ರಾಮನಗರ: ಕೇಂದ್ರ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ (ನಗರ ಸವಾಲು ನಿಧಿ) ಯೋಜನೆ ಧನ ಸಹಾಯ ಬಳಸಿಕೊಂಡು ನಗರಸಭೆ ಸಭಾಭವನದ ಆವರಣದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸೋಮವಾರ ನಡೆದ ನಗರಸಭೆ ವಿಶೇಷ ಸಾಮಾನ್ಯಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭಾ ಭವನದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅರ್ಬನ್ ಚಾಲೆಂಜ್ ಫಂಡ್ ಅಡಿಯಲ್ಲಿ ಕೇಂದ್ರ ಸರ್ಕಾರ ಶೇ.25 ಅನುದಾನ (6.50 ಕೋಟಿ ) ಒದಗಿಸುತ್ತದೆ. ಮುನಿಸಿಪಲ್ ಬಾಂಡ್, ಬ್ಯಾಂಕ್ ಸಾಲ, ಪಬ್ಲಿಕ್ ಪ್ರೈವೇಟ್ ಪಾಲುದಾರಿಕೆಗಳ ಮೂಲಕ ಕನಿಷ್ಠ ಶೇ.50ರಷ್ಟು ಅನುದಾನ ಸೃಷ್ಟಿಸಿಕೊಳ್ಳಬೇಕು. ಇನ್ನುಳಿದ ಹಣವನ್ನು ನಗರಸಭೆ ನಿಧಿಯಿಂದ ಭರಿಸಬೇಕಾಗುತ್ತದೆ ಎಂದು ಅಧ್ಯಕ್ಷ ಕೆ.ಶೇಷಾದ್ರಿ ವಿವರಿಸಿದರು.
ಈ ವಾಣಿಜ್ಯ ಸಂಕೀರ್ಣ ಅಂದಾಜು 26 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 6.50 ಕೋಟಿ ಅನುದಾನ ಒದಗಿಸುತ್ತದೆ. ನಗರಸಭೆ ನಿಧಿಯಿಂದ ಶೇಕಡ 25ರಷ್ಟು ಅನುದಾನ ಭರಿಸುವುದು ಕಷ್ಟಸಾಧ್ಯ. ಹೀಗಾಗಿ ಶೇ.75ರಷ್ಟು ಅನುದಾನವನ್ನು ಬ್ಯಾಂಕಿನಿಂದಲೇ ಸಾಲದ ರೂಪದಲ್ಲಿ ಪಡೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ವಾಣಿಜ್ಯ ಸಂಕೀರ್ಣ ನಿರ್ಮಾಣ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಮನಗರದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗಲಿದೆ. ನಮ್ಮ ಅವಧಿಯಲ್ಲಿಯೇ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸೋಣ. ಈ ಸಂಕೀರ್ಣದಲ್ಲಿಯೇ ನಗರಸಭೆ ಕಚೇರಿ ಜೊತೆಗೆ ಉಳಿದ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುವುದು ಎಂದು ತಿಳಿಸಿದರು.
ರಾಜಕುಮಾರ್ ಕಾಂಪ್ಲೆಕ್ಸ್ ನವೀಕರಿಸಿ:
ಇದಕ್ಕೆ ಅಧ್ಯಕ್ಷ ಕೆ.ಶೇಷಾದ್ರಿ ಪ್ರತಿಕ್ರಿಯಿಸಿ, ರಾಜಕುಮಾರ್ ಕಾಂಪ್ಲೆಕ್ಸ್ ದುರಸ್ತಿ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಕೆಲ ಸಮಸ್ಯೆಗಳಿಂದ ತಡವಾಗಿದೆ. ಮುಂದೆ ಅದನ್ನೂ ದುರಸ್ತಿ ಪಡಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆ.ಶೇಷಾದ್ರಿ, ಆ ಭಾಗದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಮೌಖಿಕವಾಗಿ ಸೂಚನೆ ನೀಡಿದ್ದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ನೋಟಿಸ್ ಜಾರಿ ಮಾಡಿ, ಇಲ್ಲ ನಿಮಗೂ ನೋಟಿಸ್ ಜಾರಿ ಮಾಡಬೇಕಾಗುತ್ತೆ. ನೀವು ಹೇಳಿದಂತೆ ಗುತ್ತಿಗೆದಾರ ಕೇಳಬೇಕೇ ಹೊರತು ಗುತ್ತಿಗೆದಾರ ಹೇಳಿದಂತೆ ನೀವೇಕೆ ಕೇಳುತ್ತೀರಾ ಎಂದು ಎಂಜಿನಿಯರ್ಗಳ ವಿರುದ್ಧ ಹರಿಹಾಯ್ದರು.
ನಿಜಾಮುದ್ದೀನ್ ಮಾತಿಗೆ ಧ್ವನಿಗೂಡಿಸಿದ ಫೈರೋಜ್ ಪಾಷ ಮತ್ತು ಅಕ್ಲಿಂ, ಮುಖ್ಯ ಗುತ್ತಿಗೆದಾರನ ಬಳಿ ಮಾತನಾಡಲು ಎಂಜಿನಿಯರ್ ಗಳಿಗೆ ಭಯ ಇರಬೇಕು. ಕಾಮಗಾರಿ ಸ್ಥಳದಲ್ಲಿ ಎಂಜಿನಿಯರ್ ಅಥವಾ ಮುಖ್ಯ ಗುತ್ತಿಗೆದಾರ ಇರುವುದಿಲ್ಲ ಎಂದು ಆರೋಪಿಸಿದಾಗ ಕೆ.ಶೇಷಾದ್ರಿ, ಸ್ಥಳಕ್ಕೆ ನಾನು ಮತ್ತು ಆಯುಕ್ತರು ಬಂದು ಪರಿಶೀಲಿಸುತ್ತೇವೆ. ಆಗ ಉಪಗುತ್ತಿಗೆದಾರನ ಬದಲು ಮುಖ್ಯ ಗುತ್ತಿಗೆದಾರ ಉದಯ್ ನನ್ನು ಕರೆಸಿ ಎಂದು ಎಂಜಿನಿಯರ್ ಗಳಿಗೆ ಸೂಚನೆ ನೀಡಿದರು.
ಬಾಕ್ಸ್ ...............
ರಾಮನಗರ: ನಗರಸಭೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಇಲ್ಲದ ಯಾವುದೇ ಕೆಲಸಗಳನ್ನು ಆಯುಕ್ತರಾಗಲಿ ಅಥವಾ ಎಂಜಿನಿಯರ್ ಗಳಾಗಲಿ ಒಪ್ಪಿಕೊಳ್ಳಬಾರದು. ಕೌನ್ಸಿಲ್ ಒಪ್ಪಿಗೆ ಇಲ್ಲದೆ ಕಾಮಗಾರಿ ಕೈಗೆತ್ತಿಕೊಂಡರೆ ನೀವೇ ಹೊಣೆ ಆಗಬೇಕಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಎಚ್ಚರಿಸಿದರು.
ರೈಲ್ವೆ ನಿಲ್ದಾಣ ವೃತ್ತದಿಂದ ಚರ್ಚ್ ವರೆಗಿನ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಇಕ್ಬಾಲ್ ಹುಸೇನ್ ರವರ ಹೆಸರೇಳದೆ ಪರೋಕ್ಷವಾಗಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಕ್ಲಿಂ, ಒಂದೇ ಕೆಲಸಕ್ಕೆ ಎರಡೆರೆಡು ಬಾರಿ ಭೂಮಿ ನೆರವೇರಿಸುತ್ತಿದ್ದಾರೆ. ಬರೀ ಭೂಮಿ ಪೂಜೆ ಮಾಡಿಕೊಂಡು ಹೋದರೆ ಏನು ಪ್ರಯೋಜನ. ಜನರಿಗೆ ಏನಂತ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.ಇದಕ್ಕೆ ಕೆ.ಶೇಷಾದ್ರಿ ಪ್ರತಿಕ್ರಿಯಿಸಿ ನಗರಸಭೆ ಒಪ್ಪಿಗೆ ಇಲ್ಲದೆ ಯಾವುದೇ ಕೆಲಸಗಳನ್ನು ಆಯುಕ್ತರಾಗಲಿ ಅಥವಾ ಎಂಜಿನಿಯರ್ ಗಳಾಗಲಿ ಒಪ್ಪಿಕೊಳ್ಳಬಾರದು. ನಮ್ಮ ಅವಧಿಯಲ್ಲೇ ಯುಐಡಿಎಫ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
18ಕೆಆರ್ ಎಂಎನ್ 2.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯಸಭೆ ನಡೆಯಿತು.