- ಮೂರ್ನಾಲ್ಕು ಗ್ರಾಪಂಗಳ ಕಾಮಗಾರಿಗೆಲ್ಲ ಒಬ್ಬನೇ ಗುತ್ತಿಗೆದಾರ! । ಅಧಿಕಾರಿಗಳು 20 ನೋಟಿಸ್ ನೀಡಿದರೂ ಉತ್ತರವಿಲ್ಲ
- - -
ಎಚ್.ಎಂ. ಸದಾನಂದಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಎಲ್ಲ ಗ್ರಾಮೀಣ ಭಾರತೀಯ ಮನೆಗಳಿಗೆ ವೈಯಕ್ತಿಕ ಮನೆಯ ನಳ ಸಂಪರ್ಕಗಳ ಮೂಲಕ ಸುರಕ್ಷಿತವಾಗಿ ಸಾಕಷ್ಟು ಕುಡಿಯುವ ನೀರನ್ನು ಒದಗಿಸುವ ಗುರಿ ಈ ಯೋಜನೆ ಪ್ರಮುಖ ಉದ್ದೇಶವಾಗಿದೆ. ಪ್ರತಿ ಮನೆಗಳು, ಶಾಲೆಗಳು, ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ, ಸಮುದಾಯ ಮತ್ತು ಕ್ಷೇಮ ಕಟ್ಟಡಗಳಿಗೆ ನಲ್ಲಿಗಳ ಮೂಲಕ ನೀರು ಸರಬರಾಜು ಕಾರ್ಯಕ್ರಮವಿದು. ಜಲಜೀವನ್ ಮಿಶನ್ನಡಿ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಳಹಳ್ಳಿ, ಸಂಕ್ಲೀಪುರ, ಮಲ್ಲನಾಯಕನಹಳ್ಲಿ, ಶ್ರೀನಿವಾಸ ನಗರ, ಗುಳದಹಳ್ಳಿ ಗ್ರಾಮಗಳಲ್ಲಿ ಪೈಪ್ಲೈನ್ ಮತ್ತು ನಳ ಅಳವಡಿಕೆ ಕಾರ್ಯ ಮುಕ್ತಾಯವಾಗಿದೆ. ಆದರೆ, ಇನ್ನೂ ನೀರು ಹರಿದಿಲ್ಲ.
19 ನೋಟಿಸ್ ನೀಡಿದರೂ ಸ್ವೀಕರಿಸದ ಗುತ್ತಿಗೆದಾರರು:
ಈ ಮಧ್ಯೆ ನಲ್ಲಿ ನೀರು ಪೂರೈಕೆಯಿಂದ ಮೀಟರ್ ಓಡುತ್ತದಲ್ಲ ಎಂಬ ಭಯವೂ ಕೆಲ ನಾಗರೀಕರಲ್ಲಿ ಕಾಡುತ್ತಿದೆ, ಚಾನಲ್ ನೀರು ಬಂದ್ ಆದಾಗ ದನಕರುಗಳ ಮೈ ತೊಳೆಯಲು ಮುಂದೆ ಏನಪ್ಪ ಮಾಡೋದು ಎಂಬ ಯೋಚನೆ ಗ್ರಾಮಸ್ಥರಲ್ಲಿ ಶುರುವಾಗಿದೆ. ಇದರ ಮಧ್ಯೆಯೇ ಪೈಪ್ಗಳ ಬೈಪಾಸ್ ಮೂಲಕ ನೀರು ಪಡೆಯಲು ಕೆಲ ನಿವಾಸಿಗಳು ಹುನ್ನಾರ ನಡೆಸಿದ್ದಾರೆ. ಮಲೇಬೆನ್ನೂರು ಸಮೀಪದ ಬೆಳ್ಳೂಡಿ, ಬನ್ನಿಕೋಡು ಮತ್ತಿತರೆ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಜಲಜೀವನ್ ಮಿಶನ್ ಕಾಮಗಾರಿಯೂ ಇದೇ ರೀತಿ ಸ್ಥಗಿತವಾಗಿದೆ ಎಂಬುದು ಗ್ರಾಮಸ್ಥರ ಆರೋಪ.
(ಕೋಟ್ಸ್) ಮಲ್ಲನಾಯ್ಕನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣವಾಗಿದೆ. ಸಂಕ್ಲೀಪುರದಲ್ಲಿ ಶೇ.೮೦ ಕಾಮಗಾರಿ ಪೂರ್ಣವಾಗಿದೆ. ಆದರೆ, ಹರಳಹಳ್ಳಿ, ಗುಳದಹಳ್ಳಿಯಲ್ಲಿ ಗ್ರಾಮಗಳಲ್ಲಿ ಶೇ.೫೦ರಷ್ಟು ಕಾಮಗಾರಿ ಮಾತ್ರ ನಡೆದಿದೆ. ಕಳೆದ ಒಂದೂವರೆ ವರ್ಷದಿಂದ ಹೆಚ್ಚುವರಿ ನೀರಿನ ಟ್ಯಾಂಕ್ ಕಾಮಗಾರಿ ನಡೆಯದೇ ಯೋಜನೆ ಅಪೂರ್ಣವಾಗಿದೆ. ಈ ಕುರಿತು ಮೇಲಾಧಿಕಾರಿಗೆ ವರದಿ ಸಲ್ಲಿಸಿದ್ದೇವೆ.
ಮನೆಮನೆಗೆ ಗಂಗೆ ಕಾರ್ಯಕ್ರಮ ಜಾರಿಯ ನಂಬಿಕೆಯಿಂದ ಇರುವ ಹಳೆಯ ನೀರಿನ ಟ್ಯಾಂಕ್ ಸಹ ಕೆಡವಿದ್ದೇವೆ. ಈಗ ಯೋಜನೆ ಹಿನ್ನಡೆಯಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ಭಾರಿ ಸಮಸ್ಯೆಯಾಗಿದೆ. ಈ ಸಂಕಷ್ಟ ಯಾರಿಗೆ ಹೇಳಬೇಕು? ಮತದಾರರು ಗ್ರಾಮ ಸದಸ್ಯರ ಮನೆಗಳ ಬಳಿ ಬಂದು ತಮ್ಮ ತೊಂದರೆ ಹೇಳುತ್ತಾರೆ. ಈ ಸಮಸ್ಯೆ ಬಗೆಹರಿಸೋದು ಹೇಗೆಪ್ಪ ಎಂಬುದೇ ದೊಡ್ಡ ಯೋಚನೆಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲಿಕ್ಕೆ ಸರ್ಕಾರದಿಂದ ಅನುದಾನವೂ ಬರುತ್ತಿಲ್ಲ. ಬೋರ್ಗಳ ನೀರೇ ಗತಿಯಾಗಿದೆ.
- ಜಾಕೀರ್, ಸಹಾಯಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ.
- - --ಚಿತ್ರ-೧: ಹರಳಹಳ್ಳಿಯಲ್ಲಿರುವ ಅಪೂರ್ಣ ಕಾಮಗಾರಿಯ ನೀರಿನ ಟ್ಯಾಂಕ್.
-ಚಿತ್ರ-೨: ನಳಕ್ಕೆ ಹಾಕಿರುವ ನೀರಿನ ಪೈಪ್.