ಕಾಡಂಚಿನ ಗ್ರಾಮಗಳ ಆರೋಗ್ಯಕ್ಕೆ ಶಿಬಿರ ಅಗತ್ಯವಾಗಿದೆ: ಚಾಮುಲ್ ನಿರ್ದೇಶಕ ಮಹದೇವ ಪ್ರಸಾದ್

KannadaprabhaNewsNetwork |  
Published : Dec 16, 2024, 12:48 AM IST
15ಸಿಎಚ್‌ಎನ್‌52ಹನೂರು  ಒಡೆಯರ್ ಪಾಳ್ಯದಲ್ಲಿ ಮತ್ತು ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಕಾಡಂಚಿನ ಗ್ರಾಮಗಳ ಆರೋಗ್ಯದ ಹಿತ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಚಾಮುಲ್ ನಿರ್ದೇಶಕ ಮಹದೇವ ಪ್ರಸಾದ್ (ಉದ್ದನೂರು ಪ್ರಸಾದ್) ತಿಳಿಸಿದರು. ಹನೂರಿನಲ್ಲಿ ಉಚಿತ ಆರೋಗ್ಯ, ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಒಡೆಯರ ಪಾಳ್ಯ ಗ್ರಾಮದಲ್ಲಿ ರಕ್ತದಾನ ಶಿಬಿರ । ಯುವಕರಿಂದ ರಕ್ತದಾನ

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಕಾಡಂಚಿನ ಗ್ರಾಮಗಳ ಆರೋಗ್ಯದ ಹಿತ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಚಾಮುಲ್ ನಿರ್ದೇಶಕ ಮಹದೇವ ಪ್ರಸಾದ್ (ಉದ್ದನೂರು ಪ್ರಸಾದ್) ತಿಳಿಸಿದರು.

ತಾಲೂಕಿನ ಒಡೆಯರ ಪಾಳ್ಯ ಗ್ರಾಮದಲ್ಲಿ ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ಹುತ್ತೂರು ಗ್ರಾಮ ಪಂಚಾಯಿತಿ, ಬಸವರಾಜೇಂದ್ರ ಆಸ್ಪತ್ರೆ ಮತ್ತು ರಕ್ತ ನಿಧಿ ಕೇಂದ್ರ ಮರಿಯಾಲ, ಲಯನ್ಸ್ ಕ್ಲಬ್ ಚಾಮರಾಜನಗರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ಮಹಿಳಾ ಜಿಲ್ಲಾ ಘಟಕ, ಶಿವ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯ ಪ್ರತಿ ದಿನ ಒಂದಲ್ಲ ಒಂದು ಒತ್ತಡಗಳಿಂದ ರಕ್ತದ ಒತ್ತಡ ಮಧುಮೇಹದಿಂದ ಬಳಲುತ್ತಿದ್ದಾರೆ. ಕೆಲಸದ ಒತ್ತಡದಿಂದ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗದೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಡಂಚಿನ ಆದಿವಾಸಿಗಳು, ಅಸಹಾಯಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ ಯೋಜನೆ ಮಾಡಲಾಗಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ತಮಗಾಗಿ ಆಸ್ತಿ ಸಂಪಾದನೆ ಮಾಡದಿದ್ದರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಅತಿ ಹೆಚ್ಚು ರಕ್ತದ ಕೊರತೆಯಿಂದ ಬಳಲುತ್ತಿರುವವರು ನಮ್ಮ ದೇಶದಲ್ಲಿದ್ದಾರೆ. ಸಮಯಕ್ಕೆ ರಕ್ತ ಸಿಗದ ಕಾರಣ ಪ್ರತಿ ವರ್ಷ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಸಾವನಪ್ಪುತ್ತಿದ್ದಾರೆ ಈ ನಿಟ್ಟಿನಲ್ಲಿ ಜೀವವನ್ನು ಉಳಿಸಲು ರಕ್ತದಾನವನ್ನು ಪ್ರೋತ್ಸಾಹಿಸಬೇಕಿದೆ. ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಹಸ್ರ ಚಿಕಿತ್ಸೆಗೆ ಒಳಗಾದವರಿಗೆ ಮಾರಣಾಂತಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಜನರು ರಕ್ತದಾನ ಮಾಡುವುದರಿಂದ ದುರ್ಬಲರಾಗುತ್ತೇವೆ ಎಂದು ಭಾವಿಸುತ್ತಾರೆ ಅದು ಅದು ತಾತ್ಕಾಲಿಕವಾಗಿ ಮಾತ್ರ ರಕ್ತದಾನ ಮಾಡುವುದರಿಂದ ನಮ್ಮ ದೇಹಕ್ಕೆ ವಿವಿಧ ರೀತಿಯ ಪ್ರಯೋಜನಗಳಿವೆ ನಾವು ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು.

ಇದೇ ವೇಳೆ ಯುವ ಮುಖಂಡ ಪ್ರಶಾಂತ್ ಸೇರಿ ಇತರರು ರಕ್ತದಾನ ಮಾಡಿದರು.

ಬಸವ ರಾಜೇಂದ್ರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಸವರಾಜೇಂದ್ರ, ಡಾ. ಶ್ವೇತಾ, ಅಖಿಲ ಭಾರತ ವೀರಶೈವ ಮಹಾ ಘಟಕದ ತಾಲೂಕು ನಿರ್ದೇಶಕರಾದ ವಿನೋದ್, ಮುರುಡೇಶ್ವರ ಸ್ವಾಮಿ, ಕಣ್ಣೂರು ಬಸವರಾಜಪ್ಪ ನಾಗೇಂದ್ರ ಮೂರ್ತಿ, ನಾಗೇಂದ್ರ, ಜಗದೀಶ್ ಗ್ರಾಪಂ ಸದಸ್ಯ ಪುಟ್ಟುವೀರ ನಾಯ್ಕ ಸೇರಿ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ