ವಚನಶಿಲಾ ಮಂಟಪದಲ್ಲಿ ಚನ್ನಬಸವ ಸ್ವಾಮೀಜಿ ಲೀನ

KannadaprabhaNewsNetwork |  
Published : Dec 13, 2025, 03:15 AM IST
12ಬಿಎಸ್ವಿ02- ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಚನ್ನಬಸವಸ್ವಾಮೀಜಿಗಳು ಲಿಂಗೈಕ್ಯರಾದ ಶುಕ್ರವಾರ ಸಂಜೆ ಉಭಯ ಸಚಿವರಾದ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ಸರ್ಕಾರದ ಪರವಾಗಿ ಲಿಂಗೈಕ್ಯ ಶ್ರೀಗಳ ಗೌರವಾರ್ಥವಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸಿಇಓ ಅವರು ಪೊಲೀಸ್ ಗೌರವ ಸಲ್ಲಿಸಿದರು. | Kannada Prabha

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಚನ್ನಬಸವ ಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿರಕ್ತಮಠದ ಸಂಪ್ರದಾಯದಂತೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಚನ್ನಬಸವ ಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿರಕ್ತಮಠದ ಸಂಪ್ರದಾಯದಂತೆ ನೆರವೇರಿಸಲಾಯಿತು. ವಚನ ಶಿಲಾ ಮಂಟಪದ ಆವರಣದಲ್ಲಿ ನಿರ್ಮಿಸಿದ್ದ ಗದ್ದುಗೆಯಲ್ಲಿ ಶ್ರೀಗಳು ಲೀನರಾದರು.

ಸರ್ಕಾರದ ಪರವಾಗಿ ಭಾಗಿಯಾಗಿದ್ದ ಸಚಿವ ಎಂ.ಬಿ.ಪಾಟೀಲ ಹಾಗೂ ಶಿವಾನಂದ ಪಾಟೀಲ ಸಮ್ಮುಖದಲ್ಲಿ ಲಿಂಗೈಕ್ಯ ಶ್ರೀಗಳ ಗೌರವಾರ್ಥವಾಗಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ಶಾಸಕ ರಾಜುಗೌಡ ಪಾಟೀಲ, ಎಂಎಲ್ಸಿ ಭೀಮರಾವ ಪಾಟೀಲ, ಜಿಲ್ಲಾಧಿಕಾರಿ ಕೆ.ಆನಂದ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಿಇಒ ರಿಷಿ ಆನಂದ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಅಪಾರ ಭಕ್ತರು ಆಗಮಿಸಿ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.

ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆಯು ವಿರಕ್ತಮಠದಿಂದ ಶುಕ್ರವಾರ ಮಧ್ಯಾಹ್ನ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿರಕ್ತಮಠಕ್ಕೆ ಸಂಜೆ ಆಗಮಿಸಿತು. ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳಗಳು ಭಾಗವಹಿಸಿದ್ದವು. ಶ್ರೀಗಳ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ನಡೆಯಿತು. ಮೆರವಣಿಗೆಯ ಸಾಗುವ ಮಾರ್ಗದಲ್ಲಿ ಗ್ರಾಮಸ್ಥರು ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ರಸ್ತೆ ಅಕ್ಕ-ಪಕ್ಕದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಭಕ್ತ ಸಮೂಹ ಓಂ ಶ್ರೀಗುರುಬಸವ ಲಿಂಗಾಯನಮಃ ಪಠಿಸಿದರು.

ಪೂಜ್ಯರು ಶ್ರೀಮಠಕ್ಕೆ ಆಗಮಿಸುತ್ತಿದ್ದ ಭಕ್ತರಿಗೆ ಉಣಬಡಿಸುತ್ತಿದ್ದ ತುಪ್ಪ, ಸಜ್ಜಕ, ಅನ್ನ ಸಾರು ಪ್ರಸಾದವನ್ನು ಅಂತಿಮ ದರ್ಶನ ಪಡೆಯಲು ಬಂದ ಭಕ್ತರು ಸ್ವೀಕರಿಸಿದರು.

ಶ್ರೀಮಠದ ಕಿರಿಯ ಸ್ವಾಮೀಜಿ, ಡಾ.ಸಿದ್ದಲಿಂಗ ಸ್ವಾಮೀಜಿ,ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ, ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಧಾರವಾಡದ ಮುರುಘಾಮಠದ ಶ್ರೀಗಳು, ನಿಡಸೋಸಿಯ ಜಗದ್ಗುರುಗಳು, ಮೂರುಸಾವಿರ ಮಠದ ಜಗದ್ಗುರುಗಳು, ಬೀಳಗಿ ಕಲ್ಮಠದ ಶ್ರೀಗಳು, ವಡವಡಗಿಶ್ರೀಗಳು, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಸಿದ್ದಲಿಂಗ ಸ್ವಾಮೀಜಿ, ಯರನಾಳದ ಸಂಗನಬಸವಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವಸ್ವಾಮೀಜಿ, ಪಡೇಕನೂರಿನಶ್ರೀಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ದಾವಣಗೆರೆಯ ಬಸವಪ್ರಭು ಸ್ವಾಮೀಜಿ, ಕಲ್ಲಿನಾಥದೇವರು, ಹಾವೇರಿಯ ಶಾಂತಲಿಂಗ ಸ್ವಾಮೀಜಿ, ನದಿಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ,ಗುಂಡಕನಾಳ ಸ್ವಾಮೀಜಿ, ಗದಗದ ಚಂದ್ರಶೇಖರ ಶಿವಾಚಾರ್ಯ,ಬಸರಕೋಡದ ಜಗದೀಶ ಸ್ವಾಮೀಜಿ, ಬೀಳಗಿಯ ಚನ್ನಬಸವ ಸ್ವಾಮೀಜಿ,ಹಿಕ್ಕನಗುತ್ತಿಯ ಪ್ರಭುಲಿಂಗ ಸ್ವಾಮೀಜಿ, ಕವಡಿಮಟ್ಟಿಯ ಬಸವಪ್ರಭು ಸ್ವಾಮೀಜಿ, ಲಟ್ಟಗೇರಿಯ ಗುರುಮೂರ್ತಿ, ಮಣೂರಿನ ಸಂಗನಬಸವ ಸ್ವಾಮೀಜಿ, ಇಂಗಳಗೇರಿಯ ಅಕ್ಕಮಹಾದೇವಿ ಮಾತಾ, ಮುಳವಾಡದ ಸಿದ್ಧಲಿಂಗ ಶಿವಾಚಾರ್ಯ, ತೇಲಸಂಗದ ವೀರೇಶ್ವರ ದೇವರು, ಜಮಖಂಡಿ ಓಲೇಮಠದ ಆನಂದ ದೇವರು, ಆಲಮೇಲದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಗುಳೇದಗುಡ್ಡ ಶ್ರೀಗಳು, ಕಲಬುರ್ಗಿಯ ಸಿದ್ಧಲಿಂಗ ಸ್ವಾಮೀಜಿ, ಚಿಮ್ಮಲಗಿಯ ಸಿದ್ಧರೇಣುಕ ಸ್ವಾಮೀಜಿ, ಮುದ್ದೆಬಿಹಾಳದ ಲಾಲನಿಂಗೇಶ್ವರ ಶರಣರು, ಸೋಲಾಪೂರದ ಸ್ವಾಮಿನಾಥ ಸ್ವಾಮೀಜಿ, ಅಥಣಿಯ ಸಿದ್ಧಲಿಂಗ ಸ್ವಾಮೀಜಿ, ಕೊಕಟನೂರಿನ ಮಡಿವಾಳೇಶ್ವರ ಸ್ವಾಮೀಜಿ,ಬನಹಟ್ಟಿಯ ಮಹಾಂತ ದೇವರು, ಜಮಖಂಡಿಯ ಶ್ರೀದೇವಿತಾಯಿ,ನಾಗಠಾಣದ ಚನ್ನಬಸವ ಸ್ವಾಮಿಜಿ,ಗುಣದಾಳದ ವಿವೇಕಾನಂದರ ಸ್ವಾಮೀಜಿ, ನಾವದಗಿ ಶ್ರೀಗಳು, ಗ್ರಾಪಂ ಅಧ್ಯಕ್ಷ ಬನ್ನೆಪ್ಪ ಡೋಣೂರ, ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ನಿವೃತ್ತ ತಹಸೀಲ್ದಾರ ಎಂ.ಎನ್.ಚೋರಗಸ್ತಿ, ಅಶೋಕ ಹಂಚಲಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಹಾಸಿಂಪೀರ ವಾಲಿಕಾರ, ನಿಂಗಪ್ಪ ಬೊಮ್ಮನಹಳ್ಳಿ, ಕಲ್ಲು ದೇಸಾಯಿ, ಸಂಗಮೇಶ ಓಲೇಕಾರ, ಡಾ.ಮಹಾಂತೇಶ ಬಿರಾದಾರ, ಡಾ. ಎಮ್. ಎಸ್. ಮದಭಾವಿ,ಉಮೇಶ ಕವಲಗಿ, ಈರಣ್ಣ ಬೆಕಿನಾಳ, ಶಿವನಗೌಡ ಬಿರಾದಾರ, ಎ.ಎಂ.ಪಾಟೀಲ ಉಕ್ಕಲಿ. ಶಾಂತು ಬೈಚಬಾಳ, ಅರವಿಂದ ಕುಲಕರ್ಣಿ, ನಾನಾಗೌಡ ಪಾಟೀಲ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಸಮೂಹ ಪಾಲ್ಗೊಂಡಿದ್ದರು. ವಚನಶಿಲಾ ಮಂಟಪದಲ್ಲಿ ನಡೆದ ಅಂತಿಮ ದಾರ್ಮಿಕ ವಿಧಿವಿಧಾನ ಕ್ರಿಯೆಗಳನ್ನು ಭಕ್ತಸಮೂಹ ಶ್ರೀಮಠದ ಹೊರಗಡೆ ಅಳವಡಿಸಲಾದ ಎಲ್.ಡಿ.ಪರದೆಯಲ್ಲಿ ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ