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ ಎಂದು ಎಚ್ಚರಿಸಿದರು.

ಪ್ಲಾಸ್ಟಿಕ್ ಬಾಟಲ್‌ ನಲ್ಲಿನ ನೀರು ಶುದ್ಧವೆಂದು ಭಾವಿಸಿ ಸೇವಿಸುವುದು ಫ್ಯಾಷನ್ ಆಗಿದೆ. ಭವಿಷ್ಯದಲ್ಲಿ ಖಾಲಿ ಬಾಟಲ್‌ ಗಳನ್ನು ವಿಲೇವಾರಿ ಮಾಡುವುದೇ ಬಹುದೊಡ್ಡ ಸಮಸ್ಯೆ ಆಗಲಿದೆ. ನೀರನ್ನು ರೆಫ್ರಿಜರೇಟರ್‌ ನಲ್ಲಿಟ್ಟು ತಣ್ಣಗೆ ಮಾಡಿಕೊಂಡು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಿಗೆ ನೀರನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿ ಕುಡಿಯುವುದು ಉತ್ತಮ ಎಂದು ಸಲಹೆ ನೀಡಿದರು.

ಕ್ಷೇಮ ಧಾಮ ಟ್ರಸ್ಟ್ ಅಧ್ಯಕ್ಷ ಶೇಖರ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕ ಅಶ್ವಥ್, ಮುಖಂಡರಾದ ನಾಗೇಶ್ ಮೂರ್ತಿ, ದೂರ ರಾಜಣ್ಣ, ಸತೀಶ್, ರಾಮಲಿಂಗ, ಮಂಜುನಾಥ್, ವಿಹ ಎಸ್. ಆಚಾರ್ಯ ಮೊದಲಾದವರು ಇದ್ದರು.

ಕಾವೇರಿ 2.0 ತಂತ್ರಾಂಶದಲ್ಲಿ ಲೋಪದಿಂದ ಆಸ್ತಿ ಹೊಂದಿರುವವರಿಗೆ ಸಮಸ್ಯೆ: ಆರೋಪಕನ್ನಡಪ್ರಭ ವಾರ್ತೆ ಮೈಸೂರು

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶ ಅನೇಕ ಲೋಪಗಳಿಂದ ಕೂಡಿದೆ. ಇದರಿಂದ ಆಸ್ತಿ ಹೊಂದಿರುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ಆರೋಪಿಸಿದರು.ಇತ್ತೀಚೆಗೆ ಅನುಷ್ಠಾನಗೊಂಡಿರುವ ಪ್ರಕ್ರಿಯೆಯಲ್ಲಿ ಪಕ್ಷಕಾರರ ಭೌತಿಕ ಸಹಿ, ಸಾಕ್ಷಿಗಳ ಭೌತಿಕ ಸಹಿ, ಉಪ ನೋಂದಣಾಧಿಕಾರಿಗಳ ಭೌತಿಕ ಸಹಿ ಹಾಗೂ ಪತ್ರ ಬರಹಗಾರರ ಭೌತಿಕ ಸಹಿ ಇಲ್ಲದಿದ್ದು, ಇದರಿಂದಾಗಿ ದಾಖಲಾತಿಗಳು ಕೇವಲ ಮುದ್ರಣ ಹೊರತುಪಡಿಸಿ ಯಾವುದೇ ವಿಶೇಷತೆ ಹೊಂದಿಲ್ಲ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೇಪರ್‌ ಲೆಸ್ ನೋಂದಣಿ ಮೂಲಕ ನೋಂದಣಿ ಆಗುವ ದಸ್ತಾವೇಜು ಡಿಜಿಟಲ್ ರೂಪದಲ್ಲಿ ಕೇಂದ್ರಿತ ದತ್ತಾಂಶದಲ್ಲಿ ದಾಖಲಾಗುವ ಕಾರಣ ಭೌತಿಕವಾಗಿ ಲಭ್ಯವಾಗದಿದ್ದು, ಈ ನೋಂದಾಯಿತ ದಸ್ತಾವೇಜುಗಳ ಮೇಲೆ ಕಷ್ಟಕಾಲದಲ್ಲಿ ಆರ್ಥಿಕ, ಹಣಕಾಸು ಸೌಲಭ್ಯವನ್ನು ಖಾಸಗಿ ವ್ಯಕ್ತಿಗಳಿಂದ ಪಡೆಯಲು ಸಹ ಸಾಧ್ಯವಾಗುವುದಿಲ್ಲ. ಡಿಜಿಟಲ್ ರೂಪದಲ್ಲಿ ಸ್ವತ್ತಿನ ಹಕ್ಕುದಾರರು ಒಂದಕ್ಕಿಂತ ಹೆಚ್ಚು ಮುದ್ರಿತ ಪ್ರತಿ ಪಡೆಯಲು ಸಾಧ್ಯವಿದ್ದು, ಖಾಸಗಿ ವ್ಯಕ್ತಿಗಳು ಯಾವುದೇ ಅಸಲು ದಸ್ತಾವೇಜಿನ ಖಾತರಿ ಇಲ್ಲದೇ ಆರ್ಥಿಕ ಸಹಾಯ ನೀಡಲು ಹಿಂಜರಿಯುವ ಸಂಭವವಿದೆ ಎಂದರು.ಹೀಗಾಗಿ, ಪತ್ರ ಬರಹಗಾರರ ಅವಲಂಬನೆಗೆ ಕಡಿವಾಣ ಹಾಕುವ ಯಾವುದೇ ಪ್ರವೃತ್ತಿ ಸಹಾಯಕಾರಿಯಲ್ಲ. ಇದರಿಂದ ಜನತೆಗೆ ಹೆಚ್ಚು ಅನಾನುಕೂಲವಾಗುವ ಕಾರಣ ಈ ಹಿಂದಿನ ಪದ್ಧತಿ ರದ್ದುಗೊಳಿಸುವುದು ಸರಿಯಲ್ಲ ಎಂದರು.

ಒಕ್ಕೂಟದ ಪದಾಧಿಕಾರಿಗಳಾದ ಕೆ.ಆರ್. ಉದಯ್‌ ಕುಮಾರ್, ಎಂ.ಎಸ್. ನರಸಿಂಹಮೂರ್ತಿ, ಎಂ. ಗಣೇಶ್, ಎ.ಎಸ್. ನಾಗಭೂಷಣ ಆರಾಧ್ಯ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಮಮತೆಯ ಮಡಿಲಿಗಿದು ಗೀತ ನಮನ
ಸಂವಿಧಾನದ ಆಶಯ ಕಗ್ಗೊಲೆ ಮಾಡುತ್ತಿರುವ ಸಿಎಂ