ನರೇಗಲ್ಲ: ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾದದ್ದು, ಅವರು ಸ್ವಾತಂತ್ರ್ಯದ ಹೋರಾಟದ ಕಿಚ್ಚು ಹಚ್ಚಿದ ವೀರ ಮಹಿಳೆ ಎಂದು ಸಿದ್ದಣ್ಣ ಬಂಡಿ ತಿಳಿಸಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ನಡೆದ ವೀರರಾಣಿ ಕಿತ್ತೂರ ಚೆನ್ನಮ್ಮನವರ 246ನೇ ಜಯಂತ್ಯುತ್ಸವ ಹಾಗೂ 200ನೇ ವಿಜಯೋತ್ಸವದ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆನ್ನಮ್ಮ ರಾಜ ಮನೆತನದವರಾಗಿದ್ದರಿಂದ ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ಬಳಸುವ ಪರಿ ಬಗ್ಗೆ ತರಬೇತಿ ಪಡೆದಿದ್ದರು.ಚೆನ್ನಮ್ಮ ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯನ್ನು ವಿರೋಧಿಸಿದ ರಾಣಿ ಚೆನ್ನಮ್ಮ ಬ್ರಿಟಿಷರಿಗೆ ಸಲ್ಲಿಸಬೇಕಾಗಿದ್ದ ಕಪ್ಪ ಕಾಣಿಕೆ ಕೊಡುವುದನ್ನು ನಿರಾಕರಿಸಿ’ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಪ್ರಥಮ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ. ಪ್ರತಿಯೊಬ್ಬ ಮಹಿಳೆಯರು ಕೂಡ ಅದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಗಳು ಮಾತಾನಾಡಿ, ಚೆನ್ನಮ್ಮನನ್ನು ಕೇವಲ ಒಂದು ಜಾತಿಗೆ ಮೀಸಲಾಗದೆ ಎಲ್ಲರು ಅವರು ತತ್ವಾದರ್ಶಗಳನ್ನು ಬೆಳೆಸಿಕೊಂಡು ಮುಂದೆ ಬರಬೇಕು ದೇಶಕ್ಕೆ ಅವರು ತಮ್ಮ ಪ್ರಾಣ ಸಮರ್ಪಣೆ ಮಾಡಿದರು, ಅಂತಹ ಮಹಾನ್ ಹೋರಾಟಗಾರ್ತಿ ಮಾಡಿದ ಶೌರ್ಯ ಸಾಧನೆ ನೆನೆಯುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ದೇಶಿಸಿ ಡಿಡಿಪಿಐ ಆರ್.ಎಸ್. ಬುರಡಿ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಎಸ್.ಎ. ಸಂಕನಗೌಡರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕು ಉಪಾಧ್ಯಕ್ಷ ವಿಶ್ವನಾಥ ಜಿಡ್ಡಿಬಾಗಿಲು, ಬಸವರಾಜ ಅಂಗಡಿ, ಮುತ್ತಣ್ಣ ರೋಟ್ಟಿ, ಹನುಮಂತಪ್ಪ ಪ್ರಬಣ್ಣವರ, ಜಗದೀಶ ಕುಸಮ್ಮನವರ, ಅಂದಪ್ಪ ಮಲ್ಲಾಪುರ, ಗುರಲಿಂಗಪ್ಪ ಅಂಗಡಿ, ಅಂದಪ್ಪ ಸರ್ವಿ, ಶರಣಪ್ಪ ಹೊನ್ನವಾಡ, ವಿರೇಶ ರೊಟ್ಟಿ, ಶರಣಪ್ಪ ರೊಟ್ಟಿ, ಮಲ್ಲಿಕಾರ್ಜುನ ಅಂಗಡಿ, ಮಾಂತೇಶ ಹೊನ್ನವಾಡ, ಶರಣಪ್ಪ ಮೋಟಗಿ, ಶರಣಪ್ಪ ಮೆಳ್ಳಿ, ಮಹೇಶ ಸರ್ವಿ, ಅಶೋಕ ಅಂಗಡಿ, ಬಸವರಾಜ ತೊಂಡಿಹಾಳ, ಕೆ.ಎ.ಕೊಪ್ಪದ, ಎಂ.ಎಸ್. ಹೊನ್ನವಾಡ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.