ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮಾರ್ಕಬ್ಬಿನಹಳ್ಳಿ ಗ್ರಾಪಂನ ರಸ್ತೆ ಬದಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಅರಣ್ಯ ಕಾಮಗಾರಿ ವೀಕ್ಷಿಸಿದ್ದು, ಬೇಸಿಗೆ ಸಮಯದಲ್ಲಿ ಸಸಿಗಳಿಗೆ ನೀರಿನ ವ್ಯವಸ್ಥೆ ಮಾಡುವ ಮೂಲಕ ಸಸಿಗಳು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಜಿ.ಬಿ.ರಾಮಗಿರಿಮಠ ಬೀಟ್ ಫಾರೆಸ್ಟ್ ಸಿಬ್ಬಂದಿಗೆ ಸೂಚಿಸಿದರು. ಈ ವರ್ಷ 29 ಸಾವಿರ ಸಸಿ ನೆಡುವ ಗುರಿ ಹೊಂದಿದ್ದು, ಪೂರ್ಣಗೊಳಿಸಲು ತಿಳಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಮಕ್ಕಳ ದಾಖಲಾತಿ, ಪೌಷ್ಟಿಕ ಆಹಾರ ಮತ್ತು ಶೌಚಾಲಯ ವ್ಯವಸ್ಥೆ ಕುರಿತು ಪರಿಸೀಲಿಸಿದರು. ಮಕ್ಕಳಿಗಾಗಿ ತಯಾರಿಸಿದ ಆಹಾರವನ್ನು ಖುದ್ದು ತಾವೇ ಸೇವಿಸಿ ಪರೀಕ್ಷಿಸಿದರು.
ಸಾತಿಹಾಳ ಗ್ರಾಪಂ ವ್ಯಾಪ್ತಿಯ ಬೈರವಾಡ ಗ್ರಾಮದ ಅಮೃತ್ ಸರೋವರಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.ಅಮೃತ್ ಸರೋವರ ಯೋಜನೆಯು ಬೇಸಿಗೆ ಸಮಯದಲ್ಲಿ ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಒದಗಿಸುವುದು ಮುಖ್ಯ. ಆದ್ದರಿಂದ ಅಮೃತ ಸರೋವರ ಯೋಜನೆ ನೀರು ಕಲುಷಿತವಾಗದಂತೆ ಸುತ್ತಲಿನ ಆವರಣವನ್ನು ಸ್ವಚ್ಛವಾಗಿಡುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ರಾಮು.ಜಿ.ಅಗ್ನಿ, ಫರಿದಾ ಪಠಾಣ, ಶಾಂತಗೌಡ ನ್ಯಾಮಣ್ಣವರ, ಸಹಾಯಕ ನಿರ್ದೇಶಕರು ಶಿವಾನಂದ ಮೂಲಿಮನಿ, ಮಾರ್ಕಬ್ಬಿನಹಳ್ಳಿ ಗ್ರಾಪಂ ಪಿಡಿಒ ಎಂ.ಎನ್.ಕತ್ತಿ, ವಲಯ ಅರಣ್ಯ ಅಧಿಕಾರಿ ಎಂ.ವೈ.ಮಲ್ಕಣ್ಣವರ, ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ, ಸೋಹೇಬ್ ಮಾರಡಗಿ, ಅರ್ಷದ್ ಕೊಟ್ನಾಳ, ಮುರುಗೇಶ್ ಕಟ್ಟಿ, ಲಾಲಸಾಬ ವಾಲೀಕಾರ, ದಾವಲಸಾಬ ಮುಜಾವರ, ಐಇಸಿ ಸಂಯೋಜಕ ಸಿದ್ದು ಕಾಂಬಳೆ ಇದ್ದರು. ಅಧಿಕಾರಿಗಳ ತರಾಟೆ