ಬಸವ ತತ್ವಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಲಿ

KannadaprabhaNewsNetwork |  
Published : Apr 21, 2026, 01:15 AM IST
ದ | Kannada Prabha

ಸಾರಾಂಶ

ಚಿಕ್ಕಮಗಳೂರುಬಸವ ಜಯಂತಿಯನ್ನು ಕೇವಲ ಆಚರಣೆ ಮಟ್ಟಕ್ಕೆ ಸೀಮಿತಗೊಳಿಸದೇ, ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಸವ ಜಯಂತಿಯನ್ನು ಕೇವಲ ಆಚರಣೆ ಮಟ್ಟಕ್ಕೆ ಸೀಮಿತಗೊಳಿಸದೇ, ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿ ‘ಪಾಂಚಜನ್ಯ’ದಲ್ಲಿ ಸೋಮವಾರ ನಡೆದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಫೋಟೋಗಳಿಗೆ ಪೂಜೆ ಸಲ್ಲಿಸುವುದಕ್ಕಿಂತ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮುಖ್ಯ.‘ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಎಂಬ ಬಸವಣ್ಣನ ವಚನವನ್ನು ಉಲ್ಲೇಖಿಸಿ ಪ್ರತಿಮೆ ಮತ್ತು ಆಚರಣೆಗಳು ‘ಸ್ಥಾವರ’, ಆದರೆ ತತ್ವಗಳು ‘ಜಂಗಮ’ ಎಂದು ವಿವರಿಸಿದರು.ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣನವರ ಒಂದೇ ವಚನವನ್ನು ಬದುಕಿನಲ್ಲಿ ಅಳವಡಿಸಿ ಕೊಂಡರೆ ಸಾಕು. ಅದೇ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಮಾರ್ಗ. ಅವರು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದಿದ್ದು, ಧರ್ಮ ಬಾಹ್ಯ ಅಲಂಕಾರಗಳಲ್ಲಿ ಇಲ್ಲ, ‘ದಯೆಯೇ ಧರ್ಮದ ಮೂಲ’ ಎಂಬುದು ಅದರ ಸಾರ ಎಂದು ಪ್ರತಿಪಾದಿಸಿದರು.

ಸಮಾಜದಲ್ಲಿ ದಯೆ, ಸತ್ಯ ಮತ್ತು ಸಮಾನತೆಯನ್ನು ಬಲಪಡಿಸುವುದಕ್ಕೆ ಬಸವಣ್ಣನವರ ತತ್ವಗಳು ಮಾರ್ಗದರ್ಶಕ. ಸಮಾಜದಲ್ಲಿ ಜಾತಿ ಆಧಾರಿತ ಅಂತರಗಳನ್ನು ದೂರ ಮಾಡುವ ಅಗತ್ಯವಿದೆ. ವೃತ್ತಿಗಳ ಆಧಾರದ ಮೇಲೆ ಸಮಾಜದಲ್ಲಿ ಜಾತಿಗಳು ರೂಪಗೊಂಡಿದ್ದು, ಜಾತೀ ಭಾವನೆ ಹೊಂದಿದ ಬಸವಣ್ಣನವರ ಅನುಯಾಯಿಗಳಾಗಲು ಸಾಧ್ಯವಿಲ್ಲ. ಇವ ನಮ್ಮವ ಎಂಬ ಮನೋಭಾವ ಬೆಳೆಸಿದಾಗ ಮಾತ್ರ ಬಸವ ತತ್ವದ ಅನುಷ್ಠಾನ ಸಾಧ್ಯ ಎಂದರು.

ಬಸವಣ್ಣನವರ ವಿಚಾರಗಳು ಸತ್ಯಾಧಾರಿತವಾಗಿರುವುದರಿಂದ ಶಾಶ್ವತವಾಗಿವೆ. ಸುಳ್ಳು ಕೆಲ ದಿನ ಮಾತ್ರ ಉಳಿಯುತ್ತದೆ. ಆದರೆ ಸತ್ಯ ಶಾಶ್ವತ. ಅವರ ತತ್ವಗಳು 800 ವರ್ಷಗಳ ನಂತರವೂ ಪ್ರಸ್ತುತವಾಗಿರುವುದೇ ಅದಕ್ಕೆ ಸಾಕ್ಷಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ಆರ್ ದೇವರಾಜ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಬಿ.ಜಿ ಸೋಮಶೇಖರ್, ಕವೀಶ್, ವೀಣಾ ಶೆಟ್ಟಿ, ರಾಜ್ಯ ಎಸ್. ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ್ ಭರಣ್ಯ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ ಎಸ್ ಪುಷ್ಪರಾಜು, ಹಿರಿಯ ಮುಖಂಡರಾದ ಶ್ರೀ ಕೋಟೆ ರಂಗನಾಥ್, ಕೇಶವಮೂರ್ತಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿ
ಬಸವಣ್ಣ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯ