ಹರಪನಹಳ್ಳಿ: ಪೋಷಕರು ಮಕ್ಕಳನ್ನು ದುಡಿಮೆಗೆ ಹಚ್ಚಿದರೆ ಕಾನೂನು ಪ್ರಕಾರ ಅಪರಾಧ. ಇಂತಹ ಕಾನೂನು ಬಾಹಿರ ಕೆಲಸ ಕಾರ್ಯಗಳಿಂದ ಮಕ್ಕಳನ್ನು ದೂರವಿಟ್ಟು ಶಿಕ್ಷಣದ ಕಡೆಗೆ ಹೆಚ್ಚು ಮಹತ್ವ ನೀಡಬೇಕೆಂದು ಪ್ಯಾನಲ್ ವಕೀಲ ಮ್ಯತ್ಯುಂಜಯ ಎಂ. ಹೇಳಿದರು.
ಪ್ರಪಂಚದಲ್ಲಿ ಅತಿಹೆಚ್ಚು ಬಾಲ ಕಾರ್ಮಿಕರು ಕಂಡುಬರುವುದು ಉತ್ತರ ಕೊರಿಯದ ದೇಶದಲ್ಲಿ. ನಮ್ಮ ಭಾರತ ದೇಶದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದಿಂದ ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯವಾಯಿತು. ದೇಶದಲ್ಲಿ ಅಪಾಯಕಾರಿ ಕಾರ್ಖಾನೆಗಳಲ್ಲಿ 14 ವರ್ಷದ ಒಳಗಿನ ಮಕ್ಕಳು ಕೆಲಸಕ್ಕೆ ಹೋಗಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕು ಬಿಸಿಎಂ ಇಲಾಖೆಯ ಕಲ್ಯಾಣಾಧಿಕಾರಿ ಭೀಮಪ್ಪ ಕೆ. ಮಾತನಾಡಿ, ಬಾಲ ಕಾರ್ಮಿಕದಂತಹ ಅನಿಷ್ಟ ಪದ್ಧತಿಯಿಂದ ವಿಧ್ಯಾರ್ಥಿಗಳು ದೂರವಿದ್ದು ಸಮಾಜದಲ್ಲಿ ಕ್ರಿಯಾಶೀಲ ಸೃಜನಶೀಲ ವ್ಯಕ್ತಿಯಾಗಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪ್ರಪಂಚದ ಅತ್ಯಂತ ಬಲಿಷ್ಠವಾದ ಸಂವಿಧಾನ ಭಾರತದ ಸಂವಿಧಾನ ನಮ್ಮ ಸಂವಿಧಾನದ 21ನೇ ವಿಧಿ ಪ್ರಕಾರ ಕಡ್ಡಾಯ ಶಿಕ್ಷಣ ನೀತಿಯನ್ನು ಅನ್ವಯಿಸುತ್ತದೆ. ಈ ನಿಯಮದಂತೆ ವಿಧ್ಯಾರ್ಥಿಗಳು ನಿಮ್ಮ ಜೀವನವನ್ನು ರೂಪಿಸಿಕೊಂಡಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯದ ನಿಲಯ ಪಾಲಕ ಬಿ.ಎಚ್. ಚಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸತತ ಪ್ರಯತ್ನ ಮಾಡಿದಾಗ ಮುಂದೆ ನಿಮ್ಮ ಜೀವನ ಉತ್ತಮವಾಗಿ ರೂಪಿಸಿಕೋಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಅನ್ನಪೂರ್ಣ, ಅಶ್ವಿನಿ, ಪ್ರವೀಣಕುಮಾರ್, ಸುನೀಲಕುಮಾರ್, ಏಕಲವ್ಯ ಮಾರುತಿ, ತಾಲೂಕು ಕಾನೂನು ಸೇವಾ ಸಮಿತಿ ಸಿಬ್ಬಂದಿ ಕೊಟ್ರೇಶ್, ಬಸವರಾಜ್ ವಿದ್ಯಾರ್ಥಿಗಳು ಇದ್ದರು.