ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಚಿಕ್ಕಕೊಡಗಲಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಝೋನಲ್ ಬ್ಯಾಲೆನ್ಸ್ ಟ್ಯಾಂಕ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯದ ಗುಣಮಟ್ಟ, ಕಾಮಗಾರಿಯ ವೇಗ, ತಾಂತ್ರಿಕ ಮಾನದಂಡಗಳು ಹಾಗೂ ನೀರಿನ ಸರಬರಾಜು ವ್ಯವಸ್ಥೆಗೆ ಲಭ್ಯವಾಗುವ ಪ್ರಯೋಜನಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿದರು.
ಇದೇ ವೇಳೆ ಚಿಕ್ಕಕೊಡಗಲಿ ಎಲ್.ಟಿ. ವಲಯದಲ್ಲಿರುವ ಎಸ್.ಸಿ./ಎಸ್.ಟಿ. ಕಾಲೋನಿ ಪ್ರದೇಶಕ್ಕೆ ಭೇಟಿ ನೀಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು. ರಸ್ತೆಯ ಅಗಲ, ಆಳ, ಡ್ರೈನೇಜ್ ವ್ಯವಸ್ಥೆಯ ಹೊಂದಾಣಿಕೆ, ಸುರಕ್ಷತಾ ಮಾನದಂಡಗಳ ಪಾಲನೆಯ ಕುರಿತು ಪರಿಶೀಲಿಸಿದರು.ಚಿಕ್ಕಕೊಡಗಲಿ ಎಲ್.ಟಿ. ವಲಯದಲ್ಲೇ ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡ ಕಾರ್ಯವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿದರು.
ಕಟ್ಟಡದ ಗುಣಮಟ್ಟ, ತರಗತಿ ಕೊಠಡಿಗಳ ವಿನ್ಯಾಸ, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗೆ ಬೇಕಾಗಿರುವ ಮೂಲ ಸೌಕರ್ಯಗಳ ಪ್ರಸ್ತುತ ಸ್ಥಿತಿ ಹಾಗೂ ಕಾಮಗಾರಿಯ ನಿರೀಕ್ಷಿತ ಪೂರ್ಣಗೊಳಿಸುವಿಕೆ ಕುರಿತು ಸಂಬಂಧಿಸಿದ ಎಂಜಿಜಿನಿಯರ್ಗಳು ಮತ್ತು ಗುತ್ತಿಗೆದಾರರೊಂದಿಗೆ ಸಮಾಲೋಚನೆ ಮಾಡಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಬಾಗಲಕೋಟೆಯ ಕಾರ್ಯನಿರ್ವಾಹಕ ಅಭಿಯಂತರ ಆಕಾಶ ವಂದೆ, ಹುನಗುಂದ ಹಾಗೂ ಇಳಕಲ್ಲ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿ ದೇಶಪಾಂಡೆ ಸೇರಿದಂತೆ ಇತರು ಇದ್ದರು.
ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಇಳಕಲ್ಲ ತಾಲೂಕಿನ ಬಳಕುಂದಿ ಗ್ರಾಮಕ್ಕೆ ಭೇಟಿ ನೀಡಿ ಪ್ರಗತಿಯಲ್ಲಿರುವ ಎಫ್ಎಸ್ಟಿಪಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆಯ ವೇಳೆ ಕಾಮಗಾರಿಯ ತಾಂತ್ರಿಕ ಮಾನದಂಡಗಳು, ಕಾರ್ಯದ ಗುಣಮಟ್ಟ, ಕಾಮಗಾರಿಯ ಪ್ರಗತಿ, ಪರಿಸರ ಸುರಕ್ಷತಾ ಕ್ರಮಗಳು ಹಾಗೂ ಯೋಜನೆಯ ಸಮಯ ಪಾಲನೆ ಕುರಿತು ಸಂಬಂಧಿತ ಅಧಿಕಾರಿಗಳು ಮತ್ತು ಎಂಜಿನಿಯರ್ಗಳ ಮಾಹಿತಿ ಪಡೆದುಕೊಂಡರು. ಕಾರ್ಯವನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಅಗತ್ಯ ಸೂಚನೆ ನೀಡಿದರು.ಇಳಕಲ್ಲ ತಾಲೂಕಿನ ಬಳಕುಂದಿ ಗ್ರಾಮಕ್ಕೆ ಭೇಟಿ ನೀಡಿ ಪ್ರಗತಿಯಲ್ಲಿರುವ ಎಫ್ಎಸ್ಟಿಪಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು.
ಸ್ಥಳ ಪರಿಶೀಲನೆಯ ವೇಳೆ ಕಾಮಗಾರಿಯ ತಾಂತ್ರಿಕ ಮಾನದಂಡಗಳು, ಕಾರ್ಯದ ಗುಣಮಟ್ಟ, ಕಾಮಗಾರಿಯ ಪ್ರಗತಿ, ಪರಿಸರ ಸುರಕ್ಷತಾ ಕ್ರಮಗಳು ಹಾಗೂ ಯೋಜನೆಯ ಸಮಯ ಪಾಲನೆ ಕುರಿತು ಸಂಬಂಧಿತ ಅಧಿಕಾರಿಗಳು ಮತ್ತು ಎಂಜಿನಿಯರ್ಗಳ ಮಾಹಿತಿ ಪಡೆದುಕೊಂಡರು. ಕಾರ್ಯವನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಅಗತ್ಯ ಸೂಚನೆ ನೀಡಿದರು.