50:50 ಅನುಪಾತದ ನಿವೇಶನ ಹಿಂದಕ್ಕೆ ಪಡೆಯಲು ಸಿಎಂ ಸೂಚನೆ

KannadaprabhaNewsNetwork |  
Published : Nov 01, 2024, 12:17 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಬರದೆ ಪತ್ರ ಆಧಾರಿಸಿ ಅಗತ್ಯ ಕ್ರಮಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಈವರೆಗೆ ಒಟ್ಟು 1500ಕ್ಕೂ ಹೆಚ್ಚು ನಿವೇಶನಗಳನ್ನು 50:50 ಅನುಪಾತದಲ್ಲಿ ವಿತರಿಸಲಾಗಿದೆ. 2020 ರಿಂದ 2024 ಅವಧಿಯಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಾಗಿದ್ದು, ಈ ಅವಧಿಯ ನಿವೇಶನಗಳನ್ನು ಹಿಂಪಡೆಯಲು ಅವರು ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ವತಿಯಿಂದ 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಸಿಎಂ ಸಿದ್ದರಾಮಯ್ಯ ಶಾಕ್‌ ನೀಡಿದ್ದಾರೆ.

50:50 ಅನುಪಾತದ ಎಲ್ಲಾ ಅಕ್ರಮ ಸೈಟ್ ಹಿಂದಕ್ಕೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಅವರು ಲಿಖಿತ ಸೂಚನೆ ನೀಡಿದ್ದಾರೆ.

ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಬರದೆ ಪತ್ರ ಆಧಾರಿಸಿ ಅಗತ್ಯ ಕ್ರಮಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಈವರೆಗೆ ಒಟ್ಟು 1500ಕ್ಕೂ ಹೆಚ್ಚು ನಿವೇಶನಗಳನ್ನು 50:50 ಅನುಪಾತದಲ್ಲಿ ವಿತರಿಸಲಾಗಿದೆ. 2020 ರಿಂದ 2024 ಅವಧಿಯಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಾಗಿದ್ದು, ಈ ಅವಧಿಯ ನಿವೇಶನಗಳನ್ನು ಹಿಂಪಡೆಯಲು ಅವರು ಸೂಚಿಸಿದ್ದಾರೆ.

ಇಡಿ ದಾಳಿಯ ಒತ್ತಡದ ನಡುವೆ ಸಿಎಂ ಸಿದ್ದರಾಮಯ್ಯ ನಿವೇಶನ ಮಾಲೀಕರಿಗೆ ಮತ್ತೊಂದು ಶಾಕ್ ನೀಡಿದ್ದಾರೆ.ನಿವೇಶನ ಹಿಂದಕ್ಕೆ ಪಡೆದದ್ದು ಸಂತೋಷವಾಗಿದೆ: ಟಿ.ಎಸ್. ಶ್ರೀವತ್ಸ

ಮುಡಾ 50:50 ನಿವೇಶನ ರದ್ದು ಮಾಡುವಂತೆ ತಾವು ಸಲ್ಲಿಸಿದ್ದ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿರುವುದಕ್ಕೆ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಸಂತಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ನನ್ನ ಮನವಿಯನ್ನು ಧನಾತ್ಮಕವಾಗಿ ಪರಿಗಣಿಸಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಎಲ್ಲಾ 50:50 ನಿವೇಶನಗಳನ್ನು ರದ್ದು ಮಾಡುವಂತೆ ಮನವಿ ಮಾಡಿದ್ದೆ. ಎಲ್ಲವನ್ನು ರದ್ದು ಮಾಡಿ, ತದ ನಂತರ ಅರ್ಹರಿಗೆ ಕೊಡಲಿ ಎಂಬುದು ನನ್ನ ಉದ್ದೇಶ. ನಿವೇಶನ ಪಡೆದವರಲ್ಲಿ ಬಹುತೇಕರು ಅನರ್ಹರಿದ್ದಾರೆ ಎಂದರು.

50:50 ಅನುಪಾತದಲ್ಲಿ ನಿವೇಶನ ಪಡೆದವರು ಈಗ ಅದನ್ನು ಅರ್ಧ ದರಕ್ಕೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಬೇಕು. ಬಿಲ್ಡರ್ ಗಳೂ 50;50 ನಿವೇಶನ ತೆಗೆದುಕೊಂಡಿದ್ದಾರೆ ಎಂದರೆ ಮೋಸವಲ್ಲವೇ? ಈ ಮೋಸವನ್ನು ಮಟ್ಟ ಹಾಕಬೇಕು ಎಂದು ಅವರು ಹೇಳಿದರು.

ಮೊದಲು 50:50 ಅನುಪಾತ ತಪ್ಪು ಅಂತ ಇದೆ. ಅದರ ಬಗ್ಗೆಯು ತೀರ್ಮಾನ ಮಾಡಬೇಕು. ನಿವೇಶನ ಪಡೆದವರು ಈ ಹಿಂದೆ ಮುಖ್ಯಮಂತ್ರಿ ಮುಂದಿಟ್ಟುಕೊಂಡ ಆಟ ಆಡುತ್ತಿದ್ದರು. ಈಗ ಅವರೇ ಹಿಂದಕ್ಕೆ ಕೊಟ್ಟಿದ್ದಾರೆ. ಈಗ ಸಿಎಂ ಸೇರಿದಂತೆ ಉಳಿದವರ ಮೇಲೂ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.

ಮುಡಾದಲ್ಲಿ ನಡೆದಿರುವ ಎಲ್ಲಾ ಅಕ್ರಮ ಬರಬೇಕು. ಈ ಮಧ್ಯೆ ಮುಡಾ ಸಭೆ ನಡೆಸಿದರೂ ಅಜೆಂಡಾವನ್ನೇ ಕೊಟ್ಟಿಲ್ಲ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗು ಮನವಿ ಮಾಡಿದ್ದೇವೆ. ಸೋಮವಾರ ಅಜೆಂಡ ಕೊಡುತ್ತೇವೆ ಎಂದಿದ್ದಾರೆ ಎಂದು ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ