ಫೆ.1ಕ್ಕೆ ಕನಕ ಪೀಠದ ಶ್ರೀಗಳಿಗೆ ಸಿಎಂ ನುಡಿನಮನ

KannadaprabhaNewsNetwork |  
Published : Jan 28, 2026, 01:45 AM IST
27ಕೆಪಿಎಲ್ಎನ್ಜಿ01 : ಡಾ.ಕುಪ್ಪಣ್ಣ ಕೊಡ್ಲಿ, | Kannada Prabha

ಸಾರಾಂಶ

ತಿಂಥಣಿ ಬ್ರಿಜ್‌ನಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಕಲಬುರಗಿ ವಿಭಾಗೀಯ ಜಗದ್ಗುರು ಸಿದ್ದರಾಮಾನಂದ ಪೂಜ್ಯರು ಇತ್ತಿಚೀಗೆ ಶಿವೈಕ್ಯರಾಗಿದ್ದು, ಶ್ರೀಗಳಿಗೆ ಫೆ.1ರಂದು ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸೇರಿ ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು ಹಾಗೂ ನಾನಾ ಸಮಾಜಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಡಾ.ಕುಪ್ಪಣ್ಣ ಕೊಡ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ತಿಂಥಣಿ ಬ್ರಿಜ್‌ನಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಕಲಬುರಗಿ ವಿಭಾಗೀಯ ಜಗದ್ಗುರು ಸಿದ್ದರಾಮಾನಂದ ಪೂಜ್ಯರು ಇತ್ತಿಚೀಗೆ ಶಿವೈಕ್ಯರಾಗಿದ್ದು, ಶ್ರೀಗಳಿಗೆ ಫೆ.1ರಂದು ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸೇರಿ ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು ಹಾಗೂ ನಾನಾ ಸಮಾಜಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಡಾ.ಕುಪ್ಪಣ್ಣ ಕೊಡ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಿನೆಲೆ ಕನಕಗುರುಪೀಠ ತಿಂಥಣಿ ಬ್ರಿಜ್ನಲ್ಲಿ ಮಠದ ಸಿದ್ಧರಾಮಾನಂದಪುರಿ ಶ್ರೀಗಳು ಕಳೆದ ಜ.15ರಂದು ಶಿವೈಕ್ಯರಾಗಿದ್ದಾರೆ. ಶ್ರೀಗಳ ಕತೃ ಗದ್ದುಗೆಗೆ ಜ.31ರಂದು ಅಭಿಷೇಕ ಸೇರಿದಂತೆ ಹಾಲುಮತ ಧರ್ಮದಂತೆ ಶಿವಗಣಾರಾಧನೆ ಮಾಡಲಾಗುವುದೆಂದು ಹೇಳಿದರು.

ಶಿವೈಕ್ಯ ಶ್ರೀಗಳಿಗೆ ಫೆ. 1ರಂದು ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದಿನ ನುಡಿ ನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗ್ಗೆ 11 ಗಂಟೆಗೆ ಆಗಮಿಸಿ ಶಿವೈಕ್ಯ ಶ್ರೀಗಳಿಗೆ ನುಡಿ ನಮನ ಸಲ್ಲಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮಂತ್ರಿ, ಮಹೋದಯರು, ನಾನಾ ಸಮಾಜದ ಗಣ್ಯ ಮಾನ್ಯರು ಹಾಲುಮತ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು.

ಸಮಾಜದ ಜಿಲ್ಲಾ ಅಧ್ಯಕ್ಷ ಗುಂಡಪ್ಪ ಸಾಹುಕಾರ ಕಾಚಾಪುರ, ಕನಕ ಗುರುಪೀಠದ ಅಧ್ಯಕ್ಷ ಸಿದ್ದಯ್ಯ ಗ್ಯಾನಪ್ಪಯ್ಯ ನವರ, ಬೀರಪ್ಪ ಪೂಜಾರಿ, ಪರಸಪ್ಪ ಹುನಕುಂಟಿ, ಗ್ಯಾನಪ್ಪ ಹೊಳೆಯಾಚಿ, ಚನ್ನಬಸವ ಹುನಕುಂಟಿ, ಶಿಶಿ ಬಿಜ್ಜೂರು ಸೇರಿದಂತೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ