ಕಾಂಗ್ರೆಸ್ಸಿಗರಿಗೆ ಮಾನ ಮರ್ಯಾದೆ ಇಲ್ಲ: ಸಿ.ಟಿ. ರವಿ

KannadaprabhaNewsNetwork |  
Published : Apr 25, 2024, 01:07 AM IST

ಸಾರಾಂಶ

ಕಾಂಗ್ರೆಸ್‌ ಪಕ್ಷದವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ, ಅವರ ಜಾಗದಲ್ಲಿ ನಾನು ಇದ್ದಿದ್ದರೆ ಎನ್‌ ಕೌಂಟರ್ ಮಾಡಿ ತೋರಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಸಚಿವ ಶಿವಾನಂದ್‌ ಪಾಟೀಲ್‌ ನೀಡಿರುವ ಹೇಳಿಕೆಗೆ ಕಿಡಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಂಗ್ರೆಸ್‌ ಪಕ್ಷದವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ, ಅವರ ಜಾಗದಲ್ಲಿ ನಾನು ಇದ್ದಿದ್ದರೆ ಎನ್‌ ಕೌಂಟರ್ ಮಾಡಿ ತೋರಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಶಿವಾನಂದ್‌ ಪಾಟೀಲ್‌ ನೀಡಿರುವ ಹೇಳಿಕೆಗೆ ಕಿಡಿ ಕಾರಿದರು.

ಬ್ರದರ್ಸ್‌ ಬೇಜಾರಾಗ್ತಾರೆಂದು ಆರೋಪಿಗಳ ಹೆಸರು ಹೇಳಲು ಸಿದ್ಧರಿರಲಿಲ್ಲ. ಕಾಲೇಜಲ್ಲಿ ಹಾಡಹಗಲೇ ಚುಚ್ಚಿ ಚುಚ್ಚಿ ಕೊಲ್ತಾನೆ, ಇವರ ಮನೆಯಲ್ಲಿ ಅಂತಹ ಪ್ರಕರಣವಾಗಿದ್ರೆ ಅನುಭವಕ್ಕೆ ಬರುತ್ತಿತ್ತು, ಸತ್ತಿರೋದು ಕಂಡವರ ಮನೆ ಹೆಣ್ಣು ಮಕ್ಕಳು ಅಲ್ವಾ, ಕಂಡವರ ಮನೆ ಹೆಣ್ಣು ಮಕ್ಕಳು ತಾನೇ ಲವ್ ಜಿಹಾದ್ ಗೆ ಬಲಿಯಾಗಿರೋದು, ಹಾಡಹಗಲೇ ಕಾದು ಕೂತು ಹೊಂಚು ಹಾಕಿ ಕೊಲ್ತಾನೆ. ಆದರೆ, ಇವ್ರಿಗೆ ಆಕಸ್ಮಿಕ ಪ್ರಕರಣ. ಜನ ಕ್ಯಾಕರಿಸಿ ಉಗಿಯೋಕೆ ಶುರು ಮಾಡಿದ್ದರಿಂದ ಈಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ ಎಂದರು.ಕರೋಡ್‌ ಪತಿ:

ಕಾಂಗ್ರೆಸ್ಸಿನಲ್ಲಿ ಕರೋಡ್ ಪತಿ ಸಾಹೇಬ್ರುಗಳಿದ್ದಾರೆ. ರಾಜಕೀಯಕ್ಕೆ ಬಂದಾಗ ಪೈಸೆಗೂ ಗತಿ ಇರಲಿಲ್ಲ. ಇವತ್ತು ಸಾವಿರಾರು ಕೋಟಿ ಕರೋಡ್ ಪತಿ, ದೇಶದ ಜನರಿಗೆ ಹಂಚಬೇಡಿ. ಬಿಜೆಪಿಯವ್ರನ್ನ ನಿಮ್ಮ ಲಿಸ್ಟ್ ನಲ್ಲೂ ಸೇರಿಸಿಕೊಳ್ಳಬೇಡಿ, ಬಡ ಕಾಂಗ್ರೆಸ್ ಕಾರ್ಯಕರ್ತರಿಗೆ ಸಾವಿರಾರು ಕೋಟಿ ಆಸ್ತಿಯನ್ನು ಹಂಚಿ ಎಂದು ಕುಟುಕಿದರು.

ರೈತ ಆಲೂಗೆಡ್ಡೆ ಹಾಕಿ ಆಲೂಗಡ್ಡೆ ಮಾತ್ರ ಬೆಳೆದ, ನಿಮಗೆ ಆಲೂಗಡ್ಡೆ ಹಾಕಿ ಚಿನ್ನ ಬೆಳೆಯುವ ಕಲೆ ಗೊತ್ತಿದೆ. ನೀವು ಮಹಾನ್ ಖದೀಮರು, ನಿಮ್ಮ ಆಸ್ತಿಯನ್ನು ನೀವು ನಿಮ್ಮ ಪಕ್ಷದ ಬಡ ಕಾರ್ಯಕರ್ತರಿಗೆ ಹಂಚಿ ಎಂದರು.

ಕಾಂಗ್ರೆಸ್ ಮಾಂಗಲ್ಯವನ್ನೂ ಕಿತ್ಕೊಳ್ಳಲು ಹೊರಟಿರುವುದನ್ನ ಉಲ್ಲೇಖಿಸಿರೋದು, ಅದು ಹೇಗೆ ಅನುಮಾನಕ್ಕೆ ಕಾರಣ ವಾಗುತ್ತೆ ಅಂದ್ರೆ, ಅದಕ್ಕೆ ಪೂರಕವಾಗಿ ಮನಮೋಹನ್ ಸಿಂಗ್, ಸಿದ್ರಾಮಯ್ಯ, ಥಿಂಕ್ ಟ್ಯಾಂಕ್ ಶ್ಯಾಮ್ ಪಿತ್ರೋಡ ಹೇಳಿಕೆ, ಎಲ್ಲವೂ ಆಸ್ತಿ ಕಿತ್ತುಕೊಳ್ಳಲು ಹೊರಟಿದ್ದಾರೆ ಅನ್ಸತ್ತೆ, ಚಾಲೆಂಜ್ ಹಾಕ್ತೀನಿ, ನಿಮಗೆ ಅ ರೀತಿ ಪ್ರಮಾಣಿಕತೆ ಇದ್ರೆ ನಿಮ್ಮ ಆಸ್ತಿ ಹಂಚಿ ಮಾದರಿಯಾಗಿ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ