ಕಾಸರಗೋಡು ಗೋಕುಲಂ ಗೋಶಾಲೆಯಲ್ಲಿ ನೃತ್ಯ ವೈಭವ

KannadaprabhaNewsNetwork |  
Published : May 07, 2025, 12:48 AM IST
ಗೋಶಾಲೆಯಲ್ಲಿ ಸೋಮವಾರ ನಡೆದ ನೃತ್ಯವೈಭವ | Kannada Prabha

ಸಾರಾಂಶ

ಕಾಸರಗೋಡಿನ ಬೆಕಲ ಗೋಕುಲ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ನೇತೃತ್ವದಲ್ಲಿ ನಡೆಯುತ್ತಿರುವ ವೈಶಾಖ ನಟನಂ ನೃತ್ಯೋತ್ಸವದ ನಾಲ್ಕನೇ ದಿನ ಸೋಮವಾರ ವಿವಿಧ ರಾಜ್ಯಗಳ ಕಲಾವಿದರು ನೃತ್ಯ ವೈಭವ ನೇರವೇರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಸರಗೋಡಿನ ಬೆಕಲ ಗೋಕುಲ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ನೇತೃತ್ವದಲ್ಲಿ ನಡೆಯುತ್ತಿರುವ ವೈಶಾಖ ನಟನಂ ನೃತ್ಯೋತ್ಸವದ ನಾಲ್ಕನೇ ದಿನ ಸೋಮವಾರ ವಿವಿಧ ರಾಜ್ಯಗಳ ಕಲಾವಿದರು ನೃತ್ಯ ವೈಭವ ನೇರವೇರಿಸಿದರು.ರಾಮಾ ವೇಣುಗೋಪಾಲ್ (ಬೆಂಗಳೂರು) ಮತ್ತು ಅವರ ಶಿಷ್ಯವೃಂದ ‘ಕಲಾ ಕಲ್ಪಕ್ಷೇತ್ರ’ ತಂಡ, ವೈಷ್ಣವಿ ನೃತ್ಯಶಾಲೆ (ಬೆಂಗಳೂರು) ತಂಡ, ಭರತನಾಟ್ಯವನ್ನು ಪ್ರದರ್ಶಿಸಿದರು.ಮುಂಬೈಯಿಂದ ಆದಿತಿ ಅಖಿಲ್ ಮತ್ತು ವೈಷ್ಣವಿ ಸೂರ್ಯ ನಾರಾಯಣನ್ ನೃತ್ಯ ಸೇವೆ ನೀಡಿದರು. ಮಹಿತಾ ಸುರೇಶ್ (ಚೆನ್ನೈ), ರಾಮಾ ನೃತ್ಯ ವಿಹಾರ (ಕೊಚ್ಚಿನ್), ಪನ್ನಗ ರಾವ್ ಮತ್ತು ಅನಘಾಶ್ರೀ (ಉಡುಪಿ) ನೃತ್ಯ ನೆರವೇರಿಸದರು. ಹಿರಿಯ ಕಲಾವಿದೆ ಉಷಾ ರಾಣಿ ಅವರಿಂದ ಮೋಹಿನೀಯಟ್ಟಂ ನಡೆಯಿತು.

ವಿಶಾಖಪಟ್ಟಣಂ ತಂಡದ ಸೌಂದರ್ಯ ಮದ್ದಾಳಿ ಮತ್ತು ತಂಡ ಕುಚಿಪುಡಿಯಲ್ಲಿ ಅತ್ಯಂತ ಸುಂದರವಾಗಿ ನೃತ್ಯ ಪ್ರದರ್ಶನ ನೀಡಿದರು. ಮುಂಬೈನ ಸುಜಾತಾ ನಾಯರ್ ಹಾಗೂ ಪುತ್ರಿ ಶರಣ್ಯ ಅವರ ಜೊತೆಯಲ್ಲಿ ಮೋಹಿನೀಯಟ್ಟಂನಲ್ಲಿ ಪ್ರದರ್ಶನ ನೀಡಿದರು.ನೃತ್ಯ ಗುರು ನಿಲೇಶ್ವರಂ ಕಲಾಮಂಡಲಂ ಅಜಿತ್ ಅವರನ್ನು ಗೋಶಾಲೆಯ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಉದುಮ ಶಾಸಕ ಸಿ. ಎಚ್. ಕುಂಞಂಬು ಇದ್ದರು.

...........ಚೇಳೈರು ಖಂಡಿಗೆ ಜಾತ್ರಾ ಮಹೋತ್ಸವ 14,15ರಂದು

ತುಳುನಾಡಿನಲ್ಲಿ ಬೇಸಿಗೆಯ ಕೊನೆಯ ಜಾತ್ರೆಯಾಗಿರುವ ಚೇಳೈರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವ 14 ಹಾಗೂ 15ರಂದು ಜರುಗಲಿದೆ. 14ರಂದು ಬೆಳಗ್ಗೆ 7ಕ್ಕೆ ಮೀನು ಹಿಡಿಯುವಿಕೆ, ನಂತರ ಮೂಲಸ್ಥಾನದಲ್ಲಿ ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 9 ಕ್ಕೆ ಬ್ರಹ್ಮಸ್ಥಾನದಲ್ಲಿ ತಂಬಿಲ, ಕುಮಾರ ಸಿರಿಗಳ ದರ್ಶನ, ದೈವಗಳ ಭಂಡಾರ ಮೂಲಸ್ಥಾನಕ್ಕೆ ಹೋಗುವ ಆಚರಣೆ ನಡೆಯುುವುದು. 15ರಂದು ಬೆಳಗ್ಗೆ 5ಕ್ಕೆ ಧರ್ಮರಸು ಉಳ್ಳಾಯ, ಇಷ್ಟದೇವತೆ, ಬೊಬ್ಬರ್ಯ, ಪರಿವಾರ ದೈವಗಳಿಗೆ ನೇಮೋತ್ಸವ, ನಂತರ ನಾಗದೇವರಿಗೆ ತಂಬಿಲ, ಜಾರಂತಾಯ ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ, ಕೋರ್ದಬ್ಬು ದೈವದ ಭೇಟಿ, ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಜಾತ್ರೆಯ ಸಂದರ್ಭ ವಿಶೇಷವಾಗಿ ತುಳುನಾಡ ಸಂತೆ ಎರಡು ದಿನ ಜರಗಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ತೋಕೂರುಗುತ್ತು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ