ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಗಣಪತಿ ಪ್ರತಿಷ್ಟಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆಯಬೇಕು. ಪ್ರತಿಷ್ಠಾಪನೆ ದಿನದಿಂದ ಹಿಡಿದು ವಿಸರ್ಜನೆಯಾಗುವರೆಗೂ ಯಾವುದೆ ಭಾವನೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು, ಪ್ರತಿ ಗ್ರಾಮಗಳಲ್ಲೂ ಪ್ರತ್ಯೇಕ ಗಣಪತಿ ಸ್ಥಾಪನೆ ಬದಲು ಒಟ್ಟಾಗಿ ಆಚರಿಸುವುದು ಒಳ್ಳೇಯದು, ಗಣಪತಿ ಕೂರಿಸುವವರು ಒಟ್ಟಾರೆ ಗ್ರಾಮಸ್ಥರ ಸಹಕಾರದೊಂದಿಗೆ ಇಲಾಖೆ ಅನುಮತಿ ಪಡೆದು ನಿಯಮ ಪಾಲಿಸುವಂತಾಗಬೇಕು ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ವೇಳೆ ಯಾವುದೆ ಧರ್ಮದವರಿಗೂ ಧಕ್ಕೆ ಆಗದ ರೀತಿ ಯುವಕರು ನಡೆದುಕೊಳ್ಳಬೇಕು, ಬೆಳಗ್ಗೆ 6ಗಂಟೆಯಿಂದ 10ಗಂಟೆತನಕ ಧನಿವರ್ಧಕ ಬಳಕೆಗೆ ಅವಕಾಶವಿದೆ ಎಂದರು.ಅದೇ ರೀತಿಯಲ್ಲಿ ಮುಂದಿನ ತಿಂಗಳ 5ರಂದು ಈದ್ ಮಿಲಾದ್ ಹಬ್ಬವು ಇರುವ ಹಿನ್ನೆಲೆ ಮುಸ್ಲಿಂ ಮುಖಂಡರ ಶ್ರದ್ಧಾ ಭಕ್ತಿಯಿಂದ ಅಚರಣೆ ಮಾಡುವ ಮೂಲಕ ಯಾರ ಭಾವನೆಗಳಿಗೂ ಧಕ್ಕೆ ಉಂಟಾಗದಂತೆ ಆಚರಣೆ ಮಾಡಬೇಕು, ಅಹಿತಕರ ಘಟನೆ ನಡೆಯದಂತೆ ಇಲಾಖೆ ಜೊತೆ ಸಹಕರಿಸಬೇಕು ಎಂದರು.ಸಭೆಯಲ್ಲಿ ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಉಪನಿರೀಕ್ಷಕ ಸುಪ್ರೀತ್, ಅಪರಾಧ ವಿಭಾಗ ಉಪನಿರೀಕ್ಷಕ ಚೆಲುವರಾಜ್, ತಿಮ್ಮರಾಜೀಪುರ ಕೆಂಪರಾಜು, ರಾಜು, ಮಹೇಶ್, ರಘು, ಭಾಸ್ಕರ್, ಅಯಾಜ್,ಇದ್ರೀಸ್, ಮಮಲ್ಲಿಕಾರ್ಜುನ್, ಮಹದೇವಸ್ವಾಮಿ(ಭಟ್ಟ) ಇನ್ನಿತರಿದ್ದರು.