ಕನ್ನಡಪ್ರಭ ವಾರ್ತೆ ಬೆಳಗಾವಿಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಸಂಬಂಧ ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮಹಾರಾಷ್ಟ್ರದಿಂದ ನೀರು ಬಿಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಬಳಿಕ ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಷ್ಟೇ ಎಲ್ಲದಕ್ಕೂ ರಾಜಕೀಯ ಉಪಯೋಗ ಮಾಡುತ್ತಾರೆ. ಚುನಾವಣೆ ನಡೆದರೆ ಅಷ್ಟೇ ಬಿಜೆಪಿಯವರು ಹೋರಾಟ ಮಾಡುತ್ತಾರೆ. ಬೇರೆಯವರಿಗೆ ನ್ಯಾಯ ಕೊಡಸಲಿಕ್ಕೆ ಬಿಜೆಪಿಯವರ ಹೋರಾಟ ಇಲ್ಲ. ಜನರು ಬಿಜೆಪಿ ಬಗ್ಗೆ ತಿಳಿದುಕೊಳ್ಳಬೇಕು. ಅಂಜಲಿ ಕೊಲೆಗೂ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ಅದು ಖಾಸಗಿ ವಿಷಯವಾಗಿದ್ದು, ಈ ಪ್ರಕರಣದ ತನಿಖೆ ಬಗ್ಗೆ ಗೃಹ ಸಚಿವರೇ ಸ್ಪಷ್ಟೀಕರಣ ನೀಡಬೇಕು ತಿಳಿಸಿದರು.-----ಕೋಟ್...
ಬೆಳೆಹಾನಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ರೈತರಿಗೆ ಬೆಳೆಹಾನಿ ಪರಿಹಾರ ನೀಡಲಾಗಿದೆ. ಇನ್ನು ₹1 ಲಕ್ಷ ಉಳಿದಿದೆ. ಇನ್ನೂ ಕೇಂದ್ರದಿಂದ ಹಣ ಬರಬೇಕಿದೆ. ಕೇಂದ್ರದಿಂದ ಹಣ ಬಂದ ಮೇಲೆ ರೈತರಿಗೆ ಪರಿಹಾರ ನೀಡಲಾಗುವುದು.-ಸತೀಶ ಜಾರಕಿಹೊಳಿ, ಸಚಿವ.