ಚಂಕ್ಸ್ ವಿರಾಜಪೇಟೆ ತಂಡ ಚಾಂಪಿಯನ್‌

KannadaprabhaNewsNetwork |  
Published : May 28, 2024, 01:08 AM IST
27.-ಎನ್ ಪಿ ಕೆ-01.   ಚಾಂಪಿಯನ್ ಪಟ್ಟ ಅಲಂಕರಿಸಿದ ಚಂಕ್ಸ್ ವಿರಾಜಪೇಟೆ ತಂಡ(ಬಿ) 27.-ಎನ್ ಪಿ ಕೆ-02.ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪ್ರೆಂಡ್ಸ್ ವಿರಾಜಪೇಟೆ ತಂಡ | Kannada Prabha

ಸಾರಾಂಶ

ಆರ್ಜಿ ಗ್ರಾಮದ ಕಲ್ಲುಬಾಣೆ ಬದ್ರಿಯಾ ಶಾಲಾ ಮೈದಾನದಲ್ಲಿ ಕ್ರಿಕೆಟ್‌ ಪಂದ್ಯಾಕೂಟ ನಡೆಯಿತು. ಒಟ್ಟು 30 ತಂಡಗಳು ಭಾಗವಹಿಸಿದ್ದವು. ಎರಡು ದಿನಗಳ ಕಾಲ ಪಂದ್ಯಾಕೂಟ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕಲ್ಲು ಕಪ್ ತಂಡದ ವತಿಯಿಂದ ನೂರುದ್ದೀನ್, ಹರ್ಷದ್ , ಫಂಸಿರ್ ಹಾಗೂ ರಾಶಿ ಅವರ ಆಯೋಜಕತ್ವದಲ್ಲಿ ವಿರಾಜಪೇಟೆ

ಆರ್ಜಿ ಗ್ರಾಮದ ಕಲ್ಲುಬಾಣೆ ಬದ್ರಿಯಾ ಶಾಲಾ ಮೈದಾನದಲ್ಲಿ ಮೊದಲ ವರ್ಷದ ವಿಲೇಜ್ ಲೆವೆಲ್ ಸೂಪರ್ ನೈನ್ ಕ್ರಿಕೆಟ್ ಪಂದ್ಯಾಕೂಟ ಅದ್ದೂರಿಯಾಗಿ ನಡೆಯಿತು.

ಎರಡು ದಿನಗಳ ಕಾಲ ನಡೆದ ಪಂದ್ಯಕೂಟದಲ್ಲಿ ಕೊಡಗಿನ ಹಲವಾರು ಭಾಗಗಳಿಂದ ಒಟ್ಟು 30 ತಂಡಗಳು ಪಂದ್ಯದಲ್ಲಿ ಭಾಗವಹಿಸಿದವು.

ಫೈನಲ್ ಪಂದ್ಯದಲ್ಲಿ ಚಂಕ್ಸ್ ವಿರಾಜಪೇಟೆ ತಂಡವು 3 ವಿಕೆಟ್ ನಷ್ಟದಲ್ಲಿ 5 ಓವರ್ ಗಳಿಗೆ 66 ರನ್ ಗಳನ್ನು ಬಾರಿಸಿದೆ. ಫ್ರೆಂಡ್ಸ್ ವಿರಾಜಪೇಟೆ ತಂಡವನ್ನು ಆಲ್ ಔಟ್ ಮಾಡುವುದರ ಮೂಲಕ ಚಂಕ್ಸ್ ವಿರಾಜಪೇಟೆ ತಂಡವು 45 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದರು.

ಪಂದ್ಯಾಟದ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಶಾರುಖ್, ಮ್ಯಾನ್ ಆಫ್ ದಿ ಸಿರೀಸ್ ಇಚಾವೋ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ರಜಾಕ್, ಬೆಸ್ಟ್ ಬೌಲರ್ ಅಜಯ್, ಬೆಸ್ಟ್ ಕ್ಯಾಚ್ ಸಕ್ಲೇನ್, ಉತ್ತಮ ಕಾಮೆಂಟರಿ ಟ್ರೋಫಿಯನ್ನು ಉಣ್ಣಿ ಪೆರುಂಬಾಡಿ ಅವರು ಪಡೆದುಕೊಂಡರು.

ಪಂದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಕ್ರಮ ಸಕ್ರಮ ಸಮಿತಿಯ ತಾಲೂಕು ಅಧ್ಯಕ್ಷ ಆರ್ ಕೆ ಸಲಾಂ, ಕಲ್ಲುಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜಿ ಫಾತಿಮಾ, ವಿರಾಜಪೇಟೆ ಪುರಸಭೆ ಸದಸ್ಯರಾದ ರಾಫಿ, ಕಾಂಗ್ರೆಸ್ ಮುಖಂಡರಾದ ಚೇಕು, ಅನಿಲ್ ಕುಮಾರ್ ಅಮ್ಮತ್ತಿ, ವಿನಾಯಕ ಮೋಟರ್ಸ್ ಮಾಲೀಕ ಹೇಮಂತ್, ಶಫೀಕ್, ಕೆವೈಎ ಅಧ್ಯಕ್ಷರು ನೌಫಲ್ ಮತ್ತು ಹಲವಾರು ಗಣ್ಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿತ್ವ ರೂಪಿಸುವುದೇ ಮನೆಗೊಂದು ಗ್ರಂಥಾಲಯದ ಉದ್ದೇಶ-ಡಾ. ಮಾನಸ
ಲೋಕಾ ದಾಳಿಗೆ ಹೆದರಿ ಬಾತ್‌ರೂಂನಲ್ಲಿ ಹಣ ಪ್ಲಶ್‌ ಮಾಡಿದ ಅಧಿಕಾರಿ