ಹಾವೇರಿಯಲ್ಲಿ ಒಟ್ಟು 2381 ಪ್ರಕರಣಗಳಲ್ಲಿ 819 ಫಲಾನುಭವಿಗಳು 2ನೇ ಹಂತದ ಅನುದಾನ ಪಡೆಯಲು ಅರ್ಹರಿದ್ದಾರೆ, ಈ ಬಗ್ಗೆ ಪರಿಶೀಲನೆ ಸಹ ನಡೆಸಲಾಗಿದೆ. ಬ್ಲಾಕ್ ಆಗಿರುವ ಫಲಾನುಭವಿಗಳ ಎಲ್ಲ ದಾಖಲೆಗಳನ್ನು ವರದಿಯಲ್ಲಿ ಸಹ ಸಲ್ಲಿಸಲಾಗಿದೆ.
ಬ್ಯಾಡಗಿ: ಹಾವೇರಿ ಜಿಲ್ಲೆಯ ನೆರೆ ಸಂತ್ರಸ್ಥರ ಪುನರ್ವಸತಿ ಯೋಜನೆಯಡಿಯಲ್ಲಿ 2019-20ನೇ ಸಾಲಿನಿಂದ 22-23 ನೇ ಸಾಲಿನ ವರೆಗೆ ರಾಜೀವ ಗಾಂಧಿ ನಿಗಮದ ತಂತ್ರಾಂಶದಲ್ಲಿ ಬ್ಲಾಕ್ ಆಗಿದ್ದ ಮನೆಗಳನ್ನು ತೆರವುಗೊಳಿಸುವಂತೆ ಪಂಚ ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ನಿಗಮಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಈ ಕುರಿತು ಮಂಗಳವಾರ ಮಾತನಾಡಿದ ಅವರು, ಕಳೆದ 2019-20 ನೇ ಸಾಲಿನಿಂದ 2022-23 ನೇ ಸಾಲಿನ ವರೆಗೆ ನೆರೆ ಸಂತ್ರಸ್ಥರ ಪುನರ್ವಸತಿ ಯೋಜನೆ ಮನೆಗಳ ಪೈಕಿ ವಿವಿಧ ಕಾರಣಗಳಿಂದ ರಾಜೀವ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಬ್ಲಾಕ್ ಆಗಿರುವ ಮನೆಗಳನ್ನು ತೆರವುಗೊಳಿಸಿ ದೇವರಾಜ ಅರಸು ವಸತಿ ಯೋಜನೆಯ ಅಡಿಯಲ್ಲಿ ಮುಂದುವರಿಸಿದ್ದಲ್ಲಿ ಉತ್ತಮ ಇದರಿಂದ ಅವರಿಗೆ ಅನೂಕೂಲವಾಗಲಿದ್ದು, ಈ ಬಗ್ಗೆ ಜಿಲ್ಲೆಯ ಆಯಾ ತಾಲೂಕು ತಹಸೀಲ್ದಾರ್ರಿಂದ ಪರಿಶೀಲಿಸಿ ವರದಿ ಪಡೆದುಕೊಂಡು ದೃಢೀಕರಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಅವಧಿಯಲ್ಲಿ ಹಾವೇರಿಯಲ್ಲಿ ಒಟ್ಟು 2381 ಪ್ರಕರಣಗಳಲ್ಲಿ 819 ಫಲಾನುಭವಿಗಳು 2ನೇ ಹಂತದ ಅನುದಾನ ಪಡೆಯಲು ಅರ್ಹರಿದ್ದಾರೆ, ಈ ಬಗ್ಗೆ ಪರಿಶೀಲನೆ ಸಹ ನಡೆಸಲಾಗಿದೆ. ಬ್ಲಾಕ್ ಆಗಿರುವ ಫಲಾನುಭವಿಗಳ ಎಲ್ಲ ದಾಖಲೆಗಳನ್ನು ವರದಿಯಲ್ಲಿ ಸಹ ಸಲ್ಲಿಸಲಾಗಿದೆ. ಬ್ಲಾಕ್ ಆಗಿರುವ 819 ಫಲಾನುಭವಿಗಳು ನಮಗೆ ಅತ್ಯಂತ ನೋವಿನಿಂದ ಮನವಿ ಲ್ಲಿಸಿ, ಬ್ಲಾಕ್ ತೆರವುಗೊಳಿಸುವಂತೆ ಒತ್ತಾಯ ಮಾಡಿದ್ದು ಕೂಡಲೇ ತಾವುಗಳು ಎಲ್ಲವನ್ನೂ ಪರಿಶೀಲನೆ ಮಾಡಿ ಈ ಫಲಾನುಭವಿಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.