ಕನ್ನಡಪ್ರಭ ವಾರ್ತೆ ತುಮಕೂರುಉಪ ಮುಖ್ಯಮಂತ್ರಿಡಾ.ಜಿ. ಪರಮೇಶ್ವರ್ ಅವರ 75ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಗುರುವಾರ ನಗರದ ಹೊರವಲಯದ ಮೈದಾಳದ ಶಿವಶೈಕ್ಷಣಿಕ ಆಶ್ರಮದ ಮಕ್ಕಳೊಂದಿಗೆ ಆಚರಿಸಿದರು. ಆಶ್ರಮದ ಮಕ್ಕಳಿಗೆ ಸಿಹಿ, ಉಪಾಹಾರ ಬಡಿಸಿದರು. ಪಠ್ಯಪರಿಕರ ವಿತರಿಸಿ ತಮ್ಮ ನಾಯಕನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ಕುಮಾರ್, ಡಾ.ಪರಮೇಶ್ವರ್ ಅವರು ಸಜ್ಜನ ಜನನಾಯಕರು. ಆರೋಗ್ಯ ಶಿಕ್ಷಣಕ್ಕೆ ಒತ್ತುಒತ್ತು ನೀಡುತ್ತಿರುವ ಅವರು ಸ್ವತ: ಕ್ರೀಡಾಪಟುವಾಗಿ ಕ್ರೀಡೆಯ ಉತ್ತೇಜನಕ್ಕೆ ಮಹತ್ವ ನೀಡಿದ್ದಾರೆ ಎಂದರು.
ಹಿರಿಯ ಕ್ರೀಡಾಪಟು, ಡಾ.ಪರಮೇಶ್ವರ್ ಅವರ ಕ್ರೀಡಾ ಸಹಪಾಠಿ ಟಿ.ಕೆ.ಆನಂದ್, ಗೃಹ ಮಂತ್ರಿಗಳ ವಿಶೇಷ ಅಧಿಕಾರಿಯಾಗಿದ್ದ ಡಾ.ಸಿ.ನಾಗಣ್ಣ, ಶಿವಶೈಕ್ಷಣಿಕ ಆಶ್ರಮದ ಲೇಪಾಕ್ಷಯ್ಯ, ಮುಖಂಡರಾದ ಮಧುಗೋಲ್ಡ್, ಅನು ಶಾಂತರಾಜು, ನಾರಾಯಣ್, ಶ್ರೀನಿವಾಸ್, ಮಹೇಶ್, ಸೈಯದ್, ಸಿಮೆಂಟ್ ರವಿ, ನಟರಾಜಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.