ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯಶಾಸ್ತ್ರ ವಿಭಾಗವು ಗುರುವಾರ ಆಯೋಜಿಸಿದ್ದ ಇಂಟರ್ ಶಿಪ್ ವರದಿ ಬರವಣಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆಯ ಪೂರ್ವದಲ್ಲಿ ಪದವಿ ಶಿಕ್ಷಣದ ಕೊನೆಯ ಚತುರ್ಮಾಸದಲ್ಲಿ ಇಂಟರ್ ಶಿಪ್ ನಲ್ಲಿ ತೊಡಗಿಸಿಕೊಳ್ಳುವುದು ಸಂಶೋಧನೆಗೆ ಪೂರಕವಾಗುತ್ತದೆ. ಇದರಿಂದ ಕೌಶಲ್ಯದ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು.
ಸಮಸ್ಯೆಯ ಆಯ್ಕೆ, ಪ್ರಶ್ನಾವಳಿ ಸಂಶೋಧನ ವಿಧಾನ, ರಿವ್ಯೂವ್ ಆಫ್ ಲಿಟರೇಚರ್, ಸಂಶೋಧನೆ ಉದ್ದೇಶ, ಗುರಿ, ಕ್ಷೇತ್ರ ಕಾರ್ಯ, ಫಲಿತಾಂಶಗಳು ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಉದಾಹರಣೆಯೊಂದಿಗೆ ಸಂವಾದ ನಡೆಸಿದರು.ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಅನುಭವ ಸಿಗುತ್ತದೆ. ಜ್ಞಾನವೆಂಬುದು ನಿರಂತರ ಕಲಿಕೆ, ಸಮುದಾಯದ ಜೊತೆ ಬೆರೆತಾಗ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ನೂತನ ದಾರಿಗಳು ತೆರೆದುಕೊಳ್ಳುತ್ತವೆ ಎಂದ ಅವರು, ಸಂಶೋಧನಾ ಲೇಖನಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳ ನಿದರ್ಶನದೊಂದಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಉಪ ಪ್ರಾಂಶುಪಾಲ ಡಾ.ಜಿ. ಪ್ರಸಾದಮೂರ್ತಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎನ್.ಜಿ. ಲೋಕೇಶ್, ಸಹಾಯಕ ಪ್ರಾಧ್ಯಾಪಕರಾದ ಸೂರಜ್, ಎನ್.ಆರ್. ಸಿಂಧು ಇದ್ದರು. ನಿಹಾರಿಕಾ ಪ್ರಾರ್ಥಿಸಿದರು. ಕಾವ್ಯ ನಿರೂಪಿಸಿದರು. ಅಕ್ಷಿತಾ ವಂದಿಸಿದರು.