ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಂಚಿಕೆ ಮಾಡುವುದಕ್ಕಿಂತ ಎರಡು ಪಟ್ಟು ಹೆಚ್ಚು ಗೃಹ ನಿರ್ಮಾಣ ಸಹಕಾರಿ ಸಂಘಗಳು ರಾಜ್ಯದಲ್ಲಿ ನಿವೇಶನ ಮತ್ತು ಮನೆಗಳನ್ನು ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿವೆ ಎಂದು ರಾಜ್ಯ ಸಹಕಾರಿ ವಸತಿ ಮಹಾಮಂಡಲದ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಸೋಮವಾರ ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ (ಬಿಡಿಎ), ಗೃಹ ಮಂಡಳಿಗಿಂತ ಎರಡು ಪಟ್ಟು ನಿವೇಶನ ಹಂಚಿಕೆ ಮತ್ತು ಮನೆ ನಿರ್ಮಾಣ ಮಾಡಿಕೊಡುವ ಕೆಲಸವನ್ನು ಗೃಹ ನಿರ್ಮಾಣ ಸಹಕಾರಿ ಸಂಘ ಗಳು ರಾಜ್ಯದಲ್ಲಿ ಮಾಡುತ್ತಿವೆ. ಅದೂ ಸಹ ಅತ್ಯಂತ ಕಡಿಮೆ ಬೆಲೆಯಲ್ಲಿ ಎಂದು ತಿಳಿಸಿದರು.ರಾಜ್ಯದಲ್ಲಿ ಸಾವಿರಾರು ಗೃಹ ನಿರ್ಮಾಣ ಸಹಕಾರಿ ಸಂಘಗಳು ಇವೆ. ಈ ಪೈಕಿ ಕೆಲವೇ ಸಂಸ್ಥೆಗಳು ನಿವೇಶನ, ಅಪಾರ್ಟ್ ಮೆಂಟ್ ನಿರ್ಮಾಣ, ಸಾಲ ಸೌಲಭ್ಯ ನೀಡುವ ಕೆಲಸ ಮಾಡುತ್ತಿವೆ. ಕೆಲವು ವಂಚನೆ ಮಾಡುವ ಸಹಕಾರಿ ಸಂಘಗಳು ಇವೆ ಎಂದು ಎಚ್ಚರಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರಿ ಸಂಸ್ಥೆಗೆ 100 ವರ್ಷ ತುಂಬಿದೆ ಎಂದರೆ ಅದು ಸಾಮಾನ್ಯ ಸಂಗತಿ ಅಲ್ಲ. ರಾಷ್ಟ್ರೀಯ ಬ್ಯಾಂಕ್ಗಳಲ್ಲಿ ಮನೆ ಕಟ್ಟುವುದಕ್ಕೆ ಸಾಲ ಪಡೆಯುವುದು ಸುಲಭದ ಕೆಲಸವಲ್ಲ, ಸಾಲ ಮರು ಪಾವತಿಗೆ ಶಕ್ತಿ ಇದ್ದರೂ, ದಾಖಲೆಗಳನ್ನು ಸಲ್ಲಿಸುವುದಕ್ಕೆ ಆಗುವುದಿಲ್ಲ. ಅಂತಹವರಿಗೆ ಹಾಗಾಗಿ. ಆರಂಭಗೊಂಡಿದ್ದೇ, ಸಹಕಾರಿ ಸಂಸ್ಥೆಗಳು. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಬೆಳೆಯುವುದಕ್ಕೆ ಎಸ್,ಎಲ್. ಧರ್ಮೇಗೌಡರ ಶ್ರಮ ಸಾಕಷ್ಟು ಇದೆ ಎಂದರು.
-- ಬಾಕ್ಸ್ --
ಸಹಕಾರಿ ಕ್ಷೇತ್ರಕ್ಕೆ ಬಂದ ಮೇಲೆ ಕ್ಷೇತ್ರಕ್ಕೆ ನ್ಯಾಯಕೊಡುವ ಕೆಲಸ ಮಾಡಬೇಕು. ಕೃಷಿ ಬದುಕು ಉಳಿದಿಲ್ಲ. ಇಂದಿನ ಪೀಳಿಗೆ ಕೃಷಿ ಲಾಭ ಇಲ್ಲ ಎಂದು ದೂರ ಹೋಗುತ್ತಿದ್ದಾರೆ. ಡಿಸಿಸಿ ಬ್ಯಾಂಕ್, ಸಹಕಾರಿ ಸಂಘಗಳ ಮೂಲಕ ಕೃಷಿ ಬದುಕು ಉಳಿಸುವ ಕೆಲಸ ಮಾಡಬೇಕು.
ಸಹಕಾರಿ ಇಲಾಖೆ ಮೂಲಕ ರೈತರಿಗೆ ಸಹಾಯ ಮಾಡುವುದಕ್ಕೆಸಾಧ್ಯವಾಗಿರುವುದು ಕೇವಲ ಶೇ.27 ರಷ್ಟು ಮಾತ್ರ. ಇನ್ನುಳಿದಂತೆ ಶೇ.73 ರಷ್ಟು ರೈತರನ್ನು ತಲುಪಿಲ್ಲ. ಕೋಟ್ಯಾಂತರ ರು, ಆಸ್ತಿ ಮಾಲೀಕರಿಗೆ ಸಾಲ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.