ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಎ ವರ್ಗದ ಎರಡು ಮತಗಳ ಎಣಿಕೆಯನ್ನು ನ್ಯಾಯಾಲಯದ ಆದೇಶದ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ಎ ವರ್ಗದ ಕಾಂಗ್ರೆಸ್ ಬೆಂಬಲಿತ ಮೂರು ಅಭ್ಯರ್ಥಿಗಳು ತಲಾ 11 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಮತ್ತೊಬ್ಬರು 10 ಮತಗಳನ್ನು ಪಡೆದಿದ್ದಾರೆ.
ಬಿ ವರ್ಗದ 8 ಸ್ಥಾನಗಳನ್ನು ಬಿಜೆಪಿ- ಜೆಡಿಎಸ್ ಬೆಂಬಲಿತ ಮೈತ್ರಿ ಅಭ್ಯರ್ಥಿಗಳು ಭರ್ಜರಿ ಗೆಲವು ಪಡೆದುಕೊಂಡರು.ಮನುಗನಹಳ್ಳಿ ಹಾಗೂ ಕ್ಯಾತನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡೆಲಿಕೇಟ್ ಗಳ ರಾಜೀನಾಮೆ ಪ್ರಹಸನ ನ್ಯಾಯಾಲಯದಲ್ಲಿ ಇರುವುದರಿಂದ, ಈ ಎರಡು ಮತ ಎಣಿಕೆ ಪೂರ್ಣಗೊಳ್ಳದ ಕಾರಣ ಫಲಿತಾಂಶ ಪ್ರಕಟಗೊಂಡಿಲ್ಲ. ಬಿ ವರ್ಗದ ಜೆಡಿಎಸ್ ,ಬಿಜೆಪಿ ಮೈತ್ರಿ ಅಭ್ಯರ್ಥಿಗಳಾದ ಅರವಿಂದ, ನೂರ್ ಮೊಹಮ್ಮದ್, ಬಸವರಾಜಪ್ಪ, ಭುಜಂಗನಾಯಕ, ಮಾದಯ್ಯ, ವೈಲಾ ನಂಜಪ್ಪ, ಶಿವಮಲ್ಲಪ್ಪ, ಶುಭಮಂಗಳ ಜಯಗಳಿಸಿದರು.
ಟಿಎಪಿಎಂಸ್ ಚುನಾವಣೆಯಲ್ಲಿ ಎಂ.ಡಿ.ಮಂಚಯ್ಯ ಅವರಿಗೆ ಮತದಾನದ ಹಕ್ಕು ಇದ್ದರೂ ಉದ್ದೇಶಪೂರ್ವಕವಾಗಿ ಚುನಾವಣಾಧಿಕಾರಿ ಹಕ್ಕನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಒಂದು ಘಂಟೆಗೂ ಹೆಚ್ಚಿನ ಕಾಲ, ಚುನಾವಣಾಧಿಕಾರಿ ಶ್ರೀನಿವಾಸ್ ಹಾಗೂ ರೇಣುಕಾ ವಿರುದ್ಧ ಜೆಡಿಎಸ್ ಬೆಂಬಲಿಗರು ಮತದಾನ ಕೇಂದ್ರದ ಸಮೀಪ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಮೈತ್ರಿ ಬೆಂಬಲಿಗರು ಹಾಗೂ ಮುಖಂಡ ಕೆ.ಎಂ.ಕೃಷ್ಣನಾಯಕ ಮತ್ತು ದಲಿತ ಸಂಘಟನೆಗಳ ಮುಖಂಡರು ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು.