ನ್ಯಾಯಬೆಲೆ ಅಂಗಡಿ ಅಂಗಡಿ ವಿರುದ್ಧ ಆರೋಪಕ್ಕೆ ಖಂಡನೆ

KannadaprabhaNewsNetwork |  
Published : Jan 12, 2024, 01:46 AM IST
ಮೂಡಲಗಿ: ಪಟಗುಂದಿ ಗ್ರಾಮದಲ್ಲಿ ನ್ಯಾಯ ಬೇಲೆ ಅಂಗಡಿಯಲ್ಲಿ ಸರಿಯಾಘಿ ಅಕ್ಕಿ ವಿತರಣೆ ಮಾಡಿಲ್ಲ ಎಂದು ನಕಲಿ ಸಹಿ ಮಾಡಿ ದೂರು ನೀಡಿದ ವ್ಯಕ್ತಿಗಳ ಮೇಲೆ ಕಾನೂನು ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮೂಡಲಗಿ ಮಹಾದೇವ ಸನಮುರಿ ಹಾಗೂ ಪಿಎಸ್‌ಐ ಎಚ್ ವೈ.ಬಾಲದಂಡಿ ಅವರಿಗೆ  ಗ್ರಾಮಸ್ಥರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮೂಡಲಗಿ: ತಾಲೂಕಿನ ಪಟ್ಟಗುಂದಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಅಕ್ಕಿ ವಿತರಣೆ ಮಾಡಿಲ್ಲ ಎಂದು ಸಾರ್ವಜನಿಕರ ನಕಲಿ ಸಹಿ ಮಾಡಿ ತಹಸೀಲ್ದಾರ್‌ ಕಚೇರಿಗೆ ದೂರು ಸಲ್ಲಿಸಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಊರಿನ ಗ್ರಾಮಸ್ಥರು ದೇವಸ್ಥಾನದಲ್ಲಿ ಗುರುವಾರ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ತಾಲೂಕಿನ ಪಟ್ಟಗುಂದಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಅಕ್ಕಿ ವಿತರಣೆ ಮಾಡಿಲ್ಲ ಎಂದು ಸಾರ್ವಜನಿಕರ ನಕಲಿ ಸಹಿ ಮಾಡಿ ತಹಸೀಲ್ದಾರ್‌ ಕಚೇರಿಗೆ ದೂರು ಸಲ್ಲಿಸಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಊರಿನ ಗ್ರಾಮಸ್ಥರು ದೇವಸ್ಥಾನದಲ್ಲಿ ಗುರುವಾರ ಧರಣಿ ನಡೆಸಿದರು.

ಪಟ್ಟಗುಂದಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ 120 ಜನರಿಗೆ ಸರಿಯಾಗಿ ಅಕ್ಕಿ ವಿತರಣೆ ಮಾಡಿಲ್ಲ ಎಂದು ಕೆಲವರು ಸಾರ್ವಜನಿಕರ ಸಹಿ ಮಾಡಿ ತಹಸೀಲ್ದಾರ್‌ ಕಚೇರಿಯ ಆಹಾರ ಇಲಾಗೆ ಮನವಿ ಕೊಟ್ಟಿದ್ದು, ಹಿನ್ನಲೆ ಈ ವಿಷಯ ಗ್ರಾಮಸ್ಥರಿಗೆ ತಿಳಿದ ಕೂಡಲೇ ಗ್ರಾಮದ ಲಕ್ಷ್ಮೀದೇವ ದೇಸ್ಥಾನದಲ್ಲಿ ಧರಣಿ ನಡೆಸಿ, ತಹಸೀಲ್ದಾರರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮಾಹಿತಿ ಪಡೆದು ನಕಲಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಮೇಲೆ ಕಾನೂನು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಕಲಿ ದೂರು ನೀಡಿದ ವ್ಯಕ್ತಿಗಳ ಮೇಲೆ ಕಾನೂನು ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ದಾರ ಹಾಗೂ ಪಿಎಸ್‌ಐಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ತಹಸೀಲ್ದಾರ್ ಕಚೇರಿಯ ಶಿರೆಸ್ತೇದಾರ ಪರಸಪ್ಪ ನಾಯಕ, ಆಹಾರ ಇಲಾಖೆಯ ಸುನೀಲ ದೇಸಾಯಿ, ಪೊಲೀಸ್ ಸಿಬ್ಬಂದಿ ಎನ್ ಎಸ್ ಒಡೆಯರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?