ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ, ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಹಾಗೂ ತಮ್ಮ ಕುಟುಂಬ ಬೀಗರಾಗುತ್ತೇವೆ. ನಾನು ತಾಯಿ ಸ್ಥಾನದಲ್ಲಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಗಳಾಗಿದ್ದಾರೆ. ತಾಯಿ-ಮಗಳ ಮಧ್ಯೆ ಸ್ಪರ್ಧೆ ಎಂದರು.
ತಮ್ಮ ಸ್ಪರ್ಧೆಯ ಬಗ್ಗೆ ಯಾರ ವಿರೋಧವೂ ಇಲ್ಲ. ಕೆಲವರು ಆಕಾಂಕ್ಷಿಗಳು ಟಿಕೆಟ್ ಕೇಳಿದ್ದರು. ಆದರೆ, ಟಿಕೆಟ್ ಸಿಗದಿದ್ದಾಗ ಸಹಜವಾಗಿಯೇ ಟಿಕೆಟ್ ತಪ್ಪಿದವರಿಗೆ ಬೇಜಾರ್ ಆಗಿದೆ. ಆ ಎಲ್ಲರನ್ನೂ ಅಣ್ಣ ಅಂತಲೇ ಮಾತನಾಡಿಸುತ್ತೇನೆ. ಎಲ್ಲರನ್ನೂ ಭೇಟಿಯಾಗಿ ಮಾತನಾಡಿದ್ದೇನೆ ಎಂದು ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ ಮತ್ತು ಗುಂಪಿನ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.ಮೊದಲ ಬಾರಿಗೆ ದಾವಣಗೆರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಶೇ.33 ಮೀಸಲಾತಿ ಸಿಕ್ಕಿರುವುದು ನಮಗೂ ಖುಷಿ ತಂದಿದೆ. ಪ್ರಧಾನಿ ಮೋದಿ ಆಶೀರ್ವಾದವೂ ಸಿಕ್ಕಿದೆ. ರಾಜ್ಯ ನಾಯಕರು ನನ್ನನ್ನು ಬಿಜೆಪಿ ಅಭ್ಯರ್ಥಿ ಮಾಡಿದ್ದು, ನ್ಯಾಯಯುತ ಸೇವೆ ಸಲ್ಲಿಸುವೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಗೆದ್ದ ನಂತರ ಕ್ಷೇತ್ರದಿಂದ ಕಮಲದ ಹೂವನ್ನು ತೆಗೆದುಕೊಂಡು ಹೋಗಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿಸುತ್ತೇನೆ. ವಿಶ್ವ ನಾಯಕ ಮೋದಿಜಿ ಮತ್ತೆ ಪ್ರಧಾನಿ ಆಗಬೇಕೆಂಬುದು ಕಾರ್ಯಕರ್ತರು, ಮತದಾರರ ಆಶಯ ಎಂದು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ, ಆನಂದ ಇತರರು ಇದ್ದರು.
ಒಂದೇ ಮನೆಯ ಮೂವರಿಗೆ ಅಧಿಕಾರಕ್ಕೆ ಜನ ಒಪ್ಪಲ್ಲ: ಸಿದ್ದೇಶ್ವರ - ಶಾಮನೂರು ಮನೆಯ ಮೂರನೇ ವ್ಯಕ್ತಿಗೆ ಜನರಂತೂ ಒಪ್ಪಲ್ಲ,
ದಾವಣಗೆರೆ: ಒಂದೇ ಮನೆಯಲ್ಲಿ ಮೂವರಿಗೆ ಅಧಿಕಾರವೆಂದರೆ ಜನ ಒಪ್ಪುವುದಿಲ್ಲ. ಶಾಮನೂರು ಶಿವಶಂಕರಪ್ಪ ಅವರ ಮನೆಯಲ್ಲಿ ಈಗಾಗಲೇ ಇಬ್ಬರು ಅಧಿಕಾರದಲ್ಲಿದ್ದು, ಮೂರನೇ ವ್ಯಕ್ತಿಗೆ ಅಧಿಕಾರ ಕೊಡುವುದಕ್ಕೆ ಜನರೂ ಒಪ್ಪುವುದಿಲ್ಲ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಹೇಳಿದರು.
- - -
- ಜಿ.ಎಂ.ಸಿದ್ದೇಶ್ವರ, ಸಂಸದ, ದಾವಣಗೆರೆ ಕ್ಷೇತ್ರ
-(ಫೋಟೋ ಬರಲಿವೆ):