ಕುಸಿಯುತ್ತಿರುವ ಹೇಮಾವತಿ ಕಿರು ಸೇತುವೆ - ನಾಲೆ

KannadaprabhaNewsNetwork |  
Published : Aug 28, 2024, 12:51 AM IST
 ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದಲ್ಲಿನ ಹೇಮಾವತಿ ಕಿರು ಸೇತುವೆ ಹಾಗೂ ನಾಲೆ ಕುಸಿತವಾಗುತ್ತಿರುವುದು | Kannada Prabha

ಸಾರಾಂಶ

ತಾಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದಲ್ಲಿ ಹೇಮಾವತಿ ನಾಲೆ ಹಾಗೂ ನೀರು ಹರಿಯುವ ಸೇತುವೆ ಕುಸಿಯುತ್ತಿದ್ದು, ಅಧಿಕಾರಿಗಳ ಕಳಪೆ ಕಾಮಗಾರಿಯಿಂದ ನಾವು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದಲ್ಲಿ ಹೇಮಾವತಿ ನಾಲೆ ಹಾಗೂ ನೀರು ಹರಿಯುವ ಸೇತುವೆ ಕುಸಿಯುತ್ತಿದ್ದು, ಅಧಿಕಾರಿಗಳ ಕಳಪೆ ಕಾಮಗಾರಿಯಿಂದ ನಾವು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ನಿಟ್ಟೂರು ಪುರ ಕೆರೆ ಎಷ್ಟು ಬೇಗ ತುಂಬುತ್ತೋ ಅಷ್ಟೇ ಬೇಗ ಖಾಲಿ ಆಗುತ್ತಿದೆ. ಹೇಮಾವತಿ ಅಧಿಕಾರಿಗಳು ಮಾಡಿರುವ ಕಳಪೆ ಕಾಮಗಾರಿಯಿಂದ ನಮ್ಮ ಜಮೀನುಗಳ ಮೇಲೆ ಅಧಿಕ ನೀರು ನುಗ್ಗುತ್ತಿದೆ. ಇದರಿಂದ ರೈತರು ಗದ್ದೆಗಳಲ್ಲಿ ರಾಗಿ, ಭತ್ತ, ಬೆಳೆದು ಅದೆಷ್ಟೋ ವರ್ಷಗಳು ಕಳೆದಿವೆ. ರೈತರ ಅಡಿಕೆ ತೋಟಗಳಲ್ಲಿ ಉತ್ಪನ್ನ ಶೇ.40ರಷ್ಟು ಇಳಿಕೆಯಾಗಿದೆ. ಕೋಡಿಯಲ್ಲಿ ಹೇಮಾವತಿ ಅಧಿಕಾರಿಗಳು ಕೆನಾಲ್ ಮೂಲಕ ನೀರು ಬಿಡದೆ ಅವರ ಮನಸ್ಸಿಗೆ ಬಂದoತೆ ನೀರು ಬಿಡುತ್ತಾರೆ. ಇದರಿಂದ ರೈತರು ಬಹಳ ತೊಂದರೆ ಎದುರಿಸಬೇಕಾಗಿದೆ ಎಂದು ದೂರಿದರು.

ಹೇಮಾವತಿ ಅಧಿಕಾರಿಗಳು ಪುರದ ಕೆರೆ ಕೋಡಿ ಬಿದ್ದ ನೀರು ಹೋಗಲು ಸೇತುವೆ ನಿರ್ಮಾಣ ಮಾಡಿದ್ದಾರೆ. ಆ ಸೇತುವೆಯ ಕೆಳಭಾಗಕ್ಕೆ ಸಿಮೆಂಟ್ ಪೈಪ್ ಅಳವಡಿಸಿದ್ದಾರೆ. ಆ ಪೈಪ್‌ಗಳು ಒಡೆದು ಹೋಗಿದ್ದು, ಈಗ ಕುಸಿಯುವ ಹಂತಕ್ಕೆ ತಲುಪಿದೆ. ಇದರಿಂದ ಸೇತುವೆ ಮೇಲೆ ರೈತರು ತಮ್ಮ ಜಮೀನಿಗೆ ಹೋಗಲು ಹೆದರುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.

ನೀರಿನ ರಭಸಕ್ಕೆ ಇದೇ ಕೋಡಿಯ ಇನ್ನೊಂದು ಸೇತುವೆ ಬಿದ್ದು ಹೋಗಿರುವುದರಿಂದ ಪಕ್ಕದಲ್ಲಿರುವ ರಸ್ತೆಯ ಮಣ್ಣು ಕುಸಿದು ಬೀಳುತ್ತಿದೆ. ಇದೆ ರೀತಿ ಮಳೆ ಬಿದ್ದರೆ ಕೆಲವೇ ದಿನಗಳಲ್ಲಿ ರಸ್ತೆಯ ಪೂರ್ತಿ ಮಣ್ಣು ಕುಸಿದು ಓಡಾಡಲು ರಸ್ತೆ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೆರೆಯ ಪಕ್ಕದಲ್ಲಿ ದೇವಸ್ಥಾನವಿದ್ದು, ಮಳೆ ಹೆಚ್ಚಾದರೆ ದೇವಸ್ಥಾನದ ಹಿಂಭಾಗಕ್ಕೆ ನೀರು ನುಗ್ಗಿ ದೇವಸ್ಥಾನದ ಕಟ್ಟಡಕ್ಕೂ ಬಹಳ ತೊಂದರೆ ಆಗುತ್ತಿದೆ. ಇದಕ್ಕೆಲ್ಲ ಹೇಮಾವತಿ ಅಧಿಕಾರಿಗಳು ಮಾಡಿರುವ ಕಳಪೆ ಕಾಮಗಾರಿಗಳೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಆನಂದ್ ಹಾಗೂ ಪ್ರಭು ಪ್ರಸಾದ್ ತಿಳಿಸಿದ್ದಾರೆ.

ಅಧಿಕಾರಿಗಳು ಕೂಡಲೇ ನೀರು ಹರಿಯುತ್ತಿರುವ ಸೇತುವೆ ಹಾಗೂ ಕಿರುನಾಲೆ ಸರಿ ಮಾಡದೇ ಹೋದರೆ ಹೇಮಾವತಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ.

ಆನಂದ್ ಗ್ರಾ.ಪಂ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು