ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಂತರ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ, ದೇಶದಲ್ಲಿ ಎನ್ಡಿಎ 400ಕ್ಕೂ ಹೆಚ್ಚು ಸ್ಥಾನ ಲಭಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಮೋದಿ ಹಿಡಿಯಬೇಕು ಎಂಬ ದೃಷ್ಟಿಯಿಂದ ಕಳೆದ ಎರಡೂವರೆ ತಿಂಗಳಿನಿಂದ ಪ್ರತಿನಿತ್ಯವು ವಿವಿಧ ಹೋಮ-ಹವನ ನಡೆಸಿ ಪೂರ್ಣಗೊಂಡಿದೆ ಎಂದರು.
ಅರ್ಚಕ ಉದಯಶಂಕರ್ ಮಾತನಾಡಿ, ಶೃಂಗೇರಿ ಶಂಕರಮಠವು ಇತಿಹಾಸ ಬರೆಯುವ ಕ್ಷೇತ್ರವಾಗಿದೆ. ಇಲ್ಲಿನ ಗುರುಗಳು ಸಂಸ್ಕೃತಿ, ಪುರಾತನ ತತ್ವ, ಧಾರ್ಮಿಕ ನೆಲಗಟ್ಟನ್ನು ಉಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರಾರಂಭಿಸಿದ್ದಾರೆ. ಅದರಂತೆ ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಜಿಲ್ಲಾ ಬಿಜೆಪಿ ಪರವಾಗಿ ಚಂಡಿಕಾ ಹೋಮ ನಡೆಸಲಾಗಿದೆ ಎಂದರು.ಕಳೆದ ಶಿವರಾತ್ರಿಯಿಂದ ನಿತ್ಯಪೂಜೆ, ಚಕ್ರರಾರ್ಚನೆ, ಚಂಡಿಕಾ ಪಾರಾಯಣ, ರುದ್ರಾಭಿಷೆಕ ಪ್ರಾರಂಭಿಸಿ ಅಂತಿನ ದಿನವಾದ ಇಂದು ಚಂಡಿಕಾ ಹೋಮ ನೆರವೇರಿಸುವ ಮೂಲಕ ಸಂಪನ್ನಗೊಂಡಿದೆ. ವಿಶೇಷ ಪೂಜೆ ನಂತರ ಒಂಭತ್ತು ಮಂದಿ ಮುತ್ತೈದೆಯರಿಗೆ ಬಾಗಿನ ಅರ್ಪಣೆ ಮಾಡಲಾಯಿತು.