ಮಾಗಡಿ: ಜನಪದ ಸಾಹಿತ್ಯ ಅಳಿವಿನಂಚಿನಲ್ಲಿದೆ ಎಂಬ ಅಭಿಪ್ರಾಯ ಸರಿಯಲ್ಲ, ಪುಣ್ಯಭೂಮಿ ಮಾಗಡಿ ನೆಲದಲ್ಲಿ ಮೂಲಜನಪದ ಕಲಾವಿದರಿದ್ದು, ದೇಶವಿದೇಶಗಳನ್ನು ಸುತ್ತಿ ಜನಪದ ಸಂಗೀತ, ಸಾಹಿತ್ಯ, ಪ್ರದರ್ಶನ ಕಲೆಗಳನ್ನು ಪ್ರದರ್ಶಿಸುವ ಮೂಲಕ ಮೂಲ ಪರಂಪರೆ ಉಳಿಸಲು ಶ್ರಮಿಸುತ್ತಿರುವ ಜೋಗಿಲ ಸಿದ್ದರಾಜು ಅವರು ಮಂಡಿಸಿದ್ದ ಪ್ರಬಂದಕ್ಕೆ ಪಿಎಚ್.ಡಿ ಲಭಿಸಿರುವುದು ಸಂತಸ ತಂದಿದೆ ಹಿರಿಯ ವಕೀಲ ಪ್ರಕಾಶ್ ಎಂದು ಹೇಳಿದರು.
ಜಾನಪದ ಗಾಯಕ ಡಾ.ಜೋಗಿಲ ಸಿದ್ದರಾಜು ಮಾತನಾಡಿ, ನಮ್ಮ ಅಮ್ಮ ಹಾಡುತ್ತಿದ್ದ ಜೋಗುಳ ಪದಗಳನ್ನು ಕೇಳಿಸಿಕೊಂಡು ಬೆಳೆದವನು ನಾನು. ಜನಪದ ದೈವಗಳ ಕಥನ ಕಾವ್ಯ, ಸೋಬಾನೆ ಪದ, ದೇವರ ಪದ, ಬಳೆಗಾರ ಚೆನ್ನಯ್ಯನ ಪದ, ಮಂಟೇಸ್ವಾಮಿ, ಜುಂಜಪ್ಪ, ಮಲೆಮಹದೇಶ್ವರ, ಸಿದ್ದಪ್ಪಾಜಿ, ಬಯಲುಸೀಮೆಯ ತಿಪ್ಪೇಸ್ವಾಮಿ, ಕಾಡುಗೊಲ್ಲರ, ಇರುಳಿಗ, ಸೋಲಿಗ, ಮೇದ, ಭೈರವನ ಪದಗಳನ್ನು ಕೇಳಿಸಿಕೊಂಡು ಮೂಲ ಜನಪದದಲ್ಲಿ ಹಾಡುವ ಮೂಲಕ 18 ದೇಶಗಳನ್ನು ಸುತ್ತಿ ಬಂದಿದ್ದೇನೆ. ಕೆಂಪೇಗೌಡರ ಮಾಗಡಿ ಸೀಮೆಯಲ್ಲಿ ಗೆಳೆಯರು ಅಭಿನಂದಿಸಿದ್ದು ತುಂಬಾ ಸಂತೋಷ ತಂದಿದೆ.ಇನ್ನೂ ಜವಾಬ್ದಾರಿ ಹೆಚ್ಚಿದೆ ಎಂದರು.
ಈ ವೇಳೆ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ದೊಡ್ಡಬಾಣಗೆರೆ ಮಾರಣ್ಣ, ಮಲ್ಲಿಗೆ ಜಗದೀಶ್, ಬಿಡಿಎ ಚಿಕ್ಕಣ್ಣ, ಆನಂದ್.ಕೆ, ಪ್ರಕಾಶ್, ಹರೀಶ್, ಶರವಣ, ಲೋಕೇಶ್, ವಕೀಲ ಚಂದ್ರಶೇಖರ್, ಯತೀಶ್, ಜಿ.ವೆಂಕಟೇಶ್, ಅಂಜನಮೂರ್ತಿ, ಶಂಕರೇಗೌಡ, ಅಣ್ಣಾಜಿಗೌಡ ಇತರರು ಪಾಲ್ಗೊಂಡಿದ್ದರು.