ಸರ್ವೆ ಅಧಿಕಾರಿಗಳ ವಿರುದ್ಧ ದಲಿತರ ಗರಂ

KannadaprabhaNewsNetwork |  
Published : Aug 05, 2026, 01:15 AM IST
ಗುಬ್ಬಿ ತಾಲ್ಲೂಕಿನ ಹಲಸಿನ ನಾಗೇನಹಳ್ಳಿ ಗ್ರಾಮದ ದಲಿತರ ಜಮೀನನ್ನು ಸರ್ವೆ ಇಲಾಖೆಯ ಅಧಿಕಾರಿಗಳು ದಲಿತರ ಜಮೀನನ್ನು ಒತ್ತುವರಿ ಮಾಡಿದರೆ ಎಂದು ಆಗ್ರಹಿಸಿ ದಲಿತ ಕುಂಟುಂಬಗಳು ಕಂದಾಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ಹಲಸಿನ ನಾಗೇನಹಳ್ಳಿ ಗ್ರಾಮದ ದಲಿತರ ಜಮೀನನ್ನು ಸರ್ವೆ ಇಲಾಖೆಯ ಅಧಿಕಾರಿಗಳೇ ಮುಂದೆ ನಿಂತು ಭೂ ಮಾಫಿಯಾದವರಿಗೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಅಲ್ಲಿನ ದಲಿತ ಕುಟುಂಬಗಳು ಕಂದಾಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಹಲಸಿನ ನಾಗೇನಹಳ್ಳಿ ಗ್ರಾಮದ ದಲಿತರ ಜಮೀನನ್ನು ಸರ್ವೆ ಇಲಾಖೆಯ ಅಧಿಕಾರಿಗಳೇ ಮುಂದೆ ನಿಂತು ಭೂ ಮಾಫಿಯಾದವರಿಗೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಅಲ್ಲಿನ ದಲಿತ ಕುಟುಂಬಗಳು ಕಂದಾಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡ ಕಡಬ ಶಂಕರ್, ಗ್ರಾಮದಲ್ಲಿ ಸುಮಾರು 30 ದಲಿತ ಕುಂಟುಂಬಗಳು ವಾಸವಾಗಿದ್ದು ದಲಿತ ರೈತರ ಜಮೀನಿನ್ನು ಸರ್ವೆ ಮಾಡುತ್ತೇವೆ ಎಂದು ಹೇಳಿರುವ ಅಧಿಕಾರಿಗಳು, ರೈತರ ಮನೆ ಹತ್ತಿರ ಹೋಗಿ ದಾಖಲಾತಿಗಳನ್ನು ಪಡೆದು ಸಹಿ ಪಡೆದುಕೊಂಡಿದ್ದಾರೆ. ಸರ್ವೆ ನಡೆಸುವ ನಾಟಕ ಮಾಡಿರುವ ಅಧಿಕಾರಿಗಳು ರೈತರ ಪ್ರತಿ 1 ಎಕರೆ ಜಮೀನಿನಲ್ಲಿ 5-10 ಗುಂಟೆಗಳನ್ನು ಕಡಿಮೆ ಮಾಡುವ ಮೂಲಕ ಉಳಿದಿರುವ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ವಿಚಾರಿಸಿದರು ಯಾರೊಬ್ಬರು ಉತ್ತರ ನೀಡುತ್ತಿಲ್ಲ. ಒಂದೇ ಕಡೆ ಜಮೀನುಗಳಲ್ಲಿ ಅಳತೆ ಕಡಿಮೆ ತೋರಿಸಿ ಕೊನೆಗೆ ಉಳಿಯುವ ಜಮೀನಿಗೆ ಪಟ್ಟಭದ್ರರ ಹೆಸರು ಕೂಡಿಸುವ ಸಂಚನ್ನು ಅಧಿಕಾರಿಗಳು ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಈ ಸಮಸ್ಯೆ ಪರಿಹಾರಕ್ಕೆ ತಹಸೀಲ್ದಾರರು ಸ್ಥಳಕ್ಕೆ ಬರಬೇಕು ಮತ್ತು ಕೊಳ್ಳೆ ಹೊಡೆಯಲು ಉದ್ದೇಶಿಸಿರುವ ದಲಿತರ ಜಮೀನನ್ನು ವಾಪಸ್ಸು ಕೊಡಿಸಬೇಕು. ಇಲ್ಲವಾದರೆ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಸಿದರು. ದಲಿತ ಮುಖಂಡ ಈಶ್ವರಯ್ಯ ಮಾತನಾಡಿ ಹಲಸಿನ ನಾಗೇನಹಳ್ಳಿ ಗ್ರಾಮದಲ್ಲಿ ಸುಮಾರು 30ರಿಂದ 40 ದಲಿತ ಕುಂಟುಂಬಗಳು ಇದ್ದು ಸುಮಾರು ಎರಡು ತಲೆ ಮಾರುಗಳಿಂದ ರೈತರಿಗೆ ಸರ್ಕಾರ ಭೂಮಿ ಕೊಟ್ಟಿದೆ. ರೈತರು ಜಮೀನಿನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದಲಿತರ ಜಮೀನು ದುರಸ್ತಿ ಮಾಡುವ ನೆಪದಲ್ಲಿ ಜಮೀನಿನ ದಾಖಲೆ ಹಾಗೂ ಅಳತೆ ತಿದ್ದಲಾಗುತ್ತಿದೆ. ಇದು ಸರಿಯಲ್ಲ ಎಂದರು. ಕಂದಾಯ ಅಧಿಕಾರಿ ಮೋಹನ್ ಮಾತನಾಡಿ ರೈತರ ಜಮೀನು ಸರ್ವೆ ಮಾಡುವಾಗ ರೈತರ ಜಮೀನ್ ಕಡಿಮೆ ಆಗಿದೆ ಅಂಥ ರೈತರು ಪ್ರತಿಭಟನೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ತಹಸೀಲ್ದಾರ್ ಗಮನಕ್ಕೆ ತಂದು ಮತ್ತೊಮ್ಮೆ ರೈತರ ಜಮೀನ್ ಸರ್ವೆ ಮಾಡಿಸಿ ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ರೈತರು ಸಹಕರಿಸಬೇಕು ಎಂದು ಹೇಳಿದ ಬಳಿಕ ದಲಿತ ಮುಖಂಡರು ಪ್ರತಿಭಟನೆಯನ್ನು ಹಿಂಪಡೆದರು.

ಇದೇ ಸಂಧರ್ಭದಲ್ಲಿ ದಲಿತ ಮುಖಂಡರಾದ ಕಲ್ಲೇಶ್ ,ರವಿಕುಮಾರ್ , ಯೋಗೀಶ್ , ಶಶಿಕುಮಾರ್ , ಹಾಗೂ ದಲಿತ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಡಿತರ ಅಂಗಡಿ ಮಾಲೀಕರಿಗೆ ಕೆ2 ಮೂಲಕ ಕಮೀಷನ್‌
ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈ ತಪ್ಪಿದ್ದನ್ನು ವಿರೋಧಿಸಿ ನಾಳೆ ಬಂದ್