ಕನ್ನಡಪ್ರಭ ವಾರ್ತೆ ಶಿಕಾರಿಪುರ
ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನಡೆದ ತಾಲೂಕಿನ ಅಂಗನವಾಡಿ ಸಿಬ್ಬಂದಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಅಂಗನವಾಡಿ ಕೇಂದ್ರದ ಸಿಬ್ಬಂದಿ ಕಳೆದ ದಶಕದಿಂದ ಅತ್ಯಲ್ಪ ವೇತನಕ್ಕೆ ಸರ್ಕಾರದ ಹಲವು ಯೋಜನೆಯನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಅತಿ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಗಿಂತ ಹೆಚ್ಚಿನ ರೀತಿಯಲ್ಲಿ ಸರ್ಕಾರದ ಯೋಜನೆಯನ್ನು ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಸಿಬ್ಬಂದಿ ಸೇವೆ ಪ್ರಶ್ನಾರ್ಹವಾಗಿದೆ ಎಂದರು.ಸಿಬ್ಬಂದಿ ಪ್ರಾಮಾಣಿಕ ಸೇವೆಯನ್ನು ಸೂಕ್ತ ರೀತಿಯಲ್ಲಿ ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಸೇವೆಗೆ ಸಮನಾದ ವೇತನ ನೀಡದೆ ಅತ್ಯಲ್ಪ ವೇತನದಿಂದ ಸಿಬ್ಬಂದಿಯ ವೈಯುಕ್ತಿಕ ಬದುಕು ಮೂರಾಬಟ್ಟೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ದಿನನಿತ್ಯದ ಎಲ್ಲ ವಸ್ತು ಮತ್ತು ಆಹಾರ ಪದಾರ್ಥ ದುಬಾರಿಯಾಗಿ ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಕಳೆದ 2018ರಿಂದ ಇದುವರೆಗೂ ವೇತನ ಪರಿಷ್ಕರಿಸದೆ ಕಾರ್ಯಕರ್ತರಿಗೆ ರು.2700 ಮತ್ತು ಸಹಾಯಕರಿಗೆ ರು.1350 ಮಾತ್ರ ನೀಡುತ್ತಿದೆ.ರಾಜ್ಯ ಸರ್ಕಾರ ಕಾರ್ಯಕರ್ತರಿಗೆ ರು.9700 ಮತ್ತು ಸಹಾಯಕಿಯರಿಗೆ ರು.5650 ಗೌರವದನ ನೀಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾರೆ ರು.12 ಸಾವಿರ ಹಾಗೂ ರು.7ಸಾವಿರ ವೇತನವನ್ನು ನೀಡುತ್ತಿದ್ದು, ಈ ಅಲ್ಪ ಪ್ರಮಾಣದಿಂದ ಜೀವನ ನಡೆಸುವುದು ಕಷ್ಟಕರವಾಗಿರುವುದರಿಂದ ಕೂಡಲೇ ಕೇಂದ್ರ ಸರ್ಕಾರ ಪರಿಷ್ಕರಿಸಿ ರು.26 ಸಾವಿರ ಕನಿಷ್ಠ ವೇತನ ಹಾಗೂ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿದರು.
ಅಂಗನವಾಡಿ ನೌಕರರನ್ನು ಮೂರು ಮತ್ತು ನಾಲ್ಕನೇ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು. ಅದುವರೆಗೆ ಮಾಸಿಕ ರು. 26 ಸಾವಿರ ಕನಿಷ್ಠ ವೇತನ ನೀಡಬೇಕು. ಶಾಸನಬದ್ಧ ಸವಲತ್ತುಗಳಿಂದ ವಂಚಿಸುವ ಶ್ರಮಶಕ್ತಿ ನೀತಿ 2025 ರದ್ದುಪಡಿಸಿ ಮುಟ್ಟಿನ ರಜೆ ನೀಡಬೇಕು ಎಂದರು.ಆರಂಭದಲ್ಲಿ ಬಸ್ ನಿಲ್ದಾಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರದಲ್ಲಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾ. ಘಟಕದ ಅಧ್ಯಕ್ಷೆ ಶಾಮಲಾ, ಉಪಾಧ್ಯಕ್ಷೆ ಆರತಿ, ಕಾರ್ಯದರ್ಶಿ ದೀಪಾ, ಅನಿತಾ, ಶಾಮಿಯಾಸ್ ಸುಮಿತ್ರ, ನೇತ್ರ, ನೀಲಮ್ಮ, ಕವಿತಾ, ಚಂದ್ರರೇಖಾ ಸಹಿತ ಎಲ್ಲ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಹಾಜರಿದ್ದರು.---ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಶಿಕಾರಿಪುರದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಾ.ಪಂ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.