- ಅಜ್ಜಂಪುರ ಪಟ್ಟಣದಲ್ಲಿ ಶ್ರೀ ಬೀರಲಿಂಗೇಶ್ವರಸ್ವಾಮಿ ದೇವಾಲಯ ಪ್ರವೇಶೋತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಶ್ರೀ ಭಕ್ತ ಕನಕದಾಸರ ಪ್ರತಿಮ ಲೋಕಾರ್ಪಣೆ ಕನ್ನಡಪ್ರಭ ವಾರ್ತೆ, ಅಜ್ಜಂಪುರ
ಬುಧವಾರ ಅಜ್ಜಂಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಪ್ರವೇಶೋತ್ಸವ ಮತ್ತು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಹಾಗೂ ಶ್ರೀ ಭಕ್ತ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಿರೋಧ ಪಕ್ಷ ಹೇಳಿದಂತೆ, ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎಂದು ಪ್ರತಿಪಾದಿಸಿದ ಅವರು, ಸಿದ್ದರಾಮಯ್ಯ ಅವರದ್ದು ಬರಿದಾಗುವ ಖಜಾನೆಯೂ ಅಲ್ಲ. ಬಿಜೆಪಿ ಅವಧಿಯಲ್ಲಿ ಪೋಲಾಗುತ್ತಿದ್ದ ಶೇ 40 ರಷ್ಟು ಕಮಿಷನ್ ಗೆ ಕಡಿವಾಣ ಹಾಕಿದ್ದೇವೆ. ಸೋರಿಕೆಯಾಗುತ್ತಿದ್ದ ಹಣ ಅಭಿವೃದ್ಧಿಗೆ ಸಾಕಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಪಟ್ಟಣದ ಶುದ್ಧ ಕುಡಿಯುವ ನೀರಿಗೆ 25 ಕೋಟಿ, ತರೀಕೆರೆಗೆ 50 ಕೋಟಿ ಮಂಜೂರಾಗಿದೆ. ತರೀಕೆರೆ ಪುರಸಭೆ ವ್ಯಾಪ್ತಿ ಅಭಿವೃದ್ಧಿಗೆ 150 ಕೋಟಿ ರು.ಅಗತ್ಯವಾಗಿದ್ದು, 25 ಕೋಟಿ ರು.ಬಿಡುಗಡೆಗೆ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದೆ. ಕ್ಷೇತ್ರದ ಪಾರ್ಕ್ ಮತ್ತು ಕೆರೆ ಅಭಿವೃದ್ಧಿಗೆ 5 ಕೋಟಿ, ತರೀಕೆರೆ ಬಿ.ಎಚ್. ರಸ್ತೆ ಕಾಮಗಾರಿಗೆ 6 ಕೋಟಿ, ಬಸ್ ನಿಲ್ದಾಣ ಅಭಿವೃದ್ಧಿಗೆ 4 ಕೋಟಿಗೆ ಡಿಪಿಆರ್ ಸಿದ್ಧವಾಗಿದೆ. ಕ್ಷೇತ್ರಕ್ಕೆ ಹೆಚ್ಚು ಅನುದಾನ ಮಂಜೂರಾಗಲು ಸಚಿವ ಭೈರತಿ ಸುರೇಶ್ ಕಾರಣ ಎಂದು ಹೇಳಿದರು.ಬೈರತಿ ಸುರೇಶ್ ಅವರು ಸಮಾಜದ ದೀಮಂತ ನಾಯಕ. ರಾಜಕೀಯ ಚತುರ, ಅವರು ಭವಿಷ್ಯದ ಮುಖ್ಯಮಂತ್ರಿ. 2023 ರಲ್ಲಿ ಸಿಎಂ ಗಾದಿಗೇರಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಳನಾಡು ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ದರಾಮೇಶ್ವರ ದೇಶೀಕೇಂದ್ರ ಮಹಾಸ್ವಾಮೀಜಿ, ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ್, ಶಿವಣ್ಣ, ತಮ್ಮಯ್ಯ, ಕುರುಬರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಮಂಜುನಾಥ್, ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಮುಗಳಿ ಲಕ್ಷ್ಮೀದೇವಮ್ಮ, ಮುಖಂಡರಾದ ಟಿ.ವಿ.ಶಿವಶಂಕರಪ್ಪ, ಜೋಗಿ ಪ್ರಕಾಶ್, ಷಡಾಕ್ಷರಿ, ಮೆಡಿಕಲ್ ಶಿವಾನಂದ್, ತಿಪ್ಪೇಶ್ ಮಡಿವಾಳ್ ಮತ್ತಿತರರು ಇದ್ದರು.14ಕೆಟಿಆರ್.ಕೆ.4ಃ