ಕನ್ನಡಪ್ರಭ ವಾರ್ತೆ ಚಡಚಣ
ಚಡಚಣ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 16 ಸ್ಥಾನಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 4 ಹಾಗೂ ಪಕ್ಷೇತರ 4 ಸ್ಥಾನಗಳಲ್ಲಿ ಜಯ ಪಡೆದಿವೆ. ಅತೀ ದೊಡ್ಡ ಪಕ್ಷವಾಗಿರುವ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದೆ. ವಾರ್ಡ ನಂ.1ರಲ್ಲಿ ರಾಜು ಕೋಳಿ(ಬಿಜೆಪಿ) 409 ಮತಗಳನ್ನು ಪಡೆದು ಜಯಶಾಲಿಯಾದರು. ಪ್ರತಿ ಸ್ಪರ್ಧಿ ಪರಮಾನಂದ ಕೋಳಿ 220 ಮತ ಪಡೆದರು. ವಾರ್ಡ ನಂ.2 ರಲ್ಲಿ ಸೋನಾಬಾಯಿ ಗಂಟಗಲಿ (ಬಿಜೆಪಿ) 502 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಮಾಸಾಬಿ.ಲಾ.ಮಸಳಿ (175 ಮತ) ಅವರನ್ನು ಸೋಲಿಸಿದರು. ವಾರ್ಡ ನಂ.3 ರಲ್ಲಿ ಸ್ವತಂತ್ರ ಅಭ್ಯರ್ಥಿ ಗೌಸಪಾಕ ಅತ್ತಾರ 331 ಮತ, ಪ್ರತಿಸ್ಪರ್ಧಿ ಮೀರಾಸಾಬ ಅತ್ತಾರ (ಕಾಂಗ್ರೆಸ್) 283, ರಾಮ ಅವಟಿ (ಬಿಜೆಪಿ) 293 ಮತ ಪಡೆದರು. ವಾರ್ಡ 4 ರಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಕಾಶ ಬಾ.ಪಾಟೀಲ 421 ಮತಗಳನ್ನು ಪಡೆದು ಜಯಶಾಲಿಯಾದರು. ಪ್ರತಿಸ್ಪರ್ಧಿ ಸಚಿನ್ ಭಮಶೇಟ್ಟಿ ( ಬಿಜೆಪಿ) 315, ಶಿವಶಂಕರ ಡೋಣಜಮಠ (ಕಾಂಗ್ರೆಸ್) 14 ಮತಗಳನ್ನು ಪಡೆದರು. ವಾರ್ಡ ನಂ.5 ರಲ್ಲಿ ಇಲಾಇ ನಾದಾಫ(ಕಾಂಗ್ರೆಸ್) 545, ಸೋಮಶೇಖರ ಬಡಿಗೇರ(ಬಿಜೆಪಿ) 137 ಪಡೆದರು. ವಾರ್ಡ ನಂ 6ರಲ್ಲಿ ಚೈತನ್ಯಕುಮಾರ ದುಂ.ನಿರಾಳೆ (ಪಕ್ಷೇತರ) 317 ಮತ, ನಾಗರಾಜ ನಿರಾಳೆ (ಬಿಜೆಪಿ) 262, ಇಸಾಕ್ ಮೀ ನದಾಫ (ಕಾಂಗ್ರೆಸ್) 43 ಮತಗಳನ್ನು ಪಡೆದರು. ವಾರ್ಡ ನಂ. 7 ರಲ್ಲಿ ಸುರೇಖಾ ಧ.ಬನಸೋಡೆ (ಬಿಜೆಪಿ) 303, ವಿದ್ಯಾ ದ.ಬನಸೋಡೆ (ಕಾಂಗ್ರೆಸ್) 285, ರಣುಬಾಯಿ ಬನಸೋಡೆ, (ಪಕ್ಷೇತರ) 201 ಮತಗಳನ್ನು ಪಡೆದು ಪರಾಭವಗೊಂಡರು.ವಾರ್ಡ ನಂ.8 ರಲ್ಲಿ ಅರಣಾಕ್ಷಿ ಗಡದೇವರಮಠ (ಬಿಜೆಪಿ) 337, ಮಮತಾಜ ಶಬ್ಬೀರ ನದಾಫ (ಕಾಂಗ್ರೆಸ್) 277 ಮತ ಪಡೆದರು. ವಾರ್ಡ ನಂ 9 ರಲ್ಲಿ ಶ್ರೀಕಾಂತ ಗಂಟಗಲ್ಲಿ (ಬಿಜೆಪಿ) 258 ಮತಗಳನ್ನು ಪಡೆದು ಜಯಶಾಲಿಯಾದರು. ಅಲ್ತಾಫ್ ನದಾಫ (ಕಾಂಗ್ರೆಸ್) 284, ನಿತೀಶಕುಮಾರ ನಿರಾಳೆ 220, ಅಪ್ಪಾಸಾಹೇಬ ಹಳ್ಳಿ (ಪಕ್ಷೇತರ) 81 ಮತಗಳು. ವಾರ್ಡ ನಂ.10 ರಲ್ಲಿ ಬಾಲಾಜಿ ಗಾಡಿವಡ್ಡರ (ಬಿಜೆಪಿ) 346, ಬೀರಪ್ಪ ಜ.ಬನಸೋಡೆ(ಕಾಂಗ್ರೆಸ್) 297, ಸಾಗರ ಆಲಕುಂಟೆ (ಪಕ್ಷೇತರ)289, ಲೋಹಿತ ಪಾತ್ರೋಟೆ (ಪಕೇತರ)32 ಮತ ಪಡೆದರು. ವಾರ್ಡ ನಂ.11ರಲ್ಲಿ ಚಂದ್ರಕಾಂತ ಕಲಮನಿ(ಪಕ್ಷೇತರ) 442 ಮತಗಳನ್ನು ಪಡೆದು ಜಯಶಾಲಿಯಾದರು. ಚಂದ್ರಶೇಖರ ಶಿ.ಪಾಟೀಲ (ಬಿಜೆಪಿ) 335 ಮತಗಳು ಪಡೆದು ಪರಾಭಗೊಂಡರು.ವಾರ್ಡ ನಂ.12ರಲ್ಲಿ ಇಬ್ರಾಹಿಂ ಸೌದಾಗರ (ಕಾಂಗ್ರೆಸ್) 533 ಮತಗಳನ್ನು ಪಡೆದು ಜಯಶಾಲಿಯಾದರು. ಚಂದ್ರಶೇಖರ ನಿರಾಳೆ( ಬಿಜೆಪಿ) 424 ಮತಗಳು ಪಡೆದು ಪರಾಭವಗೊಂಡರು. ವಾರ್ಡ.13ರಲ್ಲಿ ಸಾವಿತ್ರಿ ಶ್ರೀ ಮಠ (ಬಿಜೆಪಿ) 508 ಮತಗಳನ್ನು ಪಡೆದು ಜಯಶಾಲಿಯಾದರು. ಮಂಜುಳಾ ಪೂಜಾರಿ (ಕಾಂಗ್ರೆಸ್) 178 ಮತ ಪಡೆದು ಪರಾಭವಗೊಂಡರು. ವಾರ್ಡ ನಂ.14 ರಲ್ಲಿ ಸಾವಿತ್ರಿ ರ.ಶಿಂಧೆ (ಕಾಂಗ್ರೆಸ್) 455 ಮತಗಳನ್ನು ಪಡೆದು ಜಯಶಾಲಿಯಾದರು. ಸವಿತಾ ತು.ಶಿಂಧೆ(ಬಿಜೆಪ) 320 ಮತಗಳು ಪಡೆದು ಪರಾಭವಗೊಂಡರು.ವಾರ್ಡ ನಂ.15 ರಲ್ಲಿ ಮಲ್ಲಿಕಾರ್ಜುನ ಧೋತ್ರೆ(ಬಿಜೆಪಿ) 292 ಮತ ಪಡೆದು ಜಯಶಾಲಿಯಾದರು, ಪ್ರಶಾಂತ ಮುಂಡೇವಾಡಿ(ಕಾಂಗ್ರೆಸ್) 11ವಿಶ್ವನಾಥ ಧೋತ್ರೆ(ಪಕ್ಷೇತರ) 245 ಮತಗಳು ಪಡೆದು ಪರಾಭವಗೊಂಡರು. ವಾರ್ಡ ನಂ.16ರಲ್ಲಿ- ಸಾವಿತ್ರಿ ಡೋಳ್ಳಿ (ಕಾಂಗ್ರೆಸ್) 405 ಮತಗಳನ್ನು ಪಡೆದು ಜಯಶಾಲಿಯಾದರು. ಕಸ್ತೂರಿಬಾಯಿ ಅ.ಪಾಟೀಲ 256 ಮತಗಳು ಪಡೆದು ಪರಾಭವಗೊಂಡರು.ಕೋಟ್...
ಚಡಚಣ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 16 ಅಭ್ಯರ್ಥಿಗಳಲ್ಲಿ 8 ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ನಾಲ್ಕು ಜನ ಪಕ್ಷೇತರರಲ್ಲಿ ಮೂವರು ಬಿಜೆಪಿ ಟಿಕೆಟ್ ವಂಚಿತರು. ಅವರೆಲ್ಲರೂ ಬಿಜೆಪಿಗೆ ಬೆಂಬಲ ನೀಡವುದು ಖಚಿತ. ಸಂಜಯ ಐಹೊಳ್ಳಿ. ಬಿಜೆಪಿ ಮುಖಂಡಚಿದಾನಂದ ಚಲವಾದಿ. ರಾಜ್ಯ ಪ್ರತಿಕ್ಷಾ ಸದಸ್ಯ