ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ಸಮಾಜ ಪರಿವರ್ತನ ಸಮುದಾಯ ಸ್ಥಾಪಿಸಿದ ''''''''ಎಸ್.ಆರ್. ಹಿರೇಮಠ ಮಹಾಸಂಗ್ರಾಮಿ ಪ್ರಶಸ್ತಿ (₹ 1 ಲಕ್ಷ ಮೌಲ್ಯದ ಪ್ರಶಸ್ತಿ) ಸ್ವೀಕರಿಸಿದ ಅವರು, ಪಶ್ಚಿಮ ಘಟ್ಟಗಳಿಗೆ ಸಮಾನಾಂತರವಾಗಿ ಅರಾವಳಿ ಬೆಟ್ಟಗಳು ಉತ್ತರ ಭಾರತದ ಜೀವವೈವಿಧ್ಯ ತಾಣವಾಗಿವೆ. ಇವು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ಹರಡಿದ್ದು, ಜೀವವೈವಿಧ್ಯತೆ ಬಲಪಡಿಸಲು ಮತ್ತು ಈ ಬೆಟ್ಟಗಳ ಶ್ರೇಣಿಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಅದರ ಬದಲು ಕೇಂದ್ರವು, ಅರಾವಳಿಗಳ ವ್ಯಾಪ್ತಿಯನ್ನು ಮರು ವ್ಯಾಖ್ಯಾನಿಸುವ ಹೊಸ ನೀತಿಯನ್ನು ಪರಿಚಯಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರದ ಮೇಲೆ ಒತ್ತಡ ಹೇರಿ:ಮಾಹಿತಿ ಪ್ರಕಾರ, 100 ಮೀಟರ್ಗಿಂತ ಹೆಚ್ಚಿನ ಎತ್ತರದ ಬೆಟ್ಟಗಳನ್ನು ಮಾತ್ರ ಅರಾವಳಿ ಬೆಟ್ಟಗಳೆಂದು ವರ್ಗೀಕರಿಸಲಾಗಿದೆ ಮತ್ತು ಅವುಗಳನ್ನು ಸಂರಕ್ಷಿತವೆಂದು ಘೋಷಿಸಲಾಗಿದೆ. ಆದರೆ, ಉಳಿದ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಇದು ಆ ಬೆಟ್ಟಗಳ ಪ್ರದೇಶದ ಪರಿಸರ ವ್ಯವಸ್ಥೆಗೆ ವಿಪತ್ತನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿದ ಪ್ರಶಾಂತ ಭೂಷಣ್, ಅರಾವಳಿ ಬೆಟ್ಟಗಳ ಪರಿಸರ ಕೆಡಿಸುವ ಕಾರ್ಯ ತಕ್ಷಣವೇ ಆಗದಿರಬಹುದು. ಆದರೆ ಬರುವ ದಿನಗಳಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಪರಿಸರದ ದೀರ್ಘಕಾಲೀನ ಹಾನಿ ಗುರುತಿಸಿ ಅಲ್ಲಿ ವಾಣಿಜ್ಯ ಶೋಷಣೆ ನಿಲ್ಲಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಕೂಡ ತನ್ನ ಲೆಕ್ಕಪರಿಶೋಧನಾ ಪಾತ್ರವನ್ನು ಮೊಟಕುಗೊಳಿಸಿದೆ ಎನಿಸುತ್ತಿದೆ. ಸುಮಾರು ಮೂರನೇ ಒಂದು ಭಾಗದಷ್ಟು ಯೋಜನೆಗಳನ್ನು ಮಾತ್ರ ಪರಿಶೀಲಿಸಿದೆ. ನಿರ್ಣಾಯಕ ಸಿಎಜಿ ವರದಿಗಳು ಹೆಚ್ಚಾಗಿ ವಿರೋಧ ಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದರು.