ಕನ್ನಡಪ್ರಭ ವಾರ್ತೆ ಕುಂದಾಪುರ
ಕಾರ್ಯಾಗಾರದಲ್ಲಿ ಗುಂಪು ಚರ್ಚೆ, ರೆಸ್ಯೂಮ್ ಬಿಲ್ಡಿಂಗ್, ಸೋಶಿಯಲ್ ಪ್ರೊಫೈಲ್ ಬಿಲ್ಡಿಂಗ್, ನೇರ ಸಂದರ್ಶನ ಹೀಗೆ ಹಲವು ತರಬೇತಿಯನ್ನು ನೀಡಲಾಯಿತು.
ಫೆ.21ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ 5 ದಿನ ತರಬೇತಿಯನ್ನು ನೀಡಿದ ತ್ರಸ್ಟ್ ಅಕಾಡೆಮಿಯ ಸ್ಥಾಪಕ ಕಾರ್ತಿಕ್ ಆಳ್ವ ಮಾತನಾಡಿ, ಕಾಲೇಜು ಕ್ಯಾಂಪಸ್ ಪ್ಲೇಸ್ಮೆಂಟ್ ತರಬೇತಿಗೆ ಸಂಬಂಧಿಸಿದಂತೆ ಪ್ರೋತ್ಸಾಹಿಸುತ್ತಿರುವ ಬಗ್ಗೆ ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಾಟೀಲ್ ಮಾತನಾಡಿ, ಕಾರ್ಯಾಗಾರದಲ್ಲಿ ಪಡೆದುಕೊಂಡ ತರಬೇತಿಯಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಪ್ಲೇಸ್ಮೆಂಟ್ ಆಫೀಸರ್ ಜಯಶೀಲ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ಲೇಸ್ಮೆಂಟ್ ಸಹ ಸಂಯೋಜಕರು ಹಾಗೂ ಇಂಗ್ಲಿಷ್ ಉಪನ್ಯಾಸಕರಾದ ರಾಜೇಶ್ವರಿ ಆರ್. ಶೆಟ್ಟಿ ನಿರೂಪಿಸಿದರು.