ಬಡವರ, ದೀನದಲಿತರ ಸೇವೆ ಮಾಡುವ ಮೂಲಕ ಮೋದಿ ಜನ್ಮದಿನಾಚರಣೆ: ಲಮಾಣಿ

KannadaprabhaNewsNetwork |  
Published : Sep 28, 2025, 02:00 AM IST
27ಎಂಡಿಜಿ1, ಮುಂಡರಗಿಯಲ್ಲಿ ಬಿಜೆಪಿ ಯುವ ಮೋರ್ಚಾವತಿಯಿಂದ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ನಶಾಮುಕ್ತ ಭಾರತಕ್ಕಾಗಿ ನಮೋ ಯುವ ರನ್ ಮ್ಯಾರಥಾನ್ ಗೆ ಶಾಸಕ ಡಾ.ಚಂದ್ರು ಲಮಾಣಿ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಈಗಾಗಲೇ ಶಿರಹಟ್ಟಿ ಮತಕ್ಷೇತ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರದ ಜತೆಗೆ ರಕ್ತದಾನ ಶಿಬಿರ ಹಾಗೂ ಮುಂಡರಗಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶುಕ್ರವಾರ ಗಿಡನೆಡುವ ಕಾರ್ಯಕ್ರಮ ಆಚರಿಸಲಾಗಿದೆ. ಶ ಸಿಂಗಟಾಲೂರು ಗ್ರಾಪಂನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಅ. 2ರ ವರೆಗೂ ಹಮ್ಮಿಕೊಳ್ಳಲಾಗಿದೆ.

ಮುಂಡರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ 15 ದಿನಗಳ ಕಾಲ ಸೇವಾ ಪಾಕ್ಷಿಕ ಆರಂಭಿಸುವ ಮೂಲಕ ಬಡವರ, ದೀನ, ದಲಿತರ ಸೇವೆ ಮಾಡುವ ಮೂಲಕ ಜನ್ಮದಿನ ಆಚರಿಸಲಾಗುತ್ತಿದ್ದು ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಶನಿವಾರ ಬಿಜೆಪಿ ಮಂಡಲದ ಯುವ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಯುವ ಮೋರ್ಚಾ ಆಯೋಜಿಸಿದ್ದ ನಶಾಮುಕ್ತ ಭಾರತಕ್ಕಾಗಿ ನಮೋ ಯುವ ರನ್ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಶಿರಹಟ್ಟಿ ಮತಕ್ಷೇತ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರದ ಜತೆಗೆ ರಕ್ತದಾನ ಶಿಬಿರ ಹಾಗೂ ಮುಂಡರಗಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶುಕ್ರವಾರ ಗಿಡನೆಡುವ ಕಾರ್ಯಕ್ರಮ ಆಚರಿಸಲಾಗಿದೆ. ಶ ಸಿಂಗಟಾಲೂರು ಗ್ರಾಪಂನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಅ. 2ರ ವರೆಗೂ ಹಮ್ಮಿಕೊಳ್ಳಲಾಗಿದೆ. ಮುಂಡರಗಿ ಯುವ ಘಟಕ ಅತ್ಯುತ್ತಮವಾಗಿ ವ್ಯವಸ್ಥೆ ಮಾಡಿದ್ದು, ಅವರಿಗೆ ಹಿರಿಯರು ಕಾರ್ಯಕರ್ತರು ಸಹಕರಿಸಿದ್ದಾರೆ ಎಂದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, 2047ಕ್ಕೆ ವಿಕಸಿತ ಭಾರತಕ್ಕೆ ನಮ್ಮ ದೇಶ ತಲುಪಲಿದೆ. ಒಬ್ಬ ಪ್ರಧಾನಮಂತ್ರಿ ಜನ್ಮದಿನದ ಅಂಗವಾಗಿ ಇಡೀ ವಿಶ್ವದಲ್ಲಿಯೇ ಯಾವುದಾದರೂ ದೇಶ 15 ದಿನಗಳ ಕಾಲ ನಿರಂತರವಾಗಿ ಸೇವಾ ಪಾಕ್ಷಿಕದ ಮೂಲಕ ವಿವಿಧ ಜನೋಪಯೋಗಿ ಕಾರ್ಯವನ್ನು ಮಾಡುತ್ತಿದೆ ಎಂದರೆ ಅದು ಭಾರತ ದೇಶ ಎಂದರು.

ಬಿಜೆಪಿ ಮುಂಡರಗಿ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಕುರಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ ಮಾತನಾಡಿದರು.

ಪುರಸಭೆ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ತಿಮ್ಮಪ್ಪ ದಂಡಿನ, ಜ್ಯೋತಿ ಹಾನಗಲ್, ಪವನ್ ಮೇಟಿ, ಕೊಟ್ರೇಶ ಅಂಗಡಿ, ರಜನಿಕಾಂತ ದೇಸಾಯಿ, ಶಿವಯೋಗಿ ಗಡ್ಡದ, ಪ್ರಶಾಂತಗೌಡ ಗುಡದಪ್ಪನವರ, ಪವನ್ ಲೇಂಡ್ವೆ, ರವಿ ಲಮಾಣಿ, ಪವಿತ್ರಾ ಕಲ್ಲಕುಟಗರ್, ವೀನಾ ಬೂದಿಹಾಳ, ಪುಷ್ಪಾ ಉಕ್ಕಲಿ, ಪ್ರಭಾವತಿ ಬೆಳವಣಕಿಮಠ, ಮಂಜುಳಾ ಹಮ್ಮಿಗಿಹಿರೇಮಠ, ದೇವು ಹಡಪದ, ಅಶೋಕ ಚೂರಿ, ಯಲ್ಲಪ್ಪ ಗಣಾಚಾರಿ, ಜಗದೀಶ ಹಕ್ಕಂಡಿ, ಸುಭಾಸ ಗುಡಿಮನಿ, ಮೈಲಾರಪ್ಪ ಕಲಕೇರಿ, ರಂಗಪ್ಪ ಕೋಳಿ, ರವೀಂದ್ರಗೌಡ ಪಾಟೀಲ, ಶ್ರೀನಿವಾಸ ಅಬ್ಬಿಗೇರಿ ಸೇರಿದಂತೆ ಹಲವರಿದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ